Advertisement
ಸುದ್ದಿಗಳು

ಸಲ್ಫ್ಯೂರಿಕ್ ಆಸಿಡ್ ಕೊರತೆ – ಕಾಪರ್‌ಸಲ್ಪೇಟ್‌ ಮೇಲೂ ಹೊಡೆತ – ಕೃಷಿಕರು ಗಮನಿಸಬೇಕಾದ ವಿಷಯ…

Share

ಜಾಗತಿಕ ಮಟ್ಟದಲ್ಲಿ ಸಲ್ಫ್ಯೂರಿಕ್ ಆಸಿಡ್ ಕೊರತೆ ಉಂಟಾಗಿರುವುದು ತಾಮ್ರ ಸೇರಿದಂತೆ ಹಲವು ಪ್ರಮುಖ ಖನಿಜಗಳ ಉತ್ಪಾದನಾ ವೆಚ್ಚವನ್ನು  ಹೆಚ್ಚಿಸಿದೆ. ಅಡಿಕೆ ಬೆಳೆಗಾರರಿಗೆ ಅಗತ್ಯವಾಗಿರುವ ಕಾಪರ್‌ಸಲ್ಪೇಟ್‌ ಮೇಲೂ ಮುಂದೆ ಪರಿಣಾಮ ಬೀರಲಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕೃಷಿಕರು ಎಚ್ಚರ ವಹಿಸಬೇಕಾದ ಅಗತ್ಯ ಇದೆ.

ವರದಿಗಳ ಪ್ರಕಾರ, ಸಲ್ಫರ್ ಬೆಲೆಗಳು 50% ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಸಲ್ಫ್ಯೂರಿಕ್ ಆಸಿಡ್ ಬೆಲೆಗಳು ವಿಪರೀತ ಏರಿಕೆ ಕಂಡಿವೆ. ಇದರ ಪರಿಣಾಮವಾಗಿ ಬ್ಯಾಟರಿ ತಯಾರಿಕೆಗೆ ಅಗತ್ಯವಿರುವ ಲಿಥಿಯಂ ಹಾಗೂ ನಿಕೆಲ್ ಉತ್ಪಾದನಾ ಘಟಕಗಳ ಮೇಲೆ ನೇರ ಪರಿಣಾಮ ಬಿದ್ದಿದೆ.

ಲಿಥಿಯಂ ಸಂಸ್ಕರಣೆಯಲ್ಲಿ ಹಿಂದೆ ಒಟ್ಟು ಉತ್ಪಾದನಾ ವೆಚ್ಚದ ಕೇವಲ 3% ಮಾತ್ರ ಸಲ್ಫ್ಯೂರಿಕ್ ಆಸಿಡ್ ಪಾಲು ಇತ್ತು. ಆದರೆ ಈಗ ಅದು 11% ಕ್ಕೆ ಏರಿಕೆಯಾಗಿದ್ದು, ಇಂಧನ ವೆಚ್ಚವನ್ನೇ ಮೀರಿಸಿ ಅತಿದೊಡ್ಡ ವೆಚ್ಚದ ಅಂಶವಾಗಿ ಪರಿಣಮಿಸಿದೆ. ಜಾಗತಿಕವಾಗಿ ಉತ್ಪಾದನೆಯಾಗುವ ಲಿಥಿಯಂ, ಕೋಬಾಲ್ಟ್, ಅಪರೂಪದ ಭೂ ಲೋಹಗಳು ಹಾಗೂ ಶುದ್ಧೀಕರಿಸಿದ ಫಾಸ್ಫೋರಿಕ್ ಆಸಿಡ್ ಉತ್ಪಾದನೆಯ ಅರ್ಧಕ್ಕಿಂತ ಹೆಚ್ಚು ಪ್ರಮಾಣವು ಸಲ್ಫರ್ ಹಾಗೂ ಸಲ್ಫ್ಯೂರಿಕ್ ಆಸಿಡ್ ಪೂರೈಕೆಯ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಪೂರೈಕೆ ವ್ಯತ್ಯಯ ಮುಂದುವರಿದರೆ ಕೆಲವು ಸಂಸ್ಕರಣಾ ಘಟಕಗಳು ಉತ್ಪಾದನೆ ಕಡಿಮೆ ಮಾಡುವ ಅಥವಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಾಧ್ಯತೆಯೂ ಇದೆ ಎಂದು ವರದಿ ಎಚ್ಚರಿಸಿದೆ.

ವಿಶೇಷವಾಗಿ ವಿಶ್ವದ ಪ್ರಮುಖ ನಿಕೆಲ್ ಉತ್ಪಾದಕ ರಾಷ್ಟ್ರವಾದ ಇಂಡೋನೇಷ್ಯಾ ತನ್ನ ಸಲ್ಫರ್ ಆಮದುಗಳಲ್ಲಿ ಹೆಚ್ಚಿನ ಪ್ರಮಾಣವನ್ನು ಮಧ್ಯಪ್ರಾಚ್ಯದಿಂದಲೇ ಪಡೆಯುತ್ತದೆ. ಹಾರ್ಮುಜ್ ಜಲಸಂಧಿಯ ಮೂಲಕ ಜಾಗತಿಕ ಸಮುದ್ರ ಮಾರ್ಗದ ಸಲ್ಫರ್ ವ್ಯಾಪಾರದ ಸುಮಾರು ಅರ್ಧ ಭಾಗ ಸಾಗುವುದರಿಂದ ಈ ಪ್ರದೇಶದ ಯಾವುದೇ ಅಡಚಣೆ ಜಾಗತಿಕ ಖನಿಜ ಸರಪಳಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ತಜ್ಞರ ಪ್ರಕಾರ, ಸಲ್ಫ್ಯೂರಿಕ್ ಆಸಿಡ್ ಕೊರತೆಯು ಕೇವಲ ಖನಿಜ ಕ್ಷೇತ್ರವನ್ನಷ್ಟೇ ಅಲ್ಲದೆ ರಾಸಾಯನಿಕ ಗೊಬ್ಬರ ಉತ್ಪಾದನೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಜಾಗತಿಕ ಸಲ್ಫ್ಯೂರಿಕ್ ಆಸಿಡ್ ಬಳಕೆಯ ಸುಮಾರು 60% ಗೊಬ್ಬರ ಕ್ಷೇತ್ರದಲ್ಲೇ ನಡೆಯುತ್ತಿರುವುದರಿಂದ ಕೃಷಿ ಉತ್ಪಾದನಾ ವೆಚ್ಚಗಳ ಮೇಲೂ ಒತ್ತಡ ಹೆಚ್ಚಾಗಬಹುದು. ಕಾಪರ್‌ಸಲ್ಪೇಟ್‌ ತಯಾರಿಕೆ ಹಾಗೂ ಉತ್ಪಾದನೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಮೇ 1ರಿಂದ ಚೀನಾ ಸಲ್ಫ್ಯೂರಿಕ್ ಆಸಿಡ್ ರಫ್ತನ್ನು ಸ್ಥಗಿತಗೊಳಿಸಿದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಪರಿಣಾಮ ಕಾಣಿಸಿಕೊಂಡಿದೆ. ತಜ್ಞರ ಪ್ರಕಾರ, ಒಂದು ಟನ್ ತಾಮ್ರವನ್ನು ಸಲ್ಫೈಡ್ ಕಚ್ಚಾ ವಸ್ತುವಿನಿಂದ ಉತ್ಪಾದಿಸುವಾಗ ಸುಮಾರು 3 ರಿಂದ 3.5 ಟನ್ ಸಲ್ಫ್ಯೂರಿಕ್ ಆಸಿಡ್ ಉತ್ಪಾದಿಸುವ ಸಾಮರ್ಥ್ಯವಿದೆ. ತಾಮ್ರ ಸಂಸ್ಕರಣೆಯಲ್ಲಿ ಸಲ್ಫ್ಯೂರಿಕ್ ಆಸಿಡ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಜಾಗತಿಕವಾಗಿ ವರ್ಷಕ್ಕೆ ಸುಮಾರು 260 ಮಿಲಿಯನ್ ಟನ್ ಸಲ್ಫ್ಯೂರಿಕ್ ಆಸಿಡ್ ಉತ್ಪಾದನೆಯಾಗುತ್ತಿದ್ದು, ಅದರ ಸುಮಾರು 60% ಗೊಬ್ಬರ ಉತ್ಪಾದನೆಗೆ ಬಳಕೆಯಾಗುತ್ತದೆ. ಉಳಿದ ಪ್ರಮಾಣ ತಾಮ್ರ, ನಿಕೆಲ್, ಯುರೇನಿಯಂ, ಸೆಮಿಕಂಡಕ್ಟರ್ ಹಾಗೂ ಪೆಟ್ರೋಲಿಯಂ ಸಂಸ್ಕರಣೆಗೆ ಅಗತ್ಯವಾಗಿದೆ. ಹೀಗಾಗಿ ಸಲ್ಫರ್ ಪೂರೈಕೆಯಲ್ಲಿನ ವ್ಯತ್ಯಯ ಅನೇಕ ಕೈಗಾರಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ.

ಅಡಿಕೆ ಬೆಳೆಗಾರರಿಗೆ ಮಳೆಗಾಲದಲ್ಲಿ ಕೊಳೆರೋಗ ತಡೆಗ, ನಿಯಂತ್ರಣಕ್ಕೆ ಕಾಪರ್‌ಸಲ್ಪೇಟ್‌ ಅಗತ್ಯವಾಗಿ ಬೇಕಾಗಿದೆ. ಇದೀಗ ಎಲೆಚುಕ್ಕಿ ರೋಗಕ್ಕೂ ಕಾಪರ್‌ ಸಲ್ಪೇಟ್ ಬಳಕೆಗೆ ಶಿಫಾರಸು ಇದೆ. ಸದ್ಯಕ್ಕೆ ಕಾಪರ್‌ಸಲ್ಪೇಟ್‌ ಸಮಸ್ಯೆ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕಾಪರ್‌ಸಲ್ಪೇಟ್‌ಗೆ ಪರ್ಯಾಯವಾದ, ಬೋರ್ಡೋಗೆ ಪರ್ಯಾಯವಾದ ಔಷಧಿಗಳ ಕಡೆಗೆ ಗಮನಹರಿಸಬೇಕಾದ ಅವಶ್ಯಕತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

A global shortage of sulphuric acid is significantly increasing production costs for critical minerals such as lithium, nickel, cobalt and copper. Rising sulphur prices, supply disruptions and geopolitical tensions in the Middle East have pushed sulphuric acid prices sharply higher, forcing some mineral processors to reduce output and raising concerns over global battery supply chain

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?

ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್‌ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…

5 hours ago

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…

13 hours ago

ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…

14 hours ago

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

1 day ago

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

2 days ago