MIRROR FOCUS

ವಿಶೇಷ ತಳಿಯ ದೊಡ್ಡರಾಗಿಯ ಬೆಲೆ ಕುಸಿತ ಏಕೆ ? ರೈತರ ಸಶಕ್ತೀಕರಣ ಹೇಗೆ ? | ರೈತರು ಸೋತರೆ ಅದು ಜಿಲ್ಲೆಯ ಸೋಲು ಎಂದು ಎಚ್ಚರಿಸಿದ ವಿಜ್ಞಾನಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಲೆ ಮಹದೇಶ್ವರಬೆಟ್ಟ(Male Mahadeshwara Hill) ವ್ಯಾಪ್ತಿಯ ಪಡಸಲನತ್ತ, ದೊಡ್ಡಾಣೆ ಗ್ರಾಮಗಳಲ್ಲಿ ಜೆ ಎಸ್ ಬಿ ಪ್ರತಿಷ್ಠಾನದ ವತಿಯಿಂದ ಕ ರಾ ರೈತ ಸಂಘದ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ‘ದೊಡ್ಡರಾಗಿ ಬೆಳೆಗಾರರ ಸಶಕ್ತೀಕರಣ'(Empowerment of large millet growers) ಕಾರ್ಯಕ್ರಮ ನಡೆಯಿತು.

Advertisement
Advertisement

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೃಷಿ ವಿಜ್ಞಾನಿ(Agricultural scientist) ಡಾ.ಮಂಜುನಾಥ ಮಾತನಾಡಿದರು. ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿರುವ ರೈತರು(Farmer) ನಿಜಕ್ಕೂ ಆದರ್ಶಪ್ರಾಯರು. ಮಣ್ಣಿನಲ್ಲಿ ದೇವರನ್ನು ಕಾಣುವ ಇವರನ್ನು ನಾವು ಬಹುವಾಗಿ ಪ್ರೀತಿಸಬೇಕು.

ಆದರೆ, ಇಲ್ಲಿನ ರೈತರು ಆರು ತಿಂಗಳು ಕಾದು, ಉತ್ತು-ಬಿತ್ತಿ-ಬೆಳೆದ ಅದ್ಭುತ ರುಚಿಯನ್ನು ಹೊಂದಿರುವ ವಿಶೇಷ ತಳಿಯ ‘ದೊಡ್ಡರಾಗಿ’ ಯನ್ನು ನೆರೆಯ ತಮಿಳುನಾಡಿನವರಿಗೆ ಕೇವಲ ₹1200~₹1800 ಗಳಿಗೆ ಮಾರುತ್ತಿದ್ದಾರೆ. ಇದು ಒಕ್ಕೂಟ ಸರ್ಕಾರದ ಕನಿಷ್ಠ ಬೆಂಬಲ ಬೆಲೆಗಿಂತ ಬಹಳ ಕಡಿಮೆಯಾಗಿದೆ. ಇಂತಹ ಶೋಚನೀಯ ಸ್ಥಿತಿಯಲ್ಲಿ ಕೃಷಿಯನ್ನು ಮುಂದುವರೆಸುವುದು ಬಹಳ ಕಷ್ಟ. ಇದರಿಂದ ಇಲ್ಲಿನ ಜನರಿಗೆ ಕೃಷಿಯ ಮೇಲೆ ಆಸಕ್ತಿ ಕಡಿಮೆಯಾಗುತ್ತದೆ. ಅವರು ಬೇರೆಡೆಗೆ ಗುಳೆಹೋಗುವ ಸಂಭವ ಹೆಚ್ಚಾಗುತ್ತದೆ. ಇಲ್ಲಿನ ರೈತರು ಪಾರಂಪಾರಿಕ ಪದ್ಧತಿಯಲ್ಲಿ ವ್ಯವಸಾಯ ಮಾಡುತ್ತಿದ್ದು, ಅವರು ಇದರಲ್ಲಿ ಸೋತರೆ ಅದು ಅವರ ಸೋಲಲ್ಲ, ಬದಲಿಗೆ ಒಟ್ಟಾರೆ ನಮ್ಮ ಜಿಲ್ಲೆಯ ಸೋಲಾಗುತ್ತದೆ ಎಂದರು.

ಬೆಟ್ಟದ ಜೀವಾಳ : ಇದು ಕೇವಲ ರೈತರ ಬದುಕು ಮತ್ತವರು ಬೆಳೆದ ರಾಗಿ ಮಾತ್ರವಲ್ಲ, ಅದು ನಮ್ಮ ಜಿಲ್ಲೆಯ ಅಸ್ತಿತ್ವ, ಅಸ್ಮಿತೆ. ಆ ರಾಗಿ ಮತ್ತದನ್ನು ಬೆಳೆಯುವ ಜನತೆಗೆ ಅವರದ್ದೆ ಆದ ಒಂದು ಸೊಗಡಿದೆ, ಹಿರಿಮೆಯಿದೆ. ಭೌಗೋಳಿಕವಾಗಿ ಅದಕ್ಕೆ ಅದರದ್ದೇ ಆದ ಸಾಂಸ್ಕೃತಿಕ ಇತಿಹಾಸವಿದೆ, ಜಾನಪದ ಹಿನ್ನೆಲೆ ಇದೆ. ಸಮಾಜ್ಯೋಧಾರ್ಮಿಕ ವ್ಯವಸ್ಥೆಯಿದೆ. ಇದನ್ನು ನಾವು ಕಳೆದುಕೊಂಡರೆ, ಮತ್ತೆ ಮರುಕಳಿಸಲಾರದ ಸ್ಥಿತಿಗೆ ತಲುಪಬಹುದು.

ಇಂದಿನ ವಾಯುಗುಣ ಬದಲಾವಣೆ ಒಗ್ಗಿಕೊಂಡು ಇಷ್ಟೆಲ್ಲಾ ಕಷ್ಟದ ನಡುವೆಯು ನಮ್ಮ ರೈತರು ಇಲ್ಲಿನ ಕಾಡಿನಲ್ಲಿಯೇ ನೆಲೆಸಿ ಕೃಷಿ ಮಾಡುತ್ತಿರುವುದೇ ಒಂದು ಸಂತೋಷದ ಸಂಗತಿ. ಅಂತಹ ಸಂದರ್ಭದಲ್ಲಿ ನಾವು-ನೀವೆಲ್ಲರೂ ಅವರಿಗೆ ಕೈ ಜೋಡಿಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ನಾವು ಅವರಿಗೆ ನ್ಯಾಯಯುತ ಬೆಲೆಯಲ್ಲಿ ಅವರು ಬೆಳೆದ ಸುಮಾರು ನೂರು ಕ್ವಿಂಟಾಲ್ ಗಳಷ್ಟು ರಾಗಿಯನ್ನು ಮತ್ತು ಇತರೆ ದವಸ-ಧಾನ್ಯಗಳನ್ನು ಕೊಂಡು, ನಮ್ಮ ಕೈಲಾದಷ್ಟು ಪ್ರೋತ್ಸಾಹ ನೀಡುವ ಮೂಲಕ ಅವರಿಗೆ ಬೆಂಬಲ ನೀಡಿದ್ದೇವೆ. ಇನ್ನೂ ಮುಂದೆ ನಮ್ಮ ಸರ್ಕಾರ, ಪಂಚಾಯತಿಗಳು ಇದನ್ನು ಮುಂದುವರೆಸಬೇಕೆಂದು ತಿಳಿಸಿದರು.

Advertisement

ಕ.ರಾ.ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ ಮಾತನಾಡಿ, ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಮಧ್ಯ ಪ್ರವೇಶಿಸಿ, ಇಲ್ಲಿನ ಜನರಿಂದ ನ್ಯಾಯವಾದ ಬೆಲೆಯಲ್ಲಿ ರಾಗಿಯನ್ನು ಖರೀದಿ ಮಾಡಬೇಕು. ಅದು ಅವರ ಸ್ಥಳದಲ್ಲಿಯೇ ಖರೀದಿಸಲು ಮುಂದಾಗಬೇಕು. ಅವರಿಗೆ ಅತಿ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ತುರ್ತಾಗಿ ಮಾಡಬೇಕು ಎಂದರು. ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಪ್ರಕ್ರಿಯೆ ನಡೆಸಬೇಕು. ಸಂಘ-ಸಂಸ್ಥೆಗಳು ಇದಕ್ಕೆ ನೆರವು ನೀಡುವ ಮೂಲಕ ಅವರನ್ನು ಬೆಂಬಲಿಸಬೇಕು. ಸರ್ಕಾರದಿಂದ ಎಂ ಎಸ್ ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಕೊಂಡುಕೊಳ್ಳುವಂತೆ ನೋಡಿಕೊಳ್ಳಬೇಕು. ಇದಕ್ಕೆ ಕೃಷಿ ಇಲಾಖೆ ನೆರವಾಗಬೇಕು ಎಂದು ಅಭಿಪ್ರಾಯಪಟ್ಟರು.

ಜೆ ಎಸ್ ಬಿ ಪ್ರತಿಷ್ಠಾನದ ಶಶಿಕುಮಾರ್ ಮಾತನಾಡಿ, ಇಲ್ಲಿನ ಜನ, ಬೆಟ್ಟ-ಗುಡ್ಡ, ಕಾಡು, ರಾಗಿ, ಸೋಗಡು, ಸಂಸ್ಕೃತಿ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿದ್ದು, ಅದನ್ನು ಚಾಮರಾಜನಗರ ಜಿಲ್ಲೆಯ ಪರಂಪರೆ ಎಂದು ಪರಿಗಣಿಸಲಾಗಿದೆ. ಇದನ್ನು ಒಂದು ಬೆಳೆ ಎಂದು ಪರಿಗಣಿಸದೆ, ಅವರ ಕೃಷಿ ಜ್ಞಾನ ಮತ್ತು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಂತೆ ನೋಡಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು. ಅವರು ಗುಳೆ ಹೋಗುವುದನ್ನು ತಪ್ಪಿಸಿ, ಅತ್ಮಗೌರವದಿಂದ ಸ್ವಾಭಿಮಾನದ ಬದುಕು ಕಟ್ಟಿಕೊಂಡು ಬಾಳುವುದಕ್ಕೆ ಸಹಕಾರ ನೀಡಬೇಕೆಂದು, ಅದನ್ನು ನಮ್ಮ ಕರ್ತವ್ಯವೆಂದು ಭಾವಿಸಿ ಸಹಕರಿಸಬೇಕೆಂದರು.

ಕಾರ್ಯಕ್ರಮದಲ್ಲಿ ಹಾಡಿಯ ಜನರು, ಶಾಲೆಯ ಶಿಕ್ಷಕರು, ಸ್ಥಳೀಯ ಮುಖಂಡರು, ಜನ ಪ್ರತಿನಿಧಿಗಳು, ಮಹದೇವ, ಚಿಕ್ಕರಾಜು, ಮಾದೇಶ, ಪ್ರಸಾದ, ಬೊಮ್ಮ, ಮಾದಪ್ಪ, ಮಹದೇವಪ್ರಸಾದ, ಸ್ವಾಮಿ, ಜೋಬೀಸ್ ಜೋಸೆಫ್, ಐಸಾಕ್, ಬಿಜು, ಮುರುಗೇಶ, ಜಗದೀಶ, ಚಂದ್ರು, ಕುಮಾರ, ಮಹದೇವು, ಮುಂತಾದವರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಜೂನ್ 1 : ಯಕ್ಷಗುರು ಪಾಲೆಚ್ಚಾರು ಗೋವಿಂದ ನಾಯಕರಿಗೆ ‘ಈಶಾವಾಸ್ಯ ಪ್ರಶಸ್ತಿ’ | ಗೋವಿಂದ ಗಾಥೆ’ ಕೃತಿ ಅನಾವರಣ

ಯಕ್ಷಗುರು, ಭಾಗವತ ಶ್ರೀ ಪಾಲೆಚ್ಚಾರು ಗೋವಿಂದ ನಾಯಕ್ ಅವರಿಗೆ ‘ಈಶಾವಾಸ್ಯ ಪ್ರಶಸ್ತಿ ಪುರಸ್ಕಾರ’…

5 hours ago

ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ 315 ಮಿಮೀ ಸಾರ್ವಕಾಲಿಕ ದಾಖಲೆ ಮಳೆ

ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ 315 ಮಿಲಿಮೀಟರ್ ಮಳೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.…

5 hours ago

ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಂಚೂಣಿ

ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಂಚೂಣಿಯಲ್ಲಿದ್ದು, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ…

5 hours ago

ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆ | ಕಬಿನಿ ಜಲಾಶಯದ ಒಳಹರಿವಿನಲ್ಲಿ ಏರಿಕೆ

ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ…

6 hours ago

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿ ನಿರ್ವಹಣೆ ಕುರಿತು ಸಭೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಮಳೆಯಾಗುತ್ತಿದ್ದು, ಸಾರ್ವಜನಿಕರ ಜೀವಹಾನಿ ತಪ್ಪಿಸಲು ಸರಕಾರ ಗರಿಷ್ಠ…

6 hours ago