#Drought | ಬರದ ಛಾಯೆ |ಊರಿಗೆ ಊರೇ ಖಾಲಿ | ಮನೆ ಕಾಯುತ್ತಿದ್ದಾರೆ ಹಿರಿ ಜೀವಗಳು| ಮಳೆನೂ ಇಲ್ಲ, ಗುಳೆ ಹೋದವರು ಬಂದಿಲ್ಲ

June 28, 2023
1:24 PM

ಇಡೀ ಊರಿಗೆ ಊರೇ ಖಾಲಿ ಖಾಲಿಯಾಗಿದೆ. ಊರಿಡೀ ಹುಡಿಕಿದ್ರೂ ಕಾನ ಸಿಗೋಗು ಅಲ್ಲಿ ಇಲ್ಲಿ ನಿಧಾನಕ್ಕೆ ಓಡಾಡುವ ಹಿರಿ ಜೀವಗಳು ಮಾತ್ರ. ಊರು ಕೇರಿ ಗಲಾಟೆ ಎಬ್ಬಿಸುತ್ತಾ ಓಡಾಡುವ ಮಕ್ಕಳು, ಅದು ಇದು ಕೆಲಸದಲ್ಲಿ ನಿರತಾರಾಗಿರುವ ಮಹಿಳೆಯರು, ರಸ್ತೆಯಲ್ಲಿ ಅಡ್ಡಾಡುವ ಪುರುಷರು ಯಾರೂ ಇಲ್ಲಿ ಕಾಣ ಸಿಗುವುದಿಲ್ಲ. ಹೆಚ್ಚಿನ ಮನೆಗಳಿಗೆ ಬೀಗ ಜಡಿಯಲಾಗಿದೆ. ಇದು ಮುಂಗಾರು #Mansoon ಬಾರದ ಹಿನ್ನೆಲೆ ಆವರಿಸಿಕೊಂಡ ಬರ #Drought ದ ಛಾಯೆಯ ಚಿತ್ರಣ

ಬರಪೀಡಿತ ಜಿಲ್ಲೆ ಅಂತಾನೇ ಹಣೆಪಟ್ಟಿ ಕಟ್ಟಿಕೊಂಡಿರೋ ಜಿಲ್ಲೆಗಳ್ಲಿ ಬಾಗಕೋಟೆ ಕೂಡ. ಈ ಜಿಲ್ಲೆಯಾದ್ಯಂತ ಬಿರು ಬಿಸಿಲಿಗೆ ಒಣಗಿ ಬಾಯಿಬಟ್ಟಿರೋ ಹೊಲ, ಕೆರೆಗಳು.. ಉದ್ಯೋಗ ಅರಿಸಿ ಗುಳೆಹೋಗಿ ಖಾಲಿ ಹೊಡೆಯುತ್ತಿರೋ ತಾಂಡಾಗಳು. ರಣ ರಣ ಬಿಸಿಲಿನಲ್ಲಿ ಬದುಕನ್ನರಿಸಿ ಹೊರ ಹೋಗಲಾಗದೆ ಆಕಾದತ್ತ ಮುಖ ಮಾಡಿ ಮಳೆಗಾಗಿ ಕಾಯುತ್ತಿರುವ ಹಿರಿ ಜೀವಗಳು..

ಕಿತ್ತೂರು ಕರ್ನಾಟಕ ಭಾಗದಲ್ಲಿ ಮುಂಗಾರು ಕೈ ಕೊಟ್ಟಿದೆ. ಇದರಿಂದ ಕೂಲಿ ಕೆಲಸ ಸಿಗದ ಕಾರಣ ಇಡೀ ಊರಿಗೆ ಊರೇ ಗುಳೆ ಹೋಗಿದೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಲಿಂಗಾಪುರ ಗ್ರಾಮ ಖಾಲಿ ಖಾಲಿ ಹೊಡೆಯುತ್ತಿದೆ. ಲಿಂಗಾಪುರದ ಬೋರ್ವೆಲ್ಗಳಲ್ಲಿ ಇದ್ದ ಅಲ್ಪಸ್ವಲ್ಪ ನೀರು ಬತ್ತಿ ಹೋಗುತ್ತಿವೆ. ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಹತ್ತಿರ ಯಾವುದೇ ಕೈಗಾರಿಕೆಗಳು ಸಹ ಇಲ್ಲ. ನರೇಗಾ ಕೆಲಸ ಸರಿಯಾಗಿ ಸಿಗುತ್ತಿಲ್ಲ. ಸಿಕ್ಕರೂ ಸರಿಯಾದ ಸಮಯಕ್ಕೆ ಕೂಲಿ ಕೈಸೇರಲ್ಲ. ಇದರಿಂದ ಗ್ರಾಮದ ಶೇಕಡಾ 80ರಷ್ಟು ಮನೆಗಳಿಗೆ ಬೀಗಮುದ್ರೆ ಬಿದ್ದಿದೆ.

ಲಿಂಗಾಪುರ ಗ್ರಾಮದಲ್ಲಿ ಸುಮಾರು 300 ಕ್ಕೂ ಹೆಚ್ಚು ಮನೆಗಳಿವೆ. ಶೇಕಡಾ 80 ರಷ್ಟು ಕುಟುಂಬಗಳು ಮನೆಗಳಿಗೆ ಬೀಗ ಹಾಕಿ ಕೂಲಿ ಕೆಲಸಕ್ಕಾಗಿ ಮಂಗಳೂರು, ಗೋವಾಕೆ ಹೋಗಿವೆ. ನೀವೇನಾದ್ರೂ ಈ ಗ್ರಾಮದಲ್ಲಿ ಹೋದ್ರೆ ಕೇವಲ ವಯಸ್ಸಾದ ವೃದ್ಧರು ಮಾತ್ರ ಇರುವ ಮ್ಯೂಸಿಯಂಗೆ ಹೋದಂತೆ ಭಾಸವಾಗುತ್ತೆ. ಇನ್ನಾದ್ರೂ ಬೇಗ ಮಳೆ ಬರಲಿ, ಕೆರೆ-ಬಾವಿಗಳು ತುಂಬಲಿ, ಜನರು ಊರಿಗೆ ಮರಳಲಿ..

  • ಅಂತರ್ಜಾಲ ಸಂಗ್ರಹ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 02-08-2026 | ಕರಾವಳಿಯಲ್ಲಿ ಮಳೆ ಇಳಿಮುಖ ..? ರಾಜ್ಯದಲ್ಲಿ ಮುಂಗಾರು ಸ್ಥಿತಿ ಏನು..?
August 2, 2026
6:59 PM
by: ಸಾಯಿಶೇಖರ್ ಕರಿಕಳ
ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ
August 2, 2026
7:24 AM
by: ದ ರೂರಲ್ ಮಿರರ್.ಕಾಂ
ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ
August 2, 2026
7:14 AM
by: ದ ರೂರಲ್ ಮಿರರ್.ಕಾಂ
ರಾಜ್ಯಾದ್ಯಂತ ಆರ್ಭಟಿಸುತ್ತಿರುವ ವರುಣ – ಭದ್ರಾ-ನೇತ್ರಾವತಿ ಅಪಾಯದ ಮಟ್ಟ ಮೀರಿ ಪ್ರವಾಹ
August 2, 2026
6:58 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror