ಸಕ್ಕರೆಗಿಂತ ಸಿಹಿ ಇದು… | ಆದ್ರೆ ಡಯಾಬಿಟಿಸ್ ಇರುವವರಿಗೆ ಭಾರೀ ಒಳ್ಳೆಯದು | ಏನದು..? |

December 16, 2023
1:44 PM

ಸ್ಟೀವಿಯಾವು ಸ್ಟೀವಿಯಾ (Stevia) ಸಸ್ಯದ ಎಲೆಗಳಿಂದ ತಯಾರಿಸಿದ ಜನಪ್ರಿಯ ಸಕ್ಕರೆ(Sugar) ಬದಲಿಯಾಗಿದೆ. ಸ್ಟೀವಿಯಾ ಒಂದು ಗಿಡಮೂಲಿಕೆ. ಇದು ಸಕ್ಕರೆಯಂತೆ ಸಿಹಿಯಾಗಿರುತ್ತದೆ. ಇದನ್ನು ಸಿಹಿ ತುಳಸಿ (sweet tulasi)ಎಂದೂ ಕರೆಯುತ್ತಾರೆ. ಮನೆಯಲ್ಲಿ ಸುಲಭವಾಗಿ ಸ್ಟೀವಿಯಾ ಬೆಳೆಯಬಹುದು. ಇಂತಹ ಸ್ಟೀವಿಯಾ ಅದರ ಸಿಹಿ(Sweet) ರುಚಿಯಿಂದ ನಿಧಾನವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಚಹಾ(Tea), ಶರಬತ್ತು ಮತ್ತು ಇತರ ಸಿಹಿಕಾರಕಗಳಲ್ಲಿ ಸಕ್ಕರೆಯ ಬದಲು ಸ್ಟೀವಿಯಾ ಪುಡಿಯನ್ನು ಬಳಸಲಾಗುತ್ತದೆ. ಇದು ಸಿಹಿ ರುಚಿ ಇದ್ದರೂ, ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವುದಿಲ್ಲ. ಆದ್ದರಿಂದ ಇದನ್ನು ಮಧುಮೇಹಿಗಳು(Diabetes) ಸೇವಿಸಲು ಹೇಳಲಾಗುತ್ತಿದೆ.

Advertisement
Advertisement

ಸಂಸ್ಕರಿಸಿದ ಸಕ್ಕರೆಯನ್ನು ಯಾವುದೇ ಪೌಷ್ಟಿಕತಜ್ಞರು ಅಥವಾ ಆಹಾರ ತಜ್ಞರು ಆರೋಗ್ಯಕ್ಕೆ ಒಳ್ಳೆಯದು ಎನ್ನುವುದಿಲ್ಲ, ಸಾಮಾನ್ಯವಾಗಿ ಸಕ್ಕರೆಯನ್ನು ಮಧುಮೇಹ ರೋಗಿಯಾಗಿರಲಿ, ಹೃದ್ರೋಗ, ಚಯಾಪಚಯ ಅಸ್ವಸ್ಥತೆಗಳು, ಸ್ಥೂಲಕಾಯತೆ ಅಥವಾ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಶಿಫಾರಸು ಮಾಡುವುದಿಲ್ಲ . ಮಧುಮೇಹ ರೋಗಿಗಳಿಗೆ ಈ ಮೂಲಿಕೆ ತುಂಬಾ ಪ್ರಯೋಜನಕಾರಿ. ಇದು ಅತ್ಯಲ್ಪ ಕ್ಯಾಲೊರಿಗಳನ್ನು ಹೊಂದಿದೆ. ಸಕ್ಕರೆಯ ಬದಲು ಸ್ಟೀವಿಯಾವನ್ನು ಬಳಸಬಹುದು. ಚಹಾ ಅಥವಾ ಕಾಫಿ, ನಿಂಬೆ ಪಾನಕಗಳಿಗೆ ಸ್ಟೀವಿಯಾ ಸೇರಿಸಬಹುದು ಅಥವಾ ಮೊಸರಿಗೆ ಕೂಡ ಸೇರಿಸಬಹುದು.

ಚಹಾ ಮತ್ತು ಕಾಫಿಯನ್ನು ಸಿಹಿಗೊಳಿಸಲು ಸ್ಟೀವಿಯಾದ ಎಲೆಗಳನ್ನು ಬಳಸಲಾಗುತ್ತದೆ. ಸ್ಟೀವಿಯಾ ಎಲೆಗಳು ಉತ್ಕರ್ಷಣ ನಿರೋಧಕ ಅಂಶಗಳನ್ನು ಹೊಂದಿರುತ್ತವೆ. ಇದರಲ್ಲಿ ಕಬ್ಬಿಣ, ಪ್ರೋಟೀನ್, ಫೈಬರ್, ಪೊಟ್ಯಾಶಿಯಂ, ಮೆಗ್ನೀಶಿಯಂ, ಸೋಡಿಯಂ, ವಿಟಮಿನ್ ಎ, ಸಿ ಮುಂತಾದ ಪೋಷಕಾಂಶಗಳು ಹೇರಳವಾಗಿವೆ. ಈ ಎಲ್ಲಾ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಟೇಬಲ್ ಸಕ್ಕರೆಗಿಂತ 100 ಪಟ್ಟು ಸಿಹಿಯಾಗಿರುತ್ತದೆ ಆದರೆ ಕಾರ್ಬೋಹೈಡ್ರೇಟ್‌ಗಳು, ಕೃತಕ ಪದಾರ್ಥಗಳು ಅಥವಾ ಕ್ಯಾಲೊರಿಗಳಿಂದ ಮುಕ್ತವಾಗಿದೆ. ಬೊಜ್ಜು, ಮಧುಮೇಹ ಮತ್ತು ಹಲ್ಲಿನ ಕುಳಿಗಳಂತಹ ಆರೋಗ್ಯ ಸಮಸ್ಯೆಗಳಿಗೆ ಸ್ಟೀವಿಯಾ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಪ್ರಸಿದ್ಧ ಪೌಷ್ಟಿಕತಜ್ಞರು ಹೇಳುತ್ತಾರೆ,

ಶತಮಾನಗಳಿಂದ ಬಳಸಲ್ಪಟ್ಟ ಮೂಲಿಕೆ : ಸ್ಟೀವಿಯಾದಂತಹ ಕಡಿಮೆ-ಕ್ಯಾಲೋರಿ ಸಸ್ಯ-ಆಧಾರಿತ ನೈಸರ್ಗಿಕ ಸಿಹಿಕಾರಕಗಳು ತೂಕ ನಿರ್ವಹಣೆ, ಮಧುಮೇಹ, ಹಲ್ಲಿನ ಕುಳಿಗಳ ಕಡಿತ ಮತ್ತು ಸ್ಥೂಲಕಾಯತೆಗೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡಲು ಪರಿಣಾಮಕಾರಿ ಮಾರ್ಗವಾಗಿದೆ. ಯಾವುದೇ ಆಹಾರದಂತೆ, ಸರಿಯಾದ ಪ್ರಮಾಣದಲ್ಲಿ ಸೇವಿಸುವ ಸ್ಟೀವಿಯಾವು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ದಿನನಿತ್ಯದ ಆಧಾರದ ಮೇಲೆ ಮತ್ತು ದೇಹದ ಮೇಲೆ ಯಾವುದೇ ಋಣಾತ್ಮಕ ಅಡ್ಡ ಪರಿಣಾಮಗಳನ್ನು ಹೊಂದಿರುವುದಿಲ್ಲ, ಸಂಸ್ಕರಿಸಿದ ಸಕ್ಕರೆಗಿಂತ ಭಿನ್ನವಾಗಿ, ಸ್ಟೀವಿಯಾ ನೈಸರ್ಗಿಕವಾಗಿ ಸಕ್ಕರೆಗಿಂತ ಸಿಹಿಯಾಗಿರುತ್ತದೆ ಮತ್ತು ಆಹಾರಗಳ ರುಚಿಯನ್ನು ಹೆಚ್ಚಿಸಲು ಪೂರಕವಾಗಿ ಶತಮಾನಗಳಿಂದ ಬಳಸಲ್ಪಟ್ಟಿದೆ.

ಕ್ಯಾನ್ಸರ್ ತಡೆಗಟ್ಟುವಿಕೆ : ಈ ಸಸ್ಯವು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದು ಪ್ರಬಲವಾದ ಕ್ಯಾನ್ಸರ್ ವಿರೋಧಿ ಆಹಾರವಾಗಿದೆ. ಸ್ಟೀವಿಯಾದಲ್ಲಿ ಕೆಂಪ್ಫೆರಾಲ್ ಎಂಬ ಉತ್ಕರ್ಷಣ ನಿರೋಧಕ ಅಂಶವಿದೆ. ಇವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ತಡೆಗಟ್ಟುವಲ್ಲಿ ಸ್ಟೋವಿಯಾ ವಿಶೇಷವಾಗಿ ಉಪಯುಕ್ತವಾಗಿದೆ ಎನ್ನುತ್ತಾರೆ.

Advertisement

ತೂಕ ಇಳಕೆಗೆ ಸಹಕಾರಿ : ಸಿಹಿಯಾಗಿದ್ದರೂ, ಸ್ಟೀವಿಯಾದಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ. ತೂಕ ಹೆಚ್ಚಿಸುವ ಬಗ್ಗೆ ಚಿಂತಿಸದೆ ನೀವು ಅದನ್ನು ನಿಮ್ಮ ಸಿಹಿಭಕ್ಷ್ಯಗಳು ಮತ್ತು ಕುಕೀಗಳಿಗೆ ಸೇರಿಸಬಹುದು. ಇದು ಸಿಹಿತಿಂಡಿಗಳ ಹಂಬಲವನ್ನು ಪೂರೈಸಲು ಕೆಲಸ ಮಾಡುತ್ತದೆ. ನೀವು ಇದನ್ನು ಮಕ್ಕಳ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ತೂಕ ಇಳಿಸಿಕೊಳ್ಳಲು ಬಯಸಿದರೆ, ಸಕ್ಕರೆಗೆ ಬದಲಾಗಿ ಸ್ಟೀವಿಯಾ ಬಳಸಬಹುದಾಗಿದೆ

ರಕ್ತದೊತ್ತಡ ಮಟ್ಟವನ್ನು ಕಡಿಮೆ ಮಾಡಬಹುದು : ಸ್ಟೀವಿಯಾ ಗ್ಲೈಕೋಸೈಡ್‌ಗಳನ್ನು ಹೊಂದಿದ್ದು, ಇದು ದೇಹದಿಂದ ಹೆಚ್ಚುವರಿ ಸೋಡಿಯಂ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇತರೆ ಪ್ರಯೋಜನಗಳು : ಇದು ಎಲ್ಲಾ ರೀತಿಯ ಚರ್ಮದ ಸಮಸ್ಯೆಗಳನ್ನು ತಡೆಯುವ ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಉತ್ಕರ್ಷಣ ನಿರೋಧಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಬಿಳಿ ಸಕ್ಕರೆಗೆ ಬದಲಿಯಾಗಿ ತೆಗೆದುಕೊಂಡರೆ ಅದು ಮಾನವ ದೇಹಕ್ಕೆ ಯಾವುದೇ ಹಾನಿ ಉಂಟುಮಾಡುವುದಿಲ್ಲ. ಇದು ಸತು, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ, ಇದು ಕೂದಲು ಉದುರುವಿಕೆ, ತಲೆಹೊಟ್ಟು ಮತ್ತು ತಲೆಯ ನೆತ್ತಿಯ ಇತರ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅವುಗಳನ್ನು ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ.

(Source :ಡಿಜಿಟಲ್‌ ಮೀಡಿಯಾ )

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗುರು ಮತ್ತು ಬುಧ ದಶಾಂಕ ಯೋಗ | ಉದ್ಯೋಗದ ಮೇಲೆ ಜಾಕ್ಪಾಟ್ ದೊರೆಯಲಿದೆ
May 24, 2025
5:42 AM
by: ದ ರೂರಲ್ ಮಿರರ್.ಕಾಂ
ರೈತರಿಗೆ ಆಶಾದಾಯಕ ಕೃಷಿಭಾಗ್ಯ ಯೋಜನೆ
May 23, 2025
10:32 PM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆ | ದತ್ತಾಂಶ ತಾಳೆ ಹೊಂದಿಸಲು  ಮೇ 31 ಕೊನೆಯ ದಿನ
May 23, 2025
10:27 PM
by: The Rural Mirror ಸುದ್ದಿಜಾಲ
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ | ಕೊಡಗು ಜಿಲ್ಲೆಯ ಬಹುತೇಕ ಕಡೆ ಮಳೆ |
May 23, 2025
10:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group