Advertisement
ಅನುಕ್ರಮ

ಮರಣ – ಬದುಕಿಗೆ ನೀಡುವ ಪಾಠ

Share

ಮರಣವೆಂಬ ಸತ್ಯವನ್ನು ಮನುಷ್ಯನು ಎಂದಿಗೂ ತಪ್ಪಿಸಲು ಸಾಧ್ಯವಿಲ್ಲ. ಆದರೂ ಅದು ಶಾಶ್ವತವಾದ ಭಯದ ವಿಷಯವಾಗಿಯೂ, ದಾರ್ಶನಿಕ ಚಿಂತನೆಯ ಕೇಂದ್ರಬಿಂದುವಾಗಿಯೂ ಇತಿಹಾಸದ ಎಲ್ಲಾ ಧರ್ಮ–ದರ್ಶನಗಳಲ್ಲಿ ಬೆಸೆದು  ಕೊಂಡಿದೆ. ಬದುಕು–ಮರಣದ ಚಕ್ರವು ಕೇವಲ ಜೀವಶಾಸ್ತ್ರೀಯ ಪ್ರಕ್ರಿಯೆಯಲ್ಲ; ಅದು ಮಾನವ ಆತ್ಮದ ಅರಿವಿಗೆ ದಾರಿ ತೋರಿಸುವ ದಾರ್ಶನಿಕ ಪಾಠವಾಗಿದೆ.

ವೇದ–ಉಪನಿಷತ್ತುಗಳು ಹೇಳುವಂತೆ:“ಜಾತಸ್ಯ ಹಿ ಧ್ರುವೋ ಮರಣಂ ಧ್ರುವಂ ಜನ್ಮ ಮೃತಸ್ಯ ಚ”

ಜನಿಸಿದವನು ಸಾಯಲೇಬೇಕು, ಸತ್ತವನು ಪುನಃ ಹುಟ್ಟಲೇಬೇಕು.ಇದು ಕೇವಲ ದೇಹಧಾರಿಯ ಚಕ್ರ. ಮರಣವು ಅಂತ್ಯವಲ್ಲ, ಅಂತರಾಳದಲ್ಲಿ ಮುಂದಿನ ಪ್ರವಾಸದ ಪ್ರಾರಂಭ. ಬದುಕಿನ ಮಿತಿಯನ್ನು ತಿಳಿಸುವ ಮೂಲಕ ಮರಣವು ಜೀವನಕ್ಕೆ ಮೌಲ್ಯವನ್ನು ಕೊಡುತ್ತದೆ.

  1. ಬುದ್ಧ–ಹಿಂದೂ–ಜೈನ–ಪಾಶ್ಚಾತ್ಯ ದರ್ಶನಗಳ ಹೋಲಿಕೆ:

ಹಿಂದೂ ದರ್ಶನ ದ ಪ್ರಕಾರ  ಆತ್ಮ ಶಾಶ್ವತ, ದೇಹ ಮಾತ್ರ ನಶ್ವರ. ಕರ್ಮವೇ ಮುಂದಿನ ಜನ್ಮಕ್ಕೆ ಕಾರಣ. ಆದ್ದರಿಂದ ಧರ್ಮಮಾರ್ಗ ಜೀವನದ ಕೇಂದ್ರೀಯ ಬೋಧನೆ.

ಬೌದ್ಧ ದರ್ಶನ ಹೇಳುತ್ತದೆ  ಆತ್ಮ ಎಂಬುದು ಶಾಶ್ವತವಲ್ಲ; ಪ್ರತಿ ಕ್ಷಣವೂ ನಿತ್ಯ ಪರಿವರ್ತನೆಯ “ಅನಾತ್ಮ” ತತ್ವ. ಮರಣವು ಚಕ್ರದ ಒಂದು ಹಂತ; ನಿರ್ವಾಣವೇ ಅದರಿಂದ ಮುಕ್ತಿಯ ಮಾರ್ಗ.

Advertisement

ಜೈನ ದರ್ಶನ ದ ಪ್ರಕಾರ  ಜೀವ–ಅಜೀವ ವಿಭಜನೆ. ಕರ್ಮವೇ ಬಂಧನದ ಕಾರಣ. ಮರಣದ ಮೂಲಕ ಜೀವನು ದೇಹದಿಂದ ಮುಕ್ತನಾಗಬಹುದು, ಆದರೆ ಕರ್ಮದ ಫಲ ಅವನನ್ನು ಪುನಃ ಬಂಧಿಸುತ್ತದೆ.

ಪಾಶ್ಚಾತ್ಯ ದರ್ಶನ ಬೇರೆಯೇ ಹೇಳುತ್ತದೆ  ಸೋಕ್ರಟೀಸ್ ಮರಣವನ್ನು “ಆತ್ಮದ ದೇಹದಿಂದ ಮುಕ್ತಿ” ಎಂದು ಕಂಡ; ಹೈಡೆಗರ್ ಮರಣದ ಅರಿವನ್ನು “ಸತ್ಯವಾದ ಬದುಕಿನ ಮೂಲಾಧಾರ” ಎಂದು ವಿಶ್ಲೇಷಿಸಿದ.

ಇವುಗಳೆಲ್ಲವೂ  ಮರಣವು ಕೇವಲ ನಾಶವಲ್ಲ, ಅರಿವಿನ ಬಾಗಿಲು.ಎಂಬುದಾಗಿ ಸೂಚಿಸುತ್ತದೆ.

  1. ಜೀವನ–ಮರಣದ ಚಕ್ರದ ತತ್ತ್ವ:

ಜೀವನವನ್ನು ಒಂದು ನಿರಂತರ ನದಿಯಂತೆ ಕಲ್ಪಿಸಬಹುದು. ಪ್ರತಿ ಜನ್ಮವು ನದಿಯ ತೀರದಲ್ಲಿ ಎದ್ದೊಂದು ಅಲೆ; ಮರಣವು ಅಲೆಯಂತೆ  ಕಡಿದು ಹೋಗುವುದು. ಆದರೆ ನದಿ ನಿಲ್ಲುವುದಿಲ್ಲ.ಸಂಸಾರ ಎಂಬುದು  ಚಕ್ರದಂತೆ- ಪುನರ್ಜನ್ಮ, ಮರಣ, ಮತ್ತೆ ಜನನ. ಇದರಲ್ಲಿ ಮೋಕ್ಷ ಚಕ್ರ ಎಂಬುದು  ಮುಕ್ತಿ ಪಡೆದು ಶಾಶ್ವತ ಶಾಂತಿಯನ್ನು ಅನುಭವಿಸುವುದು.ಅಂದರೆ ಮರಣವು ಕೇವಲ ಮಧ್ಯದ ಹಂತ, ಅಂತಿಮ ಗುರಿಯಲ್ಲ.

  1. ಮರಣವು ನೀಡುವ ತಾತ್ವಿಕ ಪಾಠಗಳು :

ಅಹಂಕಾರದ ನಿರ್ನಾಮ : “ಮೃತ್ಯುಃ ಸರ್ವಹರಶ್ಚಾಹಂ” – ಮರಣವು ಸಂಪತ್ತು, ಸ್ಥಾನ, ಶಕ್ತಿಗಳನ್ನು ಕಸಿದುಕೊಳ್ಳುತ್ತದೆ. ಆದ್ದರಿಂದ ಮರಣದ ಅರಿವು ಅಹಂಕಾರವನ್ನು ಕರಗಿಸುತ್ತದೆ.

Advertisement

ಸಮಬುದ್ಧಿಯ ಪಾಠ : ಮರಣ ಎಲ್ಲರಿಗೂ ಸಮ. ರಾಜ–ಭಿಕ್ಷುಕ–ವಿದ್ಯಾವಂತ–ಅಜ್ಞಾನಿ ಎಲ್ಲರಿಗೂ ಅದು ಸಮಪ್ರಮಾಣದಲ್ಲಿ ಬರುವುದು.

ಬದುಕಿನ ಮೌಲ್ಯ : ಕ್ಷಣಿಕವಾದ  ಬದುಕು; ಅದನ್ನು ವ್ಯರ್ಥ ಮಾಡದೆ ಅರ್ಥಪೂರ್ಣವಾಗಿ ಜೀವಿಸುವ ಪಾಠವನ್ನು ಮರಣ ಕಲಿಸುತ್ತದೆ.

ಧರ್ಮದ ಪ್ರಾಮುಖ್ಯತೆ : ದೇಹ ನಾಶವಾದರೂ ಕರ್ಮ ನಾಶವಾಗುವುದಿಲ್ಲ. ಹೀಗಾಗಿ ಬದುಕಿನಲ್ಲಿ ಮಾಡಿದ ಕರ್ಮವೇ ಮರಣದ ನಂತರದ ಭವಿಷ್ಯವನ್ನು ರೂಪಿಸುತ್ತದೆ.

  1. ಭಯದಿಂದ ಮುಕ್ತಗೊಳಿಸುವ ಬೋಧನೆ

“ನಾಯಮಾತ್ಮಾ ಪ್ರಾಣೇನ ಲಭ್ಯೋ ನ ಚ ಕ್ರಿಯಾ” ಎಂಬುದು ಉಪನಿಷತ್ತಿನ ವಾಕ್ಯ.ತಾತ್ಪರ್ಯ –

ಆತ್ಮಜ್ಞಾನವು ಬಾಹ್ಯ ಶಕ್ತಿ ಅಥವಾ ಬಾಹ್ಯ ಆಚರಣೆಗಳಿಂದ ಮಾತ್ರ ದೊರೆಯದು. ಅದು ಒಳಗಿನ ಶ್ರದ್ಧೆ, ತಪಸ್ಸು, ಧ್ಯಾನ, ಗುರು–ಶಾಸ್ತ್ರೋಪದೇಶಗಳ ಮೂಲಕವೇ ಸಾಧ್ಯ.ಆ ಕಾರಣದಿಂದ ಮರಣವನ್ನು ಅರ್ಥಮಾಡಿಕೊಂಡಾಗ ಭಯವು ಕರಗುತ್ತದೆ. ಮರಣವು ಕತ್ತಲು ಅಲ್ಲ; ಬೆಳಕಿನತ್ತ ಸಾಗುವ ಬಾಗಿಲು ಎಂಬುದು ಅರಿವಾಗುತ್ತದೆ.

Advertisement
  1. ಜೀವನದ ತತ್ತ್ವಕ್ಕೆ ದಿಕ್ಕು

ಮರಣದ ತತ್ತ್ವವನ್ನು ಅರಿತಾಗ ಬದುಕಿನ ಮೌಲ್ಯ ಬದಲಾಗುತ್ತದೆ:ವೈರಾಗ್ಯ  ಹುಟ್ಟಿಕೊಳ್ಳುತ್ತದೆ ಅಶಾಶ್ವತ ವಸ್ತುಗಳ ಮೇಲೆ ಅತಿಯಾದ ಆಸಕ್ತಿ ಬಿಡುವುದು.ಇರುವ ಜೀವನದ ಕೊಡುಗೆಯನ್ನು  ಗೌರವಿಸುವ ಮನೋಭಾವ ,ಬದುಕಿರುವಾಗಲೇ ಪ್ರೀತಿ, ಕ್ಷಮೆ, ದಯೆ ಹಂಚಿಕೊಳ್ಳುವ ಸತ್ಯ.ಇವುಗಳೆಲ್ಲ ತಾನಾಗಿಯೇ ಬರುತ್ತದೆ.

ಮರಣವು ಕೇವಲ ಒಂದು ಅಂತ್ಯವಲ್ಲ; ಅದು ಬದುಕಿನ ಶ್ರೇಷ್ಠ ಗುರು. ಅದು ನಮಗೆ ಕ್ಷಣದ ಮೌಲ್ಯ ಕಲಿಸುತ್ತದೆ, ಅಹಂಕಾರ ಕರಗಿಸುತ್ತದೆ, ಧರ್ಮದ ದಾರಿ ತೋರಿಸುತ್ತದೆ, ಬದುಕನ್ನು ನಿಜವಾದ ಅರ್ಥದಲ್ಲಿ ಶ್ರೀಮಂತಗೊಳಿಸುತ್ತದೆ.

ಮರಣವನ್ನು ಭಯದಿಂದ ನೋಡುವ ಬದಲು, ಅದನ್ನು ಅರಿವಿನ ಕನ್ನಡಿ ಎಂದು ಕಾಣುವಾಗ, ಬದುಕೇ ಮೋಕ್ಷದ ಪಯಣವಾಗುತ್ತದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

ಚಿಕಿತ್ಸೆ ಮುಗಿದರೂ ಕ್ಯಾನ್ಸರ್ ಅಪಾಯ ಏಕೆ ಮುಗಿಯುವುದಿಲ್ಲ?

 ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೂ ವರ್ಷಗಳ ಬಳಿಕ ಮತ್ತೆ ರೋಗ ಕಾಣಿಸಿಕೊಳ್ಳುವುದಕ್ಕೆ…

8 hours ago

‌ ಭೂಮಿಗೆ ಬಿದ್ದ ಪ್ಲಾಸ್ಟಿಕ್ ಕರಗುವಂತೆ ಮಾಡಬಹುದು…!, ಇದು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರವೇ?

ಪ್ರಕೃತಿಯಲ್ಲಿ ಇರುವ ಡಿಎನ್‌ಎ, ಪ್ರೋಟೀನ್‌ಗಳಂತೆ ಪ್ಲಾಸ್ಟಿಕ್‌ಗಳನ್ನೂ ಕೂಡಾ ನಿಗದಿತ ಅವಧಿಯಲ್ಲಿ ಸ್ವಯಂ ಕರಗುವಂತೆ…

9 hours ago

2026 ರಲ್ಲಿ ಕೃಷಿ ಕ್ಷೇತ್ರ ಸ್ಥಿರತೆ , ಆದರೆ ಅಸಮಾನತೆ ಮುಂದುವರಿಕೆ

2026ರಲ್ಲಿ ಕೃಷಿ ಕ್ಷೇತ್ರ ಸ್ಥಿರಗೊಳ್ಳುವ ನಿರೀಕ್ಷೆಯಿದ್ದರೂ, ವಿವಿಧ ಬೆಳೆಗಳ ನಡುವೆ ಅಸಮಾನ ಸ್ಥಿತಿಗಳು…

9 hours ago

ಶಾಖದ ಅಲೆಗಳ ಮುನ್ಸೂಚನೆಗೆ ವಿಜ್ಞಾನಿಗಳಿಂದ ಹೊಸ ಅಧ್ಯಯನ

ವಿಶ್ವಾದ್ಯಂತ ಶಾಖದ ಅಲೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)…

9 hours ago

ಕೃಷಿ ಭೂಮಿಯಲ್ಲಿರುವ ವಿದ್ಯುತ್ ಕಂಬಕ್ಕೆ ಹೊಸ ನಿಯಮ

ಗ್ರಾಮೀಣ ವಿದ್ಯುದ್ದೀಕರಣವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಉಪಯುಕ್ತತೆ ಮೂಲಸೌಕರ್ಯಕ್ಕಾಗಿ ಭೂಮಿಯನ್ನು ಬಳಸಿದ ರೈತರಿಗೆ…

9 hours ago

ಬಿಪಿ ಕಾಯಿಲೆ ಇರುವವರಿಗೆ ಇಲ್ಲಿದೆ ಕೆಲವು ಆರೋಗ್ಯಕರ ಟಿಪ್ಸ್

ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗಿ ಬಿಟ್ಟರೆ ಅಂದರೆ ನಿಯಂತ್ರಣ ತಪ್ಪಿದರೆ ವಿವಿಧ ಸಮಸ್ಯೆ ಉಂಟಾಗುತ್ತದೆ. ಮನುಷ್ಯನ…

10 hours ago