ಚಿನ್ನಾ… ನಾ ನಿನ್ನ ಹ್ಯಾಂಗೆ ಒಲಿಸಿಕೊಳ್ಳಲಿ…? | ಗರಿಷ್ಠ ಬೆಲೆಗೆ ಏರಿದ “ಚಿನ್ನದ ಬೆಲೆ” | ಬರೋಬ್ಬರಿ 65,000 ರೂಪಾಯಿಗೆ ಏರಿದ ದರ |

November 30, 2023
1:19 PM
ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಸದ್ಯ ಬೆಲೆ ಏರಿಕೆಯ ಹಾದಿಯಲ್ಲಿದೆ.

ಚಿನ್ನ(Gold) ಈಗ ಬಡವರ ಹಾಗೂ ಮಧ್ಯಮ ವರ್ಗದವರ ಗಗನ ಕುಸುಮವಾಗಿದೆ. ಹೆಣ್ಣು ಮಕ್ಕಳನ್ನು ಯಾವ ಚಿನ್ನ ಹಾಕಿ ಮದುವೆ(Marriage) ಮಾಡಿಸುವುದು ಅನ್ನೋ ಚಿಂತೆಯಲ್ಲಿರುವಾಗಲೇ ಮತ್ತೆ ಚಿನ್ನದ ಬೆಲೆ ಏರಿದೆ(Price hike). ಈಗಾಗಲೇ ಮದುವೆ ಸಮಯ ಆರಂಭವಾಗಿದ್ದು, ಸಾಕಷ್ಟು ಮದುವೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿಯೇ , ಇತಿಹಾಸದಲ್ಲೇ ಪ್ರಥಮ ಬಾರಿಗೆ ಗರಿಷ್ಠ ಬೆಲೆಗೆ ಚಿನ್ನ (Gold) ಏರಿಕೆಯಾಗಿದೆ.

Advertisement
Advertisement

ಹೆಂಗಳೆಯರ ಅತೀ ಇಷ್ಟದ ಈ ಚಿನ್ನವನ್ನು ಸದ್ಯಕ್ಕೆ ಕೆಲವು ಮಂದಿಗೆ ಕೊಳ್ಳುವ ಹಾಗಿಲ್ಲ..!, ಅಲ್ಲ ಅಲ್ಲ ಮುಟ್ಟುವ ಹಾಗೆಯೂ ಇಲ್ಲ ಎನ್ನುವಂತಾಗಿದೆ. ಸದ್ಯ  ಬಂಗಾರದ ಬೆಲೆ 65,000 ರೂ.ಗಳ ಗಡಿ ದಾಟಿದ್ದು, ಬೆಳ್ಳಿ 78,000 ರೂ. ದಾಟಿದೆ.  ಸದ್ಯದ ಚಿನ್ನ, ಬೆಳ್ಳಿಯ ದರವನ್ನು ನೋಡುವುದಾದರೆ, 10 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆ 65,000 ರೂ., 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 58,500 ರೂ., ಒಂದು ಕೆಜಿ ಬೆಳ್ಳಿಗೆ 78,500 ಸಾವಿರ ರೂ. ಇತ್ತು. ಗುರುವಾರವೂ ಈ ದರ ಮುಂದುವರಿದಿದೆ.

ಈಗ ಮದುವೆ ಸೀಜನ್ ಆಗಿರುವುದರಿಂದ ಚಿನ್ನಕ್ಕೆ ಬೇಡಿಕೆಯಿದೆ. ಮುಂದೆ ಕ್ರಿಸ್ಮಸ್, ಹೊಸ ವರ್ಷ ಪ್ರಾರಂಭವಾಗುವುದರಿಂದ ಈ ರೇಟ್ ಮುಂದುವರೆಯಬಹುದು ಎಂದು ಜ್ಯುವೆಲ್ಲರಿ ಅಸೋಸಿಯೇಷನ್ ಮಾಲೀಕರು ಹೇಳುತ್ತಿದ್ದಾರೆ. ಚಿನ್ನದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಮುಂಬರುವ ವರ್ಷದಲ್ಲಿ 10-15% ಬಂಗಾರದಲ್ಲಿ ಏರಿಕೆಯಾಗಬಹುದು. ಬೆಳ್ಳಿ (Silver) ಕೆ.ಜಿಗೆ 1 ಲಕ್ಷದವರೆಗೆ ಆಗಬಹುದು ಎಂದು ಜ್ಯುವೆಲ್ಲರಿ ಅಸೋಸಿಯೇಷನ್ ಮಾಲೀಕರು ಅಂದಾಜಿಸುತ್ತಿದ್ದಾರೆ.

This gold, which is most loved by women, cannot be bought or touched at the moment. Currently, the price of gold has crossed Rs 65,000 and silver is Rs 78,000. crossed If we look at the current price of gold and silver, the price of 24 carat gold of 10 grams is Rs. 65,000, the price of 22 carat gold of 10 grams is Rs. 58,500, and one kg of silver is Rs. 78,500 thousand. There was This rate continued on Thursday as well.
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ
February 12, 2026
7:04 AM
by: ಮಿರರ್‌ ಡೆಸ್ಕ್
ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ
February 12, 2026
6:54 AM
by: ದ ರೂರಲ್ ಮಿರರ್.ಕಾಂ
ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ
February 12, 2026
6:47 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror