Advertisement
ಪ್ರಮುಖ

ಎಳನೀರು ಸಂಕಷ್ಟ | ಉತ್ಪಾದನೆ ಕುಸಿತದಿಂದ ಸರಬರಾಜಿಗೆ ಹೊಡೆತ..!

Share

ದೇಶದ ಪ್ರಮುಖ ತೆಂಗಿನ ನೀರು ಉತ್ಪಾದನಾ ಪ್ರದೇಶವಾದ “ಭಾರತದ ತೆಂಗಿನ ನಗರಿ” ಎಂದು ಕರೆಯಲ್ಪಡುವ ಪೊಳ್ಳಾಚಿ-ಅಣ್ಣಾಮಲೈ ಭಾಗದಲ್ಲಿ ಕಳೆದ ಕೆಲವು ತಿಂಗಳ ಅವಧಿಯಲ್ಲಿ ಎಳನೀರು  ಉತ್ಪಾದನೆ ಸುಮಾರು 40% ಕುಸಿದಿದೆ. ಇದರ ಪರಿಣಾಮವಾಗಿ ಪೂರೈಕೆ ಪ್ರಮಾಣವೂ ಸುಮಾರು 50% ಇಳಿಕೆಯಾಗಿದೆ ಎಂದು The Times of India ವರದಿ ಮಾಡಿದೆ.  ಈ ಪ್ರದೇಶವು ಸಾಮಾನ್ಯವಾಗಿ ದೇಶದ ವಿವಿಧ ಭಾಗಗಳು ಮತ್ತು ವಿದೇಶಗಳಿಗೆ ಎಳನೀರು  ರಫ್ತು ಮಾಡುವ ಪ್ರಮುಖ ಕೇಂದ್ರವಾಗಿದ್ದು, ಇತ್ತೀಚಿನ ಉತ್ಪಾದನಾ ಕುಸಿತದಿಂದ ರೈತರು, ವ್ಯಾಪಾರಿಗಳು ಹಾಗೂ ರಫ್ತುದಾರರು ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ.

Advertisement
Advertisement

ಸ್ಥಳೀಯ ರೈತರ ಪ್ರಕಾರ, ಕಳೆದ ಬಾರಿ ಸುರಿಸ ಮಳೆ, ಆ ಬಳಿಕದ ಚಳಿ  ಹಾಗೂ ಹವಾಮಾನದಲ್ಲಿ ಉಂಟಾದ ಬದಲಾವಣೆಗಳು ಬೆಳೆ ಚಕ್ರದ ಮೇಲೆ ಪರಿಣಾಮ ಬೀರಿವೆ. ಇದರ ಪರಿಣಾಮವಾಗಿ ತೆಂಗಿನ ಕಾಯಿ ಬೆಳೆಯುವ ಅವಧಿ ಬದಲಾಗಿದೆ.

ಹಿಂದೆ ನವೆಂಬರ್–ಡಿಸೆಂಬರ್ ತಿಂಗಳಲ್ಲಿ ದಿನಕ್ಕೆ ಸುಮಾರು 6 ಲಕ್ಷ ಎಳನೀರು  ಪೂರೈಕೆ ಆಗುತ್ತಿದ್ದರೆ, ಈಗ ಅದು 3 ಲಕ್ಷಕ್ಕೆ ಇಳಿದಿದೆ. ಫೆಬ್ರವರಿ ಅಂತ್ಯ–ಮಾರ್ಚ್ ವೇಳೆಗೆ ಇದು 2 ಲಕ್ಷಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಉತ್ಪಾದನೆ ಕುಸಿತದಿಂದ ಸ್ಥಳೀಯ ಮಾರುಕಟ್ಟೆಗಳಲ್ಲಿ ಸರಬರಾಜು ಕಡಿಮೆಯಾಗಿದ್ದು,ಹಲವು ಪ್ರದೇಶಗಳಲ್ಲಿ ಎಳನೀರು  ಬೆಲೆ ಏರಿಕೆಯಾಗಿದೆ. ಪ್ರಸ್ತುತ ದೇಶದ ವಿವಿದೆಡೆ ಸರಾಸರಿ ಒಂದು ಎಳನೀರು ಬೆಲೆ ಸುಮಾರು ₹60ಕ್ಕೆ ತಲುಪಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಇದು ₹45 ಇತ್ತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಪೂರೈಕೆ ಪ್ರಮಾಣ ಕುಸಿತ ಮತ್ತು ಸರಬರಾಜು ಕಡಿಮೆಯ ಹಿನ್ನೆಲೆಯಲ್ಲಿ  ಬೆಲೆಯಲ್ಲಿ ಸಾಧ್ಯತೆ ಇದೆ. ಮುಂದೆ ಬಿಸಲಿನ ಪ್ರಮಾಣವೂ ಹೆಚ್ಚಳವಾಗುವುದರಿಂದ ಎಳನೀರಿಗೆ ಬೇಡಿಕೆ ಹೆಚ್ಚಾಗಲಿದೆ. ಈ ಸಂದರ್ಭ ಪೂರೈಕೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.


Tender coconut production in Tamil Nadu’s Pollachi–Anaimalai region has declined by around 40% in the past month, leading to a 50% drop in exports. Unusual weather conditions, including cold temperatures and irregular rainfall, are cited as the main causes. Reduced supply has already increased prices, and further price rise is expected in the coming months.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಾಧನೆಗಿಂತ ದೊಡ್ಡದು ಸಂಯಮ

ಸಾಧನೆ ಮನುಷ್ಯನಿಗೆ ಎತ್ತರ ಕೊಡಬಹುದು, ಆದರೆ ಸಂಯಮ ಮತ್ತು ವಿನಯ ಮಾತ್ರ ಗೌರವವನ್ನು…

43 minutes ago

ತೆಂಗಿನ ರೈತರಿಗೆ ಆಶಾಕಿರಣ | ರೋಗ ನಿಯಂತ್ರಣ ಮತ್ತು ಹೊಸ ತಳಿ ಯೋಜನೆ

ತೆಂಗಿನ ತೋಟಗಳಲ್ಲಿ ರೋಗ ಮತ್ತು ಕಡಿಮೆ ಇಳುವರಿ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ…

1 hour ago

ಅಡಿಕೆ ಬೆಳೆಗಾರರ ಮೌನ : ಜಾಗತಿಕ ಎಚ್ಚರದ ಘಂಟೆ ಮೊಳಗುತ್ತಿದ್ದರೂ ಏಕೆ ನಿರಾಳತೆ?

WHO ಮತ್ತು ಜಾಗತಿಕ ಆರೋಗ್ಯ ಸಂಸ್ಥೆಗಳ ಅಡಿಕೆ ಕುರಿತ ನಿಯಂತ್ರಣ ಚರ್ಚೆಗಳ ನಡುವೆಯೂ…

10 hours ago

ಚಿಕ್ಕಮಗಳೂರು ಕಾಳುಮೆಣಸಿಗೆ ಜಾಗತಿಕ ಸ್ಪರ್ಶ | ರಫ್ತು ಮಾರುಕಟ್ಟೆ ಗೆಲ್ಲಲು ಫೆ. 17ಕ್ಕೆ ವಿಶೇಷ ತರಬೇತಿ

ಚಿಕ್ಕಮಗಳೂರಿನಲ್ಲಿ ಫೆ.17ರಂದು ಕಾಳುಮೆಣಸು ಹಾಗೂ ಸಂಬಾರು ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು…

10 hours ago

ಹೊಸರುಚಿ | ಹಲಸಿನ ಕಾಯಿ ಬೋಂಡಾ ರೆಸಿಪಿ – ಇದು ರುಚಿಕರ ಗ್ರಾಮೀಣ ಸ್ನ್ಯಾಕ್

ಹಲಸಿನ ಕಾಯಿ ಬಳಸಿ ಸುಲಭವಾಗಿ ಮಾಡುವ ಕರಕರೆ ಬೋಂಡಾ – ಸಾಮಾನ್ಯ ಬೋಂಡಾ…

1 day ago

ಜೀವನಪ್ರೀತಿ

ಜೀವನವೆಂದರೆ ಕೇವಲ ಉಸಿರಾಟವಲ್ಲ; ಅದು ಅನುಭವಗಳ ಹೂಗುಚ್ಛ, ಭಾವನೆಗಳ ಹಬ್ಬ, ತತ್ತ್ವದ ಹಾದಿ.…

1 day ago