ಅನ್ಯಗ್ರಹ ಜೀವಿ(alien) ಇನ್ಯಾವುದೋ ಗ್ರಹದಲ್ಲಿಲ್ಲ. ಇದೇ ಭೂಮಿ ಮೇಲೆ ನಮ್ಮ ಜೊತೆಗೆ ಇದೆ. ಆದರೆ ಮನುಷ್ಯ ವೇಷ ಧರಿಸಿರುವ ಈ ಅನ್ಯಗ್ರಹ ಜೀವಿ ಭೂಮಿಯಲ್ಲೇ ಇದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ಅಧ್ಯಯನ ವರದಿ ಹೇಳುತ್ತಿದೆ. ಅನ್ಯಗ್ರಹ ಜೀವಿ ಕುರಿತು ಹಲವು ಸಂಶೋಧನೆಗಳು ನಡೆದಿದೆ. ಇನ್ನು ಈ ಕುರಿತು ಕೆಲ ವಿಡಿಯೋಗಳು ಹರಿದಾಡಿದೆ. ಆದರೆ ಇದ್ಯಾವುದಕ್ಕೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಇದೀಗ ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಯನ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.
ಅನ್ಯಗ್ರಹ ಜೀವಿಗಳಿಗೆ ಚಂದ್ರನ ಮೇಲೆ, ಇತರ ಗ್ರಹದ ಮೇಲೆ ಹುಡುಕುವ ಅಗತ್ಯವಿಲ್ಲ. ಇದೇ ಭೂಮಿ ಮೇಲಿದೆ. ಮುಷ್ಯರ ಜೊತೆಗೆ ವಾಸಿಸುತ್ತಿದೆ. ಮನುಷ್ಯನ ವೇಷ ಧರಿಸಿ ಅನ್ಯಗ್ರಹ ಜೀವಿಗಳು ಇಲ್ಲೇ ಇದೆ ಎಂದು ಈ ಅಧ್ಯಯನ ವರದಿ ಹೇಳುತ್ತಿದೆ. ಭೂಮಿ ಮೇಲೆ ಅನ್ಯಗ್ರಹ ಜೀವಿಗಳು ರಹಸ್ಯವಾಗಿ ಬದುಕುತ್ತಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ಸಂಶೋಧನೆ ಹೇಳುತ್ತಿದೆ. ಹ್ಯೂಮನ್ ಫ್ಲೋರಿಶಿಂಗ್ ಪ್ರೋಗ್ರಾಮ್ ಸಂಶೋಧಕರ ತಂಡ ಈ ಮಹತ್ವದ ಅಧ್ಯಯನ ನಡೆಸಿ ವರದಿ ನೀಡಿದೆ. ಭೂಮಿಯಲ್ಲಿ ಮುಷ್ಯರ ನಡುವೆ ರಹಸ್ಯವಾಗಿ ಬದುಕುತ್ತಿರುವ ಅನ್ಯಗ್ರಹ ಜೀವಿಗಳು ಇತರ ಗ್ರಹದಲ್ಲಿರುವ ಅನ್ಯಗ್ರಹ ಜೀವಿಗಳ ಕುಟುಂಬ, ಸ್ನೇಹಿತರನ್ನು ಭೇಟಿಯಾಗಲು ಅಂತರಿಕ್ಷ ನೌಕೆಗಳನ್ನು ಬಳಸುತ್ತಿರುವ ಸಾಧ್ಯತೆಯನ್ನೂ ಈ ಸಂಶೋಧನೆ ಬೆಳಕು ಚೆಲ್ಲುತ್ತಿದೆ. ಇದೇ ಅಂತರಿಕ್ಷ ನೌಕೆಗಳು ಅಲ್ಲೊಂದು ಇಲ್ಲೊಂದು ಪ್ರತ್ಯಕ್ಷವಾಗಿ ಅನ್ಯಗ್ರಹ ಜೀವಿ ಭೂಮಿಗೆ ಬಂದಿದೆ ಅನ್ನೋ ಆತಂಕ ಸೃಷ್ಟಿಯಾಗಿರುವ ಸಾಧ್ಯತೆಗಳಿವೆ ಎಂದು ಅಧ್ಯಯನ ಹೇಳುತ್ತಿದೆ.
ಏಲಿಯನ್ ಸುಳಿವು ಪತ್ತೆ, 124 ಬೆಳಕಿನ ವರ್ಷ ದೂರದಲ್ಲಿನ ಈ ಪ್ಲಾನೆಟ್ ಕುರಿತು ಸಂಶೋಧನೆ ಆರಂಭ!: ಈ ಅಧ್ಯಯನ ವರದಿ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಿದೆ. ಇದರಲ್ಲಿ ಮಾನವನ ಅಸ್ಥಿತ್ವ, ಪ್ರಾಚಿನತೆ, ನಾಗರೀಕತಗಳ ಕುರಿತು ವಿವರಿಸಲಾಗಿದೆ. ಈ ಅಧ್ಯಯನ ವರದಿಯ ಕೆಲ ಪ್ರಮುಖ ಅಂಶಗಳು ಇಲ್ಲಿವೆ. ಹ್ಯೂಮನ್ ಕ್ರಿಪ್ಟೋಟೆರೆಸ್ಟ್ರಿಯಲ್ ಪ್ರಾಚೀನ ಮಾನವನ ನಾಗರೀಕತೆ ನಶಿಸಿಹೋಗಿದೆ. ಆಧುನಿಕತೆ, ತಾಂತ್ರಿಕತೆ ಅಭಿವೃದ್ಧಿಯಲ್ಲಿ ಈ ಪ್ರಾಚೀನತೆ ನಾಶವಾಗಿದೆ. ಆದರೆ ಅದರ ಕರುಹುಗಳು ಅವಶೇಷ ರೂಪದಲ್ಲಿ ಅಸ್ತಿತ್ವದಲ್ಲಿದೆ ಎಂದು ಈ ಅಧ್ಯಯನ ವರದಿ ಹೇಳುತ್ತದೆ.
ಈ ಪೈಕಿ ಹೋಮಿನಿಡ್ ಅಥವಾ ಥೆರೋಪಾಡ್ ಕ್ರಿಪ್ಟೋಟೆರೆಸ್ಟ್ರಿಯಲ್ ಭೂಮಿಯಲ್ಲಿರುವ ಪ್ರಾಣಿ ಸಂಕುಲದಿಂದ ಸೃಷ್ಟಿಯಾಗಿರುವ ಅಥವಾ ಅಭಿವೃದ್ಧಿಯಾಗಿರುವ ಸಂಕುಲವಾಗಿದೆ. ಅಂದರೆ ಮಂಗನಿಂದ ಮಾನವ ಅನ್ನೋ ರೀತಿ ಹೋಮಿನಿಡ್ ಸಂತತಿಯಾಗಿರಬಹುದು ಅಥವಾ ಡೈನೋಸಾರ್ನಂತಹ ಸಂತತಿಯಿಂದ ಟಿಸಿಲೊಡೆದ ವಂಶಸ್ಥರಾಗಿರಬಹುದು ಎಂದು ಈ ಅಧ್ಯಯನ ಹೇಳುತ್ತಿದೆ. ಆದರೆ ಇದರ ನಡುವೆ ಬೇರೆ ಗ್ರಹಗಳಿಂದ ಅನ್ಯಗ್ರಹ ಜೀವಿಗಳು ಭೂಮಿಗೆ ಆಗಮಿಸಬಹುದು. ಈ ಜೀವಿಗಳು ವಾಸಿಸಲು ಯೋಗ್ಯವಿರುವ ಗ್ರಹಗಳಲ್ಲಿ ಮರೆ ಮಾಚಿಕೊಂಡು ಜೀವಿಸಬಹುದು ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ಅಧ್ಯಯನ ಹೇಳುತ್ತಿದೆ.
– ಅಂತರ್ಜಾಲ ಮಾಹಿತಿ
ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…
ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…
ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…
ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…
ಜಾಗತಿಕ ತಾಪಮಾನ ಪ್ರತಿ 1 ಡಿಗ್ರಿ ಏರಿದರೆ ಭಾರತದ ಭತ್ತದ ಇಳುವರಿ ಶೇ.6.6ರಷ್ಟು…
ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…