ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳಮುಖಿಯರ ಸಮೀಕ್ಷೆ : ತೃತಿಯ ಲಿಂಗಿಗಳಿಗೆ ಸಿಗಲಿದೆ ಸರ್ಕಾರಿ ಸೌಲಭ್ಯ

March 7, 2023
10:04 AM

ನಮ್ಮಂತೆ ಮನುಷ್ಯರಾದ್ರು  ತಾವು ಮಾಡದ ತಪ್ಪಿಗಾಗಿ ಈ ಸಮಾಜದಲ್ಲಿ ಶಿಕ್ಷೆ ಅನುಭವಿಸಿ ಬದುಕುತ್ತಿರುವಾ ದೇವ ಮಾನವರಿವರು. ಸಮಾಜದಿಂದ ಧಿಕ್ಕರಿಸಲ್ಪಟ್ಟ ಇವರಿಗೆ ಎಲ್ಲರಂತಾ ಬದುಕು ದೂರದ ಮಾತು. ಆದರೆ ಇವರು ಸೂರು, ಕೆಲಸ, ತಮಗೆ ಬೇಕಾದ ಜೀವನ ಯಾವುದು ಇಲ್ಲಗಳ ನಡೆವೆ ಬದುಕು ಕಟ್ಟಿಕೊಂಡವರು ತೃತಿಯ ಲಿಂಗಿಗಳು.  ಅದೆಷ್ಟೋ ಸರ್ಕಾರಗಳು ಇವರಿಗೆ ಬದುಕಿನ ಭರವಸೆ ಮಾತ್ರ ಕೊಟ್ಟಿವೆ. ಕೆಲವೊಂದು ದಕ್ಕಿದೆ. ಆದ್ರೂ ಅವರ ಬದುಕು ಸುಧಾರಿಸಲಿಲ್ಲ.

Advertisement

ಇದೀಗ  ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಗಳ ಸಮೀಕ್ಷೆ ನಡೆಯಲಿದೆ. ರಾಜ್ಯದ ಮೈಸೂರು ಮತ್ತು ವಿಜಯಪುರ ಜಿಲ್ಲೆಗಳು ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಸಜ್ಜಾಗಿವೆ. ತೃತೀಯ ಲಿಂಗಿಗಳ ಜನಸಂಖ್ಯೆಯ ಕುರಿತು ಸ್ಪಷ್ಪ ಮಾಹಿತಿ ಪಡೆದುಕೊಳ್ಳಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಜೊತೆಗೆ, ತೃತೀಯ ಲಿಂಗಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.

ತೃತೀಯ ಲಿಂಗಿಗಳಿಂದಲೇ ತೃತೀಯ ಲಿಂಗಿಗಳ ಸಮೀಕ್ಷೆ
ಮಾರ್ಚ್ 10 ರಿಂದ 45 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ. ಸ್ವತಃ ತೃತೀಯ ಲಿಂಗಿಗಳೇ ಸಮೀಕ್ಷೆ ನಡೆಸಲಿದ್ದಾರೆ. ಸರ್ಕಾರ ನಡೆಸುತ್ತಿರುವ ಈ ತೃತೀಯ ಲಿಂಗಿಗಳ ಸಮೀಕ್ಷೆಯಲ್ಲಿ ಮೈಸೂರು ಜಿಲ್ಲೆಯಿಂದ 9 ತೃತೀಯ ಲಿಂಗಿಗಳು ಸಮೀಕ್ಷೆ ನಡೆಸುವ ತರಬೇತಿ ಪಡೆದುಕೊಂಡಿದ್ದಾರೆ. ಮೈಸೂರು ಮತ್ತು ವಿಜಯಪುರ ಜಿಲ್ಲೆಗಳ ತಾಲೂಕು ಮಟ್ಟದಲ್ಲಿ ತೃತೀಯ ಲಿಂಗಿಗಳಿಂದಲೇ ತೃತೀಯ ಲಿಂಗಿಗಳ ಸಮೀಕ್ಷೆ ನಡೆಸಲಾಗುವುದು ಎಂದು ಮೈಸೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು. ಬಿ ಮಾಹಿತಿ ನೀಡಿದ್ದಾರೆ.

ಗುರುತಿನ ಚೀಟಿ ವಿತರಣೆಯಿಂದ ಸರ್ಕಾರಿ ಸೌಲಭ್ಯ
ಈ ಸಮೀಕ್ಷೆ ನಡೆದ ನಂತರ ಭಾಗವಹಿಸಿದ ಎಲ್ಲ ತೃತೀಯ ಲಿಂಗಿ ವ್ಯಕ್ತಿಗಳಿಗೆ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಗುತ್ತದೆ. ಜೊತೆಗೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ತೃತೀಯ ಲಿಂಗಿಗಳಿಗೆ ಈ ಸಮೀಕ್ಷೆ ನೆರವಾಗಲಿದೆ ಎಂದು ಹೇಳಲಾಗಿದೆ.

ಮುಂಬೈ ಸೇರಿದಂತೆ ಇತರ ಮಹಾ ನಗರಗಳಿಗೆ ವಲಸೆ ಹೋದ ಮೈಸೂರು ಮತ್ತು ವಿಜಯಪುರ ಜಿಲ್ಲೆಗಳ ಮಂಗಳಮುಖಿಯರು ಸಮೀಕ್ಷೆ ನಡೆಯುವ ಸಮಯದಲ್ಲಿ ಜಿಲ್ಲೆಗೆ ಆಗಮಿಸುವಂತೆ ಮನವಿ ಮಾಡಲಾಗಿದೆ. ಈ ಸಮೀಕ್ಷೆಯಿಂದ ಮುಂದಿನ ದಿನಗಳಿಂದ ಮಂಗಳಮುಖಿಯರು ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ.  ಹೀಗಾಗಿ ಯಾವುದೇ ಕಾರಣಕ್ಕೂ ಸಮೀಕ್ಷೆಯಲ್ಲಿ ತಪ್ಪಿಸದೇ  ಪಾಲ್ಗೊಳ್ಳುವಂತೆ ಮೈಸೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು. ಬಿ ಮನವಿ ಮಾಡಿದ್ದಾರೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ
April 16, 2025
9:41 PM
by: ಡಾ.ಚಂದ್ರಶೇಖರ ದಾಮ್ಲೆ
ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ
April 16, 2025
8:40 PM
by: ದ ರೂರಲ್ ಮಿರರ್.ಕಾಂ
ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!
April 16, 2025
11:18 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |
April 16, 2025
10:50 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group