ಭೂಮಿತಾಯಿಯ ಕಾಯಕಕ್ಕೆ ಧರ್ಮ ಕಾಯುವವರ ಹೆಗಲು | ಕನ್ನೇರಿಯಲ್ಲೊಂದು ಮಹಾಸಮಾವೇಶ |

January 5, 2024
12:35 PM

ಸಾವಯವ ಬದುಕು(Organic farming) – ಕೃಷಿಯ ಮೌಲ್ಯಗಳನ್ನು ಜನಮಾನಸದಲ್ಲಿ ಬೇರೂರಿಸುವ ಸಂಕಲ್ಪದೊಂದಿಗೆ ಜನವರಿ 12  ಮತ್ತು 13 ರಂದು ಮಹಾಸಮಾವೇಶವು ಕೊಲ್ಹಾಪುರ(Kolhapur) ಸಮೀಪವಿರುವ ಕನ್ನೇರಿಯ(Kanneri) ಶ್ರೀ ಸಿದ್ಧಗಿರಿ ಸಂಸ್ಥಾನದಲ್ಲಿ ನಾಡಿನ ಎಲ್ಲಾ ಮಠಾಧೀಶರ, ಸಂತರ ಹಾಗೂ ಧರ್ಮದರ್ಶಿಗಳ ಮಹಾಸಮಾವೇಶ ನಡೆಯಲಿದೆ.

ಆಧುನಿಕ ಕೃಷಿಯು ಪ್ರಾಕೃತಿಕ ಮೌಲ್ಯಗಳನ್ನು ಪರಂಪರೆಗಳ ಅನುಭವಗಳನ್ನು ಗೌರವಿಸದಿರುವ ಪರಿಣಾಮದ ಗಂಭೀರತೆ ಈಗಾಗಲೇ ಹಲವು ರೀತಿಯಲ್ಲಿ ತಟ್ಟುತ್ತಿದೆ. ಕೃಷಿ ಉತ್ಪಾದನೆ ಕ್ಷೀಣಿಸುತ್ತಿದೆ, ಕೀಟ-ರೋಗದ ನಿಯಂತ್ರಣಕ್ಕೆ ಬಳಸುತ್ತಿರುವ ವಿಷಗಳು ಜೀವಜಾಲಕ್ಕೇ ಮಾರಕವಾಗುತ್ತಿವೆ, ಜನರು – ಜಾನುವಾರುಗಳು ಹೊಸ ಹೊಸ ಖಾಯಿಲೆಗಳಿಂದ ನರಳುವಂತಾಗಿದೆ, ಪುಟ್ಟ ಮಕ್ಕಳಿಗೂ ಕ್ಯಾನ್ಸರ್, ಸಕ್ಕರೆ ಖಾಯಿಲೆಗಳು… ಸಾಮಾಜಿಕ ಕಾರಣಗಳು ಯುವ ಸಮುದಾಯವನ್ನು ಕೃಷಿ ಕ್ಷೇತ್ರದಿಂದ ಬಹುದೂರ ಸರಿಸುತ್ತಿವೆ ರೈತರನ್ನು ಹುಟ್ಟಿಸಲಾಗದೆ ಗ್ರಾಮಗಳು ಬಂಜೆಯಾಗುತ್ತಿವೆ.

‘ರೈತನ ತಾಯಿ’ ಯಾರಾದಾರು ಎಂಬ ಪ್ರಶ್ನೆಗೆ ಉತ್ತರ ಸಿಗದೆ ಕೃಷಿ ಪ್ರಧಾನ ಭಾರತ ನಲುಗಿದೆ. ಆಧುನಿಕ ಶಿಕ್ಷಣದ ಸುನಾಮಿ ಗ್ರಾಮೀಣ ಚೇತನಗಳನ್ನು ನಗರಕ್ಕೆ ಹೊತ್ತೊಯ್ಯುತ್ತಿದೆ. ಈ ಎಲ್ಲಾ ಸಂಕಷ್ಟಗಳಿಗೆ ಪರಿಹಾರ ಹುಡುಕುವ ತವಕದಿಂದ ಆಯೋಜಿಸಿದ ಮಹಾಸಮಾವೇಶ ಇದಾಗಿದೆ.  ಕಾರ್ಯಕ್ರಮದ ಉದ್ದೇಶ  ನಾಡಿನ ಎಲ್ಲಾ ಪ್ರಮುಖರು, ಕೃಷಿಕರ ಆಗಮನದ ಮೂಲಕ – ಆಶೀರ್ವಾದ – ಪ್ರೇರಣೆ ಪಡೆದು ಗ್ರಾಮೀಣ ಬದುಕಿನ ಚಿತ್ರಣ ಸುಂದರಗೊಳಿಸಲು ಅತ್ಯಗತ್ಯ ಇದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ
ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ
March 23, 2026
9:12 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror