ಸುಳ್ಯ-ಕೊಡಿಯಾಲಬೈಲು-ದುಗಲಡ್ಕ ರಸ್ತೆ ಅಭಿವೃದ್ಧಿಯ ಭಿಕ್ಷೆ….! | ರಸ್ತೆ ದುರಸ್ತಿಗೆ ಆಗ್ರಹಿಸಿ‌ ಸುಳ್ಯ ನಗರ ಪಂಚಾಯತ್ ಮುಂದೆ ಧರಣಿ | ನಿಧಿ ಸಂಗ್ರಹಣೆಯ ಮೂಲಕ ಆಡಳಿತಕ್ಕೆ ಟಾಂಗ್‌ |

March 14, 2023
1:33 PM

ಸುಳ್ಯ – ಕೊಡಿಯಾಲಬೈಲು – ದುಗಲಡ್ಕ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಸಾರ್ವಜನಿಕರು ದುರಸ್ತಿಗೆ ಬೇಡಿಕೆಯ ಭಿಕ್ಷೆಯನ್ನು  ಆಡಳಿತದ ಮುಂದೆ ಇರಿಸಿದರು. ಕಳೆದ 25 ವರ್ಷಗಳಿಂದಲೂ ಈ ರಸ್ತೆ ದುರಸ್ತಿಗೆ ಮನವಿ ಸಲ್ಲಿಸುತ್ತಲೇ ಬಂದ ಜನರು ಇದೀಗ  ನಿಧಿ ಸಂಗ್ರಹಣಾ ಅಭಿಯಾನದ ಅಣಕು ಅಭಿಯಾನದ ಮೂಲಕ ಸುಳ್ಯ ನಗರ ಪಂಚಾಯತ್‌ ಮುಂದೆ ಪ್ರತಿಭಟನಾ ಸಭೆಯನ್ನು  ನಡೆಸಿದರು.

ನೂರಾರು ಸಂಖ್ಯೆಯಲ್ಲಿ ರಸ್ತೆ ಫಲಾನುಭವಿಗಳು  ಮೆರವಣಿಗೆಯಲ್ಲಿ ಆಗಮಿಸಿದರು. ಸಭೆಯಲ್ಲಿ ಮಾತನಾಡಿದ  ಗಣೇಶ್ ಭಟ್ “ಸುಳ್ಯ – ಕೊಡಿಯಾಲಬೈಲು – ದುಗಲಡ್ಕ ರಸ್ತೆ ಅಭಿವೃದ್ಧಿಗೆ ಕಳೆದ ಅನೇಕ ಸಮಯಗಳಿಂದ ಮನವಿ ಸಲ್ಲಿಸುತ್ತಲೇ ಬಂದಿದ್ದರೂ ಕೂಡಾ ಸಂಪೂರ್ಣ ದುರಸ್ತಿ ಕಾರ್ಯ ನಡೆಯಲಿಲ್ಲ.  ಹಲವು ಭರವಸೆಗಳು ಸಿಕ್ಕಿದರೂ ಇದುವರೆಗೂ ಆಗಿಲ್ಲ. ಶಾಸಕರು ಈ ರಸ್ತೆ ಅಭಿವೃದ್ಧಿ ಮಾಡಬಹುದೆಂದು ನಿರೀಕ್ಷಿಸಿದ್ದೆವು, ಮಂತ್ರಿಯಾದರೂ  ನಿರೀಕ್ಷಿತ ಮಟ್ಟದ ಕೆಲಸ ಮಾಡಿಲ್ಲ ಎಂದು‌ ಹೇಳಿದರು.

ಉದ್ಯಮಿ ಸುರೇಶ್ ಕಮಿಲ ಮಾತನಾಡಿ “ಸುಳ್ಯದಲ್ಲಿ ರಸ್ತೆಗಳ ಅಭಿವೃದ್ಧಿ ಆಗುತ್ತಿಲ್ಲ. ಮೂಲಭೂತ ಬೇಡಿಕೆ, ವ್ಯವಸ್ಥೆ ಅದು. ಈಗ ನಮ್ಮ ರಸ್ತೆ ದುರಸ್ತಿಯಾಗದೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು.

ಸೀತಾನಂದ ಮಾತನಾಡಿ ಹೋರಾಟ ಆರಂಭವಾದಾಗ ಗುದ್ದಲಿ ಪೂಜೆ ನಡೆಯುತ್ತದೆ, 9 ಕಿಮೀ ರಸ್ತೆಯಲ್ಲಿ  2 ಕಿಮೀ ಮಾತ್ರಾ ಅಭಿವೃದ್ಧಿ ಆದರೆ ಸಾಕೇ ಎಂದು ಪ್ರಶ್ನಿಸಿದರು.

ನ್ಯಾಯವಾದಿ ದಿನೇಶ್ ಮಡಪ್ಪಾಡಿ , ಕೃಷಿಕ ಸುರೇಶ್ ಅಮೈ , ದುಗಲಡ್ಕದ ಬಾಲಕೃಷ್ಣ ನಾಯರ್ ಮೊದಲಾದವರು ಮಾತನಾಡಿದರು.

ಸಭೆಯ ಬಳಿಕ ನ.ಪಂ. ಎದುರು‌ ಇಡಲಾಗಿದ್ದ ನಿಧಿ ಸಂಗ್ರಹಣಾ ಡಬ್ಬಿಗೆ ಸೇರಿದವರು ಹಣ ಹಾಕಿದರು.

ಕೇಸರಿ ಶಾಲು ಹಾಕಿ ಬಂದ ಪ್ರತಿಭಟನಾಕಾರರು...!
ಈ ರಸ್ತೆಗಾಗಿ ಹೋರಾಟ ಆರಂಭವಾದಾಗ ಅದು ಕಾಂಗ್ರೆಸ್‌ ಹೋರಾಟ ಎಂದು ಕೆಲವು ನಾಯಕರು ಹೇಳಿದ್ದರು. ಇದಕ್ಕಾಗಿ ನಾವು ಈ ಹೋರಾಟದಲ್ಲಿ ಯಾವುದೇ ರಾಜಕೀಯ ಮಾಡಿಲ್ಲ, ರಾಜಕೀಯ ರಹಿತವಾಗಿ ಹೋರಾಟ ಮಾಡುತ್ತಿದ್ದೇವೆ. ಮೂಲಭೂತ ವ್ಯವಸ್ಥೆಗಾಗಿ ಬೇಡಿಕೆ ಇದೆ. ಹಾಗಿದ್ದರೂ ಇದಕ್ಕೆ ರಾಜಕೀಯ ಬಣ್ಣ ನೀಡಿದ್ದಾರೆ. ಇಲ್ಲಿನ ಬಹುಪಾಲು ಮಂದಿ ಈಗಿನ ಆಡಳಿತ ಪಕ್ಷದ ಪರವೇ ಕೆಲಸ ಮಾಡಿದವರು ಎಂದು ಆಕ್ರೋಶದಿಂದ ಪ್ರತಿಭಟನಾ ಸಭೆಗೆ ಆಗಮಿಸುವ ವೇಳೆ ಕೇಸರಿ ಶಾಲು ಹಾಕಿ ಕೆಲವರು ಆಗಮಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನೈಸರ್ಗಿಕ ಕೃಷಿಯಿಂದ ರೈತರ ಆದಾಯ ಹೆಚ್ಚಳ
March 4, 2026
10:56 AM
by: ಮಿರರ್‌ ಡೆಸ್ಕ್
ಭಾರತದಲ್ಲಿ ಮಳೆಗಾಲದ ತೀವ್ರತೆ ಹೆಚ್ಚಳ | ತಾಪಮಾನ ಏರಿಕೆಯಿಂದ ‘ಸೂಪರ್ ಚಾರ್ಜ್’ ಆಗುತ್ತಿರುವ ಮಾರುತ
March 4, 2026
7:27 AM
by: ದ ರೂರಲ್ ಮಿರರ್.ಕಾಂ
ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರದ ಕಠಿಣ ಕ್ರಮ : 468 ಪ್ರಕರಣ ದಾಖಲು
March 3, 2026
10:34 PM
by: ಮಿರರ್‌ ಡೆಸ್ಕ್
ಸುಸ್ಥಿರ ಕೃಷಿ ಮತ್ತು ‘ತ್ಯಾಜ್ಯದಿಂದ ಸಂಪತ್ತು’ ಮಾದರಿಗೆ ಐಸಿಎಆರ್ ಸಭೆಯಲ್ಲಿ ಒತ್ತು
March 3, 2026
9:51 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror