Advertisement
ಸುದ್ದಿಗಳು

ಸುಳ್ಯ ನಗರ ಪಂಚಾಯತ್ | ಸುಳ್ಯ ನಗರದ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಬದ್ಧ | ಕೆಲವರು ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ | ನಗರ ಪಂಚಾಯತ್‌ ಅಧ್ಯಕ್ಷರ ಹೇಳಿಕೆ |

Share
ಸುಳ್ಯ ನಗರ ಪಂಚಾಯತ್ ನ ಅವರಣದಲ್ಲಿರುವ ಕಸದ ವಿಲೇವಾರಿಗೆ ಸಂಬಂಧಿಸಿದಂತೆ  ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದು ಈ ಬಗ್ಗೆ ನಗರ ಪಂಚಾಯತ್‌ ಅಧ್ಯಕ್ಷ ವಿನಯ ಕುಮಾರ್‌ ಕಂದಡ್ಕ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸುಳ್ಯ ನಗರ ಪಂಚಾಯತ್ ಆವರಣದಲ್ಲಿ 2016 ರಿಂದಲೂ ಕಸ ಸಂಗ್ರಹವಾಗುತ್ತಿದ್ದು ಪಂಚಾಯತ್ ಗೆ ಕಸ ವಿಲೇವಾರಿಗೆ ನಿಗದಿಗೊಳಿಸಿದ ಕಲ್ಚರ್ಪೆ ಯಲ್ಲಿ ಅರಣ್ಯ ಇಲಾಖೆಯ ತಕರಾರಿನ ಕಾರಣದಿಂದಾಗಿ ಹಾಗೂ ಹಿಂದೆ ಅವೈಜ್ಞಾನಿಕವಾಗಿ ಕಸವನ್ನು ರಾಶಿ ಹಾಕಿದ ಕಾರಣದಿಂದ ಸ್ಥಳೀಯರ ಪ್ರತಿಭಟನೆ ಯಿಂದಾಗಿ ಕಸ ವಿಲೇವಾರಿಗೆ ಸ್ಥಳವಿಲ್ಲದೆ ನ ಪಂ ಆವರಣದಲ್ಲಿ ಕಸವನ್ನು ಶೇಖರಿಸಲಾಗಿತ್ತು.

ಪ್ರಸ್ತುತ ಆಡಳಿತವು ಅಧಿಕಾರಕ್ಕೆ ಬಂದ ಬಳಿಕ ಕಸ ವಿಲೇವಾರಿಗೆ ಅನೇಕ ವೈಜ್ಞಾನಿಕ ಪ್ರಯೋಗಗಳನ್ನು ಮಾಡಿರುತ್ತದೆ.
ಅಲ್ಲದೆ ಪಂಚಾಯತ್ ಆವರಣದಲ್ಲಿನ ಕಸವನ್ನು ವಿಲೇ ಮಾಡುವರೇ ಸತತ ಪ್ರಯತ್ನ ಮಾಡಿದ್ದು ಕಸವನ್ನು ವೈಜ್ಞಾನಿಕ ವಿಲೇ ಮಾಡುವ ಏಜನ್ಸಿ ಗಳು ಮುಂದೆ ಬಂದಿದ್ದು ಜಿಲ್ಲಾಧಿಕಾರಿಗಳ ಅನುಮೋದನೆ ಬಳಿಕ ಮೇ 5 ರಂದು ಟೆಂಡರ್ ಕರೆಯಲಾಗಿದ್ದು ಮೇ 12 ಟೆಂಡರ್ ಗೆ ಕೊನೆಯ ದಿನಾಂಕವಾಗಿರುತ್ತದೆ. ಅತ್ಯಂತ ಕಡಿಮೆ ಬಿಡ್ ಕರೆದವರ ಟೆಂಡರ್ ಖಾಯಂ ಗೊಳಿಸಿ ಕಸವನ್ನು ವೈಜ್ಞಾನಿಕವಾಗಿ ವಿಲೇ ಮಾಡುವವರಿಗೆ ಕೊಂಡೊಯ್ಯಲು ನೀಡಲಾಗುವುದು. ಮೇ ತಿಂಗಳ ಅಂತ್ಯದೊಳಗಾಗಿ ಈ ಎಲ್ಲಾ ಪ್ರಕ್ರಿಯೆಗಳು ಮುಗಿಯುವ ನಿರೀಕ್ಷೆ ಇದ್ದು ಈ ಮಧ್ಯೆ ಕಸ ಖಾಲಿಯಾಗುವ ಸುಳಿವು ದೊರೆತ ಕೆಲವರು ಈ ಕ್ರೆಡಿಟ್ ನ್ನು ತಮ್ಮದಾಗಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸಾಪ್ ಗುಂಪುಗಳಲ್ಲಿ ಸಮಾಜ ಸುಧಾರಕರಂತೆ ತಮ್ಮನ್ನು ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇನ್ನು ಕೆಲವರು ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ. ಇನ್ನೂ ಕೆಲವರು ಕಸ ಸಾಗಾಟವಾಗದಂತೆ ತಡೆಯಲು ಹಿಂಬಾಗಿಲ ಪ್ರಯತ್ನವನ್ನು ಮಾಡುತ್ತಿದ್ದಾರೆ. ಎಂದು ವಿನಯ ಕುಮಾರ್‌ ಕಂದಡ್ಕ ಹೇಳಿದ್ದಾರೆ.

ಕಸ ವಿಲೇವಾರಿ ಎಂಬುದು ಅತ್ಯಂತ ಸೂಕ್ಶ್ಮ ವಿಷಯವಾಗಿದ್ದು ಎಲ್ಲಾ ನಿಯಮಗಳನ್ನು ಪಾಲಿಸಿಯೇ ಈ ಪ್ರಕ್ರಿಯೆಗಳು ನಡೆದಿರುವುದರಿಂದ ತಡವಾಗಿದೆಯೇ ವಿನಃ ಬೇರ್ಯಾವುದೇ ಕಾರಣದಿಂದಲ್ಲ. ಈಗಾಗಲೇ ತಿಳಿಸಿದಂತೆ ನಗರದ ಮೂಲಭೂತ ಸಮಸ್ಯೆಗಳ ನಿವಾರಣೆ ನಮ್ಮ ಬದ್ಧತೆಯಾಗಿದ್ದು ಇದನ್ನು ಪೂರೈಸಲು ಆಡಳಿತವು ಬದ್ದವಾಗಿರುತ್ತದೆ ಎಂದು ವಿನಯ ಕುಮಾರ್ ಹೇಳಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ತಾತ್ಕಾಲಿಕ ಮುಂದೂಡಿಕೆ | ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…

1 hour ago

ಬರ್ಮಾ ಅಡಿಕೆ ಕಳ್ಳಸಾಗಣೆ ವಿರುದ್ಧ ಇಡಿ ಬಿಗಿ ಕ್ರಮ – ಇಬ್ಬರು ಉದ್ಯಮಿಗಳ ಮನೆಗಳ ಮೇಲೆ ದಾಳಿ

ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್‌ನ…

2 hours ago

ದೇಹ–ಮನಸ್ಸು–ಆತ್ಮದ ಸಮತೋಲನವೇ ನಿಜವಾದ ಆರೋಗ್ಯ: ಆಯುರ್ವೇದದ ಪರಮ ಗುರಿ ಆತ್ಮಜ್ಞಾನ – ರಾಘವೇಶ್ವರ ಶ್ರೀ

ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…

1 day ago

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

2 days ago