Advertisement
ವಿಶೇಷ ವರದಿಗಳು

ಸೂಚನೆಯೇ ಇಲ್ಲದೆ ನಿನ್ನೆಯ ಮಳೆ ಸುರಿದದ್ದು ಹೇಗೆ..? | ಕರಾವಳಿ ಜಿಲ್ಲೆಯಲ್ಲಿ ಸುರಿದ ಬೇಸಿಗೆ ಮಳೆ ಎಷ್ಟು…? | ಮೊದಲ ಮಳೆ 100 ಮಿಮೀ ದಾಟಿತ್ತು…! |

Share

ಕರಾವಳಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ತಾಪಮಾನ ಏರಿಕೆಯಾಗುತ್ತಿದೆ.ಈ ನಡುವೆ ಬುಧವಾರ ಸಂಜೆ ಕರಾವಳಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ಮಂಗಳೂರಿನ ಸುರತ್ಕಲ್‌ ಪ್ರದೇಶದಲ್ಲಿ 100 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ಹಲವು ಪ್ರದೇಶದಲ್ಲಿ 25 ಮಿಮೀಯಷ್ಟು ಮಳೆಯಾಗಿದೆ. ಗಾಳಿಯ ಕಾರಣದಿಂದ ಕೆಲವು ಪ್ರದೇಶದಲ್ಲಿ ಕೃಷಿಗೆ ಹಾನಿಯಾಗಿದೆ. ಅಡಿಕೆ ಮರ ಗಾಳಿಯ ಹೊಡೆತದಿಂದ ಉರುಳಿದೆ. ಬೇಸಗೆಯ ಮೊದಲ ಮಳೆ ಭರ್ಜರಿಯಾಗಿಯೇ ಸುರಿದಿದೆ.………ಮುಂದೆ ಓದಿ……..

ಕೃಷಿಕರ ಮಳೆ ಮಾಹಿತಿ ಗುಂಪಿನ ಸದಸ್ಯರ ಮಳೆ ಮಾಪಕದ ಪ್ರಕಾರ ಮಂಗಳೂರು ಬಳಿಯ ಸುರತ್ಕಲ್‌ನಲ್ಲಿ ಅಧಿಕ ಮಳೆಯಾಗಿದೆ. ಸುರತ್ಕಲ್‌ ನಲ್ಲಿ 105 ಮಿಮೀ ಮಳೆ ದಾಖಲಾಗಿದೆ. ಉಳಿದಂತೆ ಸುಳ್ಯದ ಕಲ್ಲಾಜೆ 41 ಮಿಮೀ, ಸುಬ್ರಹ್ಮಣ್ಯದಲ್ಲಿ 60 ಮಿಮೀ, ಪುತ್ತೂರಿನ ಬಂಗಾರಡ್ಕದಲ್ಲಿ 20 ಮಿಮೀ,  ಕಡಬದ ಕೋಡಿಂಬಾಳದಲ್ಲಿ 23 ಮಿಮೀ, ಬಂಟ್ವಾಳದಲ್ಲಿ 31 ಮಿಮೀ,  ಕುಂಬಳೆಯಲ್ಲಿ 5 ಮಿಮೀ, ಗುತ್ತಿಗಾರಿನ ಮೆಟ್ಟಿನಡ್ಕದಲ್ಲಿ 28 ಮಿಮೀ, ಬಜಗೋಳಿಯಲ್ಲಿ 13 ಮಿಮೀ, ಸುಳ್ಯದ ಬಾಳುಗೋಡಿನಲ್ಲಿ 30 ಮಿಮೀ, ಸುಳ್ಯ ನಗರದಲ್ಲಿ 5 ಮಿಮೀ, ಬಳ್ಪದಲ್ಲಿ 10 ಮಿಮೀ, ಬೆಳ್ತಂಗಡಿಯಲ್ಲಿ 50 ಮಿಮೀ, ಚೆಂಬು 18 ಮಿಮೀ ಮಳೆಯಾಗಿದೆ.

Advertisement

ಮಳೆಯ ಕಾರಣದಿಂದ ಬೆಳ್ತಂಗಡಿ ಹಾಗೂ ಕೆಲವು ಕಡೆ ಅಡಿಕೆ ಮರಗಳು ಗಾಳಿಯ ಹೊಡೆತದಿಂದ ಉರುಳಿದೆ. ಕೃಷಿಕರಿಗೆ ನಷ್ಟ ಸಂಭವಿಸಿದೆ. ಕೃಷಿಕ ಬಾಲ್ಯ ಶಂಕರ್‌ ಭಟ್‌ ಅವರು ಅಡಿಕೆ ಮರ ಉರುಳಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

Advertisement

ಮುನ್ಸೂಚನೆ ಪ್ರಕಾರ ತುಂತುರು ಮಳೆಯ ಸಾಧ್ಯತೆ ಇತ್ತು.ಆದರೆ ಧಾರಾಕಾರ ಮಳೆಯ ಸಾಧ್ಯತೆ ಇರಲಿಲ್ಲ. ಆದರೆ ಎಲ್ಲಾ ಹವಾಮಾನ ವಿಶ್ಲೇಷಣೆಗಳನ್ನೂ ಮೀರಿ ಮಳೆಯಾಗಿದೆ. ಈ ಬಗ್ಗೆ ಹವಾಮಾನ ವಿಶ್ಲೇಷಕ ಸಾಯಿಶೇಖರ್‌ ಕರಿಕಳ ಅವರ ಪ್ರಕಾರ ಪ್ರಕೃತಿಯ ಲೆಕ್ಕಾಚಾರವೇ ಬೇರೆ ಇರುತ್ತದೆ ಎನ್ನುತ್ತಾರೆ.

ಸಾಯಿಶೇಖರ್ , ಕರಿಕಳ
ಪ್ರಕೃತಿಯನ್ನು ಅಳೆಯಲು ಯಾರಿಂದಲೂ ಸಾಧ್ಯವಿಲ್ಲ. ನಿನ್ನೆಯ ಅಷ್ಟೊಂದು ಪ್ರಮಾಣದ ಮಳೆಯು ಯಾವ ಮುನ್ಸೂಚನೆಯಲ್ಲೂ ಇರಲಿಲ್ಲ. ನಿರೀಕ್ಷೆಯೂ ಇರಲಿಲ್ಲ. ಬೆಳಿಗ್ಗೆ ಚಳಿ, ಮಧ್ಯಾಹ್ನ 3 ಗಂಟೆಯ ತನಕವೂ ತೇವಾಂಶ ಸಾಮಾನ್ಯಕ್ಕಿಂತ ಕಡಿಮೆಯೇ ಇತ್ತು. ಆದರೆ 4 ಗಂಟೆಯ ಸುಮಾರಿಗೆ ಬೀಸಿದ ಒಂದು ಗಾಳಿಯ ಪ್ರಭಾವದಿಂದ ತೇವಾಂಶ ಇದ್ದಕ್ಕಿದ್ದ ಹಾಗೆ ಏರತೊಡಗಿತು.
Advertisement

“ಮೋಡಗಳು ಸಮುದ್ರದಲ್ಲಿ ಉತ್ಪತ್ತಿಯಾಗಿ ಗಾಳಿಯ ಮೂಲಕ ಭೂ ಭಾಗಕ್ಕೆ ಬಂದು ಮಳೆಯಾಗುತ್ತೆ” ಅಂತ ನಾವು ಶಾಲಾ ಸಮಯದಲ್ಲಿ ಕಲಿತದ್ದು. ಆದರೆ ವಿಚಿತ್ರ ನಿನ್ನೆಯ ಮಳೆಯ ಕೇಂದ್ರ ಶಿರಾಡಿ ಹಾಗೂ ಮಡಿಕೇರಿ ಘಾಟಿಯ ಆಚೆ ಈಚೆ ಮಗ್ಗುಲ ಪ್ರದೇಶ.  ಅಲ್ಲಿಂದ ಮೋಡಗಳ ಮೆರವಣಿಗೆ ಒಂದು ಭಾಗ ಅರಬ್ಬಿ ಸಮುದ್ರದ ತೀರದ ವರೆಗೆ ತಲುಪಿದರೆ ಇನ್ನೊಂದು ಭಾಗ ಹಾಸನ, ತಿಪಟೂರು, ತುಮಕೂರು ದಾಟಿ ಪಾವಗಢದ ತನಕವೂ ಸಾಗಿದ ರೀತಿ ಅದ್ಭುತ.

ರಾತ್ರಿ ಪಾವಗಡದಿಂದ ” ಸರ್ ಮಿಂಚುತ್ತಿದೆ. ಮಳೆ ಬರ್ಬಹುದಾ” ಅಂತ ಕೇಳುವಾಗಲೇ ಗೊತ್ತಾಗಿದ್ದು. ಮೋಡದ ಬಾಲ ಅಲ್ಲಿಯ ತನಕವೂ ಬೆಳೆದಿದೆ ಅಂತ.

Advertisement

ಒಮ್ಮೆ ಮಳೆ ಬಂದು ಮತ್ತೆ ಮತ್ತೆ ತೇವಾಂಶಗಳು ಸೇರಿ ಸೇರಿ ಮಳೆಯ ಸರಣಿಯೇ ಉಂಟಾಗಿದೆ. ಹಾಗಂತ ಪ್ರತಿ ಬಾರಿ ಹೀಗಾಗುತ್ತಿದೆಯೇ? ಇಲ್ಲ. ಮಳೆ ಮೋಡಗಳ ಉತ್ಪತ್ತಿ ಹಾಗೂ ಅದು ಮಳೆಯಾಗಿ ಪರಿವರ್ತನೆಗೊಳ್ಳವ ರೀತಿಯ ವಿಷಯದ ಅಧ್ಯಯನದಲ್ಲಿ ಇನ್ನೂ ನಾವು ಹಿಂದೆ ಉಳಿದಿದ್ದೇವೆ ಅಂತ ನನ್ನ ಅಭಿಪ್ರಾಯ. ಅದನ್ನು ಸಂಬಂಧ ಪಟ್ಟ ಇಲಾಖೆಗಳಾಗಲಿ ಅಥವಾ ವಿಜ್ಞಾನ ವಿಭಾಗಗಳಾಗಲಿ ವೈಜ್ಞಾನಿಕವಾಗಿ ಅಧ್ಯಯನ ಮಾಡಿದರೆ ಮಾತ್ರ ನಿಖರವಾದ ಮಳೆಯ ಮುನ್ಸೂಚನೆ ನೀಡಲು ಸಾಧ್ಯ ವಾಗಬಹುದು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂಗಾರು ಮತ್ತಷ್ಟು ಚುರುಕು – ಕರಾವಳಿ ಕರ್ನಾಟಕದಲ್ಲಿ ಜೂನ್ 26 ರವರೆಗೆ ಭಾರೀ ಮಳೆ ಎಚ್ಚರಿಕೆ

ಕರಾವಳಿ ಕರ್ನಾಟಕದಲ್ಲಿ ಜೂನ್ 26ರವರೆಗೆ ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ…

22 hours ago

ಅಡಿಕೆ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮ – ಸರ್ಕಾರಕ್ಕೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಒತ್ತಾಯ

ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಕಾಪರ್ ಸಲ್ಫೇಟ್ ಕೊರತೆ, ಬೆಳೆ ವಿಮೆ ವಿಳಂಬ, ಕಳಪೆ…

24 hours ago

ಹವಾಮಾನ ವರದಿ | 23-06-2026 | ಕರ್ನಾಟಕದಲ್ಲಿ ಜೂನ್ 25 ರಿಂದ ಮುಂಗಾರು ಚುರುಕು? ಕರಾವಳಿ-ಮಲೆನಾಡಿನಲ್ಲಿ ಮಳೆ ಹೆಚ್ಚಳದ ನಿರೀಕ್ಷೆ

ಜೂನ್ 25ರಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಳ್ಳುವ ಸಾಧ್ಯತೆ ಇದೆ. ಕರಾವಳಿ ಮತ್ತು…

1 day ago

ಕೀಟನಾಶಕಗಳ ಅತಿಯಾದ ಬಳಕೆ ನಿಯಂತ್ರಣಕ್ಕೆ ನೈಸರ್ಗಿಕ ಕೃಷಿಯೇ ಮದ್ದು

ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಕೃಷಿ ಹಾಗೂ ಆರೋಗ್ಯಕ್ಕೆ ಹಾನಿಯಾಗುತ್ತಿದೆ…

2 days ago

ಭಾರೀ ಮಳೆ ಎಚ್ಚರಿಕೆ : 13 ರಾಜ್ಯಗಳಿಗೆ IMD ಅಲರ್ಟ್‌ | ಉಳಿದೆಡೆ ಉಷ್ಣ ಅಲೆ ಮುಂದುವರಿಕೆ

ದೇಶದ 13 ರಾಜ್ಯಗಳಿಗೆ ಐಎಂಡಿ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಕರಾವಳಿ ಕರ್ನಾಟಕ…

2 days ago

ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಆಡಳಿತ ಮಂಡಳಿಗೆ ಇಬ್ಬರ ನಾಮನಿರ್ದೇಶನ

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ…

2 days ago