‘ನೈಸರ್ಗಿಕ ಕೃಷಿ ಮತ್ತು ಮಣ್ಣು ಸಂರಕ್ಷಣೆ” ಮಾತುಕತೆ | ಮಾದರಿ ಕೃಷಿಕರಾಗಲು ಮಾಹಿತಿ ಬೇಕೇ..? ಎಲ್ಲಿ..? ಯಾವಾಗ..?

December 20, 2023
12:23 PM

ಇತ್ತೀಚೆಗೆ ಹೆಚ್ಚಿನ ಯುವಕರು(youths) ಕೃಷಿಯತ್ತ(Agriculture) ಒಲವು ತೋರಿಸುತ್ತಿದ್ದಾರೆ. ಹಾಗೆ ಈಗಾಗಲೇ ಕೃಷಿಯಲ್ಲಿ ತೊಡಗಿರುವ ರೈತರು(Farmer) ರಾಸಾಯನಿಕ ಕೃಷಿ(Chemical) ಬಿಟ್ಟು ನೈಸರ್ಗಿಕ ಕೃಷಿಯತ್ತ(Natural Farming) ಮರಳುತ್ತಿದ್ದಾರೆ. ಸಾಮಾನ್ಯವಾಗಿ ಕೆಲ ತರಬೇತಿ, ಮಾಹಿತಿಗಳು(Information)  ಕೆಲವೊಮ್ಮೆ ಬೇಕಾಗುತ್ತದೆ. ಅಂತವರಿಗಾಗಿಯೇ ಅನೇಕ ಕೃಷಿ ಸಂಘಗಳು, ನಿಪುಣ ರೈತರು ಕೆಲವು ಕಾರ್ಯಕ್ರಮ, ತರವೇತಿ(Training), ಕಾರ್ಯಗಾರ(Workshop), ಶಿಬಿರ ಹಾಗೂ ಕೃಷಿ ಪ್ರವಾಸೋದ್ಯಮದಂತಹ(Agri tourism) ಅನುಕೂಲಗಳನ್ನು ಮಾಡುತ್ತಿದ್ದಾರೆ. ಇಲ್ಲಿ ನೋಡಿ ಅಂತದೇ ಒಂದು ಅವಕಾಶ ಕೃಷಿಕರಿಗಾಗಿ..

ಪರಿಸರ ಸ್ನೇಹಿ ಕೃಷಿ ,ಕೃಷಿಯನ್ನು ಪ್ರಮುಖ ಉದ್ಯೋಗವನ್ನಾಗಿಸಿಕೊಂಡು ಆದಾಯ ಪಡೆಯುವುದು, ಮಣ್ಣಿನ ಪ್ರಾಮುಖ್ಯತೆ ಮತ್ತು ಕೃಷಿಗೆ ಬೇಕಾದ ಮಣ್ಣು ಸಿದ್ದಪಡಿಸಿಕೊಳ್ಳುವ ಮಾಹಿತಿ , ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರಾಟದ ಸವಾಲುಗಳು ಮತ್ತು ಅವಕಾಶ, ಹವಾಮಾನ ವೈಪರೀತ್ಯದಿಂದ ಕೃಷಿ ವಲಯದ ಮೇಲೆ ಬೀಳುತ್ತಿರುವ ಹೊರೆ , ಹವಾಮಾನ ಬದಲಾವಣೆ ನಿಟ್ಟಿನಲ್ಲಿ ನಮ್ಮ ಕೃಷಿಯಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಮೈಸೂರಿನ ಪರಿಸರ ಬಳಗ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ನೈಸರ್ಗಿಕ ಕೃಷಿ ಮತ್ತು ಮಣ್ಣು ಸಂರಕ್ಷಣೆ” ವಿಚಾರವಾಗಿ ನಾಲ್ಕು ದಶಕಗಳ ಕಾಲ ಮಣ್ಣು ಮತ್ತು ಕೃಷಿಯೊಂದಿಗೆ ಅನುಭವವಿರುವ ಸಾಧಕರೊಂದಿಗೆ ಮಾತುಕತೆ ಏರ್ಪಡಿಸಲಾಗಿದೆ.ಡಿ.12 ರಂದು ಮೈಸೂರಿನ ಸರಸ್ವತಿಪುರಂ ಜೆ ಎಸ್ ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಮಾತುಕತೆ ನಡೆಸುವ ಸಾಧಕರು:
* ಡಾ ರಾಮಕೃಷ್ಣಪ್ಪ, ಅಧ್ಯಕ್ಷರು,ಬೆಳವಲ ಪರಿಸರ ಕೇಂದ್ರ,ಮೈಸೂರು.
* ಡಾ ಚಂದ್ರಶೇಖರ, ಇಂದ್ರಪ್ರಸ್ಥ ಸಾವಯವ ಕೃಷಿ ತೋಟ,ಮೈಸೂರು.
* ಶಿವಾನಂಜಯ್ಯ ಬಾಳೇಕಾಯಿ,ಸಹಜ ಕೃಷಿಕರು, ತುಮಕೂರು.

ಹೆಚ್ಚಿನ ಮಾಹಿತಿಗೆ  ಗಂಟಯ್ಯ : 9538732852, ಅವಿನಾಶ್:8197856132

-ಪ್ರಶಾಂತ್ ಜಯರಾಮ್, ಕೃಷಿಕರು ಮತ್ತು ಕೃಷಿ ಸಲಹೆಗಾರರು

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ
August 2, 2026
7:24 AM
by: ದ ರೂರಲ್ ಮಿರರ್.ಕಾಂ
ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ
August 2, 2026
7:14 AM
by: ದ ರೂರಲ್ ಮಿರರ್.ಕಾಂ
ರಾಜ್ಯಾದ್ಯಂತ ಆರ್ಭಟಿಸುತ್ತಿರುವ ವರುಣ – ಭದ್ರಾ-ನೇತ್ರಾವತಿ ಅಪಾಯದ ಮಟ್ಟ ಮೀರಿ ಪ್ರವಾಹ
August 2, 2026
6:58 AM
by: ದ ರೂರಲ್ ಮಿರರ್.ಕಾಂ
ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ರೈಲು ಸಂಚಾರಕ್ಕೆ ತಾತ್ಕಾಲಿಕ ಅಡ್ಡಿ
August 2, 2026
6:30 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror