Opinion

#GreenRevolution | ಹಸಿರು ಕ್ರಾಂತಿ ಪಿತಾಮಹ ನಿಧನ | ಭಾರತವನ್ನು ಕ್ಷಾಮದಿಂದ ರಕ್ಷಿಸಿದ್ದ ಹಸಿರುಕ್ರಾಂತಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಹಸಿರು ಕ್ರಾಂತಿಯ’ ಪಿತಾಮಹನೆಂದು ಮತ್ತು ವಿಶ್ವಸಂಸ್ಥೆಯಿಂದ ಪರಿಸರ `ಆರ್ಥಿಕ ಸಿದ್ಧಾಂತದ ಪಿತಾಮಹ’ ಎಂದು ಶ್ಲಾಘಿಸಲ್ಪಟ್ಟ ಖ್ಯಾತ ಕೃಷಿ ವಿಜ್ಞಾನಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಪ್ರೊ.ಎಂ.ಎಸ್ ಸ್ವಾಮಿನಾಥನ್ (98) ಅವರು ಚೆನ್ನೈನಲ್ಲಿ ನಿಧನರಾಗಿದ್ದಾರೆ.

Advertisement
ಪ್ರೊ.ಸ್ವಾಮಿನಾಥನ್ ಅವರು ಪ್ರಸಿದ್ಧ ಕೃಷಿಶಾಸ್ತ್ರಜ್ಞ ಮತ್ತು ಸಸ್ಯ ತಳಿಶಾಸ್ತ್ರಜ್ಞರಾಗಿದ್ದರು. ಅವರ ಕೊಡುಗೆಗಳಿಂದ ದೇಶದ ಕೃಷಿ ಪುನರುಜ್ಜೀವನ ಜಾಗತಿಕವಾಗಿ ಗುರುತಿಸಲ್ಪಟ್ಟಿತು. ಹೆಚ್ಚು ಇಳುವರಿ ನೀಡುವ ಗೋಧಿ ಮತ್ತು ಅಕ್ಕಿಯ ತಳಿಗಳನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ತಳಿಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಅಮೆರಿಕಾದ ವಿಜ್ಞಾನಿ ನಾರ್ಮನ್ ಬೋರ್ಲಾಗ್ ಅವರೊಂದಿಗೆ ಶ್ರಮಿಸಿದ್ದಾರೆ. ಅವರ ಈ ಕೆಲಸವು 1960ರ ದಶಕದಲ್ಲಿ ಭಾರತವನ್ನು ಕ್ಷಾಮದಿಂದ ರಕ್ಷಿಸಿತ್ತು.

*1965 ರಲ್ಲಿ ಹಸಿರುಕ್ರಾಂತಿ (Green Revolution) ಯೋಜನೆ ಜಾರಿಗೆ ಬಂದದ್ದು ಎಲ್ಲರಿಗೂ ತಿಳಿದ ವಿಷಯವಾಗಿರುತ್ತದೆ.

*1965 ರಿಂದ ಇಲ್ಲಿಯವರೆಗೂ ಹಸಿರುಕ್ರಾಂತಿ ಯಶಸ್ಸಿಗೆ ಹೈಬ್ರಿಡ್ ಬೀಜಗಳು ಮತ್ತು ರಾಸಾಯನಿಕ ಗೊಬ್ಬರ ಮಾತ್ರ ಮೂಲ ಕಾರಣ ಹಾಗು ಇವುಗಳನ್ನು ತರುವಲ್ಲಿ ಕೃಷಿ ವಿ.ವಿ ಗಳು,ವಿಜ್ಞಾನಿಗಳ ಪಾತ್ರದ ಬಗ್ಗೆ ಮಾತ್ರ ವ್ಯಾಪಕವಾಗಿ ಬಿಂಬಿಸಲಾಗುತ್ತಿದೆ.ಆದರೆ ಈ ಬೀಜಗಳು ಮತ್ತು ಗೊಬ್ಬರಗಳು ಮಾತ್ರ ಕಾರಣವೇ?ನೋಡೋಣ ಬನ್ನಿ.

*1965 ರಲ್ಲಿ ಭಾರತದ ಜನಸಂಖ್ಯೆ 50 ಕೋಟಿ,ಆಹಾರೋತ್ಪದಾನೆ 82 ಮಿಲಿಯನ್ ಟನ್ (MT).

*2018 ರ ಜನಸಂಖ್ಯೆ 135 ಕೋಟಿ, ಆಹಾರೋತ್ಪದಾನೆ 285 MT.03 ಪಟ್ಟು ಹೆಚ್ಚಾಗಿರುವ ಜನಸಂಖ್ಯೆಗೆ ಅನುಗುಣವಾಗಿ ಸುಮಾರು ಅಷ್ಟೇ ಅಂದರೆ 3.5ಪಟ್ಟು ಹೆಚ್ಚು ಉತ್ಪಾದನೆ ಮಾಡಲಾಗಿದೆ.

Advertisement

*ಭಾರತದ ಕೃಷಿ ಭೂಮಿ ಸುಮಾರು 160 ಮಿಲಿಯನ್ hectare (MH).1965 ರ ನೀರಾವರಿ ಪ್ರದೇಶ-10 MH, 2018 ರ ನೀರಾವರಿ ಪ್ರದೇಶ-60 MH.

*1965 ರಲ್ಲಿ 08 MH ಪ್ರದೇಶಕ್ಕೆ ಸರ್ಕಾರ ಕಾಲುವೆ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಿತು,ಈಗ ಅದು 22 MH ಪ್ರದೇಶವಾಗಿರುತ್ತದೆ.ಸುಮಾರು 03 ಪಟ್ಟು ಹೆಚ್ಚು ಪ್ರದೇಶ ನೀರಾವರಿಗೆ ಒಳಪಟ್ಟಿರುತ್ತದೆ.

*1965 ರಲ್ಲಿ ಅಂತರ್ಜಲದ(ಬೋರ್ವೇಲ್ ,ತೆರೆದ ಬಾವಿ) ಮೂಲಕ ನೀರಾವರಿ ಮಾಡುತ್ತಿದ ಪ್ರದೇಶ 01 MH ಕ್ಕಿಂತ ಕಡಿಮೆ,ಈಗ ಅದು 40 MH ಪ್ರದೇಶಕ್ಕೆ ವ್ಯಾಪಿಸಿದೆ,40 ಪಟ್ಟು ಹೆಚ್ಚಿರುತ್ತದೆ.

*160 MH ಕೃಷಿ ಭೂಮಿಯಲ್ಲಿ 60 MH ನೀರಾವರಿ ಪ್ರದೇಶ,2/3 ಕೃಷಿ ಭೂಮಿ ಮಳೆಯಾಶ್ರಿತ.ಸರ್ಕಾರ ನೀರಾವರಿ ಒದಗಿಸಿರುವುದು 22 MH, ರೈತರು ತಮ್ಮ ಸ್ವಂತ ದುಡ್ಡಿನಲ್ಲಿ ನೀರಾವರಿ ಮಾಡಿಕೊಂಡಿರುವುದು 40 MH, ಸರ್ಕಾರಗಳು ನೀರಾವರಿಗೆ ಖರ್ಚು ಮಾಡಿರುವ ಹಣಕ್ಕಿಂತ ರೈತರು ಹೆಚ್ಚು ಪಾಲು ಹಣ ಖರ್ಚು ಮಾಡಿರುತ್ತಾರೆ ಎಂಬುವುದನ್ನು ಗಮನಿಸಬೇಕು.

*1965 ರಿಂದ 2018 ರವರೆಗೆ 10 MH ನಿಂದ 60 MH ಪ್ರದೇಶ ನೀರಾವರಿಗೆ ಒಳಪಟ್ಟಿರುತ್ತದೆ, 06 ಪಟ್ಟು ಹೆಚ್ಚು ಕೃಷಿ ಭೂಮಿಗೆ ನೀರಾವರಿ ವಿಸ್ತರಿಸಲಾಗಿದೆ.

Advertisement

*ಈಗ ಉತ್ಪಾದನೆ ಆಗುತ್ತಿರುವ 285 MT ನಲ್ಲಿ ಭತ್ತ 110 MT,ಗೋಧಿ 100 MT.ಒಟ್ಟಾರೆ ಉತ್ಪಾದನೆಯಲ್ಲಿ ಭತ್ತ ಮತ್ತು ಗೋಧಿ ಪಾಲು ಶೇ 75%.ಭತ್ತ ಮತ್ತು ಗೋಧಿ ಉತ್ಪಾದನೆಗೆ ಬೇಕಿರುವುದು ನೀರಾವರಿ ಪ್ರದೇಶ, ಹಾಗಾದರೆ ಬೇಕಿರುವುದು ನೀರು ತಾನೆ?

*ಹಸಿರುಕ್ರಾಂತಿ ಪರಿಣಾಮ ಅಕ್ಕಿ ಮತ್ತು ಗೋಧಿ ಪ್ರತಿ ಹೆಕ್ಟೇರ್ ಗೆ ಕ್ರಮವಾಗಿ 02 ಮತ್ತು 03 ಪಟ್ಟು ಇಳುವರಿ ಹೆಚ್ಚಾಗಿರುವುದು ಸತ್ಯ.ಈ ಉತ್ಪಾದನೆ ಕೇವಲ ಬೀಜ ಮತ್ತು ಗೊಬ್ಬರದಿಂದ ಮಾತ್ರವಲ್ಲ,ಅದಕ್ಕೂ ಮಿಗಿಲಾಗಿ ಪ್ರಮುಖವಾಗಿ ಹರಿಸಿದ ನೀರಿನ ಪ್ರಮಾಣವನ್ನು ಯಾರು ಮುಚ್ಚಿಡಲು ಸಾಧ್ಯವಿಲ್ಲ.

*ಹಾಗಾದರೆ ಹೈಬ್ರಿಡ್ ಬೀಜ ಮೊಳಕೆ ಹೊಡೆಯಲು, ಗೊಬ್ಬರ ಭೂಮಿಯಲ್ಲಿ ಕರಗಲು ಹೆಚ್ಚಿನ ಪಾತ್ರ ವಹಿಸುವುದು ನೀರು ಅಲ್ಲವೇ? ಉದ್ದೇಶಪೂರಕವಾಗಿ ಈ ಸತ್ಯವನ್ನು ಮರೆಮಾಚಿ ಬರಿ ಬೀಜ ಮತ್ತು ಗೊಬ್ಬರದಿಂದ ಯಶಸ್ಸು ಸಾಧಿಸಿದ್ದೇವೆ ಎಂದು ಹೇಳುವುದು ಎಷ್ಟು ಸರಿ?ಮೂಲ ಕಾರಣ ನೀರು ತಾನೆ?

*ನಮ್ಮ ದೇಶದಲ್ಲಿ ರಾಸಾಯನಿಕ ಕೃಷಿ ಪ್ರಾರಂಭ ಮಾಡುವ ಮೊದಲು, ಅಂದರೆ 1960 ಕ್ಕೂ ಮೊದಲು, ನಮ್ಮ ಮಣ್ಣಿನಲ್ಲಿ ಸಾವಯವ ಇಂಗಾಲ ಶೇ 3% ರಷ್ಟು ಇತ್ತು. ಈಗ ಶೇ 90% ರಷ್ಟು ಕಳೆದುಕೊಂಡು ಶೇ 0.3% ಕ್ಕೆ ಬಂದಿದೆ. ಆಗ 20 ಅಡಿ ಆಳದಲ್ಲಿ ಸಿಗುತ್ತಿದ್ದ ನೀರು ಈಗ 1200 ಅಡಿಗೆ ಹೋಗಿದೆ.’ಒಂದು ದೇಶದ ಶ್ರೀಮಂತಿಕೆ ಅಲ್ಲಿನ ಭೂಮಿಯ ಮಣ್ಣನ್ನು ಅವಲಂಬಿಸಿದೆ’. ನಾವು ಭೂಮಿಗೆ ವಿಷ ಹಾಕಿ ಅಭಿವೃದ್ಧಿ ಮಾಡುತ್ತ ಇದ್ದೇವೆ ಎನ್ನುವ ಹುಚ್ಚು ಭ್ರಮೆಯಲ್ಲಿದ್ದೇವೆ.

ಪ್ರಶಾಂತ್ ಜಯರಾಮ್‌, ಕೃಷಿಕರು ಮತ್ತು ಕೃಷಿ ಸಲಹೆಗಾರರು, ಮೊಬೈಲ್ :9342434530

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ದೇಶದಾದ್ಯಂತ ಸಾಮಾನ್ಯ ಮಳೆ | ಮಲೆನಾಡು-ಕರಾವಳಿಯಲ್ಲಿ ವ್ಯಾಪಕ ಮಳೆ ಸಾಧ್ಯತೆ

ಭಾರತದಾದ್ಯಂತ ಮುಂಗಾರು ಸಕ್ರಿಯವಾಗಿದೆ. ಈ ಬಾರಿ ಉತ್ತಮ ಮುಂಗಾರು ಮಳೆಯಾಗುತ್ತಿದೆ. ಸದ್ಯ ಸಾಮಾನ್ಯ…

1 hour ago

ಬೆಳೆಗೆ ಔಷಧಿ ಸಿಂಪಡಣೆಯ ವೇಳೆ ಬಳಸುವ ಸಿಲಿಕಾನ್ ಸ್ಪ್ರೆಡರ್ ಗುಣಧರ್ಮ ಏನು..?

ಬೆಳೆಗಳಿಗೆ ಔಷಧಿ ಸಿಂಪಡಣೆ ವೇಳೆ ಹೆಚ್ಚಿನ ದಕ್ಷತೆ ಹಾಗೂ ಪರಿಣಾಮಕಾರಿಯಾಗುವ ಉದ್ದೇಶದಿಂದ ವಿವಿಧ…

1 hour ago

ಆರೋಗ್ಯದಲ್ಲಿ ಈ ರಾಶಿಯವರಿಗೆ ದೀರ್ಘಕಾಲದ ಕಾಯಿಲೆಯಿಂದ ಚೇತರಿಕೆ

ಆರೋಗ್ಯವು ಜೀವನದ ಪ್ರಮುಖ ಅಂಗವಾಗಿದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನವು…

2 hours ago

ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸಿಯಮ್-4 ಮಿಷನ್‌ನ ನಾಲ್ವರು ಗಗನಯಾತ್ರಿಗಳನ್ನು ಒಳಗೊಂಡ…

11 hours ago

ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ

ರಾಜ್ಯದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ…

11 hours ago

ಹೃದಯಾಘಾತದಿಂದ ಸಾವುಗಳ ಸಂಖ್ಯೆ ಹೆಚ್ಚಾಗಿಲ್ಲ | ಯಾವುದೇ ಆತಂಕ ಬೇಡ – ಸಚಿವ ಶರಣಪ್ರಕಾಶ್ ಪಾಟೀಲ್

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು…

11 hours ago