Advertisement
MIRROR FOCUS

ಹಾರ್ವರ್ಡ್ ಅಧ್ಯಯನಕ್ಕೆ ಬೆಚ್ಚಿ ಬಿದ್ದ ಜಗತ್ತು, ಭೂಮಿ ಮೇಲೆ ಮನುಷ್ಯನ ವೇಷದಲ್ಲಿದೆ ಅನ್ಯಗ್ರಹ ಜೀವಿ…!

Share

ಅನ್ಯಗ್ರಹ ಜೀವಿ(alien) ಇನ್ಯಾವುದೋ ಗ್ರಹದಲ್ಲಿಲ್ಲ. ಇದೇ ಭೂಮಿ ಮೇಲೆ ನಮ್ಮ ಜೊತೆಗೆ ಇದೆ. ಆದರೆ ಮನುಷ್ಯ ವೇಷ ಧರಿಸಿರುವ ಈ ಅನ್ಯಗ್ರಹ ಜೀವಿ ಭೂಮಿಯಲ್ಲೇ ಇದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ಅಧ್ಯಯನ ವರದಿ ಹೇಳುತ್ತಿದೆ.  ಅನ್ಯಗ್ರಹ ಜೀವಿ ಕುರಿತು ಹಲವು ಸಂಶೋಧನೆಗಳು ನಡೆದಿದೆ. ಇನ್ನು ಈ ಕುರಿತು ಕೆಲ ವಿಡಿಯೋಗಳು ಹರಿದಾಡಿದೆ. ಆದರೆ ಇದ್ಯಾವುದಕ್ಕೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಇದೀಗ ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಯನ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.

ಅನ್ಯಗ್ರಹ ಜೀವಿಗಳಿಗೆ ಚಂದ್ರನ ಮೇಲೆ, ಇತರ ಗ್ರಹದ ಮೇಲೆ ಹುಡುಕುವ ಅಗತ್ಯವಿಲ್ಲ. ಇದೇ ಭೂಮಿ ಮೇಲಿದೆ. ಮುಷ್ಯರ ಜೊತೆಗೆ ವಾಸಿಸುತ್ತಿದೆ. ಮನುಷ್ಯನ ವೇಷ ಧರಿಸಿ ಅನ್ಯಗ್ರಹ ಜೀವಿಗಳು ಇಲ್ಲೇ ಇದೆ ಎಂದು ಈ ಅಧ್ಯಯನ ವರದಿ ಹೇಳುತ್ತಿದೆ. ಭೂಮಿ ಮೇಲೆ ಅನ್ಯಗ್ರಹ ಜೀವಿಗಳು ರಹಸ್ಯವಾಗಿ ಬದುಕುತ್ತಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ಸಂಶೋಧನೆ ಹೇಳುತ್ತಿದೆ. ಹ್ಯೂಮನ್ ಫ್ಲೋರಿಶಿಂಗ್ ಪ್ರೋಗ್ರಾಮ್ ಸಂಶೋಧಕರ ತಂಡ ಈ ಮಹತ್ವದ ಅಧ್ಯಯನ ನಡೆಸಿ ವರದಿ ನೀಡಿದೆ. ಭೂಮಿಯಲ್ಲಿ ಮುಷ್ಯರ ನಡುವೆ ರಹಸ್ಯವಾಗಿ ಬದುಕುತ್ತಿರುವ ಅನ್ಯಗ್ರಹ ಜೀವಿಗಳು ಇತರ ಗ್ರಹದಲ್ಲಿರುವ ಅನ್ಯಗ್ರಹ ಜೀವಿಗಳ ಕುಟುಂಬ, ಸ್ನೇಹಿತರನ್ನು ಭೇಟಿಯಾಗಲು ಅಂತರಿಕ್ಷ ನೌಕೆಗಳನ್ನು ಬಳಸುತ್ತಿರುವ ಸಾಧ್ಯತೆಯನ್ನೂ ಈ ಸಂಶೋಧನೆ ಬೆಳಕು ಚೆಲ್ಲುತ್ತಿದೆ. ಇದೇ ಅಂತರಿಕ್ಷ ನೌಕೆಗಳು ಅಲ್ಲೊಂದು ಇಲ್ಲೊಂದು ಪ್ರತ್ಯಕ್ಷವಾಗಿ ಅನ್ಯಗ್ರಹ ಜೀವಿ ಭೂಮಿಗೆ ಬಂದಿದೆ ಅನ್ನೋ ಆತಂಕ ಸೃಷ್ಟಿಯಾಗಿರುವ ಸಾಧ್ಯತೆಗಳಿವೆ ಎಂದು ಅಧ್ಯಯನ ಹೇಳುತ್ತಿದೆ.

ಏಲಿಯನ್ ಸುಳಿವು ಪತ್ತೆ, 124 ಬೆಳಕಿನ ವರ್ಷ ದೂರದಲ್ಲಿನ ಈ ಪ್ಲಾನೆಟ್ ಕುರಿತು ಸಂಶೋಧನೆ ಆರಂಭ!: ಈ ಅಧ್ಯಯನ ವರದಿ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಿದೆ. ಇದರಲ್ಲಿ ಮಾನವನ ಅಸ್ಥಿತ್ವ, ಪ್ರಾಚಿನತೆ, ನಾಗರೀಕತಗಳ ಕುರಿತು ವಿವರಿಸಲಾಗಿದೆ. ಈ ಅಧ್ಯಯನ ವರದಿಯ ಕೆಲ ಪ್ರಮುಖ ಅಂಶಗಳು ಇಲ್ಲಿವೆ. ಹ್ಯೂಮನ್ ಕ್ರಿಪ್ಟೋಟೆರೆಸ್ಟ್ರಿಯಲ್ ಪ್ರಾಚೀನ ಮಾನವನ ನಾಗರೀಕತೆ ನಶಿಸಿಹೋಗಿದೆ. ಆಧುನಿಕತೆ, ತಾಂತ್ರಿಕತೆ ಅಭಿವೃದ್ಧಿಯಲ್ಲಿ ಈ ಪ್ರಾಚೀನತೆ ನಾಶವಾಗಿದೆ. ಆದರೆ ಅದರ ಕರುಹುಗಳು ಅವಶೇಷ ರೂಪದಲ್ಲಿ ಅಸ್ತಿತ್ವದಲ್ಲಿದೆ ಎಂದು ಈ ಅಧ್ಯಯನ ವರದಿ ಹೇಳುತ್ತದೆ.

ಈ ಪೈಕಿ ಹೋಮಿನಿಡ್ ಅಥವಾ ಥೆರೋಪಾಡ್ ಕ್ರಿಪ್ಟೋಟೆರೆಸ್ಟ್ರಿಯಲ್‌ ಭೂಮಿಯಲ್ಲಿರುವ ಪ್ರಾಣಿ ಸಂಕುಲದಿಂದ ಸೃಷ್ಟಿಯಾಗಿರುವ ಅಥವಾ ಅಭಿವೃದ್ಧಿಯಾಗಿರುವ ಸಂಕುಲವಾಗಿದೆ. ಅಂದರೆ ಮಂಗನಿಂದ ಮಾನವ ಅನ್ನೋ ರೀತಿ ಹೋಮಿನಿಡ್ ಸಂತತಿಯಾಗಿರಬಹುದು ಅಥವಾ ಡೈನೋಸಾರ್‌ನಂತಹ ಸಂತತಿಯಿಂದ ಟಿಸಿಲೊಡೆದ ವಂಶಸ್ಥರಾಗಿರಬಹುದು ಎಂದು ಈ ಅಧ್ಯಯನ ಹೇಳುತ್ತಿದೆ. ಆದರೆ ಇದರ ನಡುವೆ ಬೇರೆ ಗ್ರಹಗಳಿಂದ ಅನ್ಯಗ್ರಹ ಜೀವಿಗಳು ಭೂಮಿಗೆ ಆಗಮಿಸಬಹುದು. ಈ ಜೀವಿಗಳು ವಾಸಿಸಲು ಯೋಗ್ಯವಿರುವ ಗ್ರಹಗಳಲ್ಲಿ ಮರೆ ಮಾಚಿಕೊಂಡು ಜೀವಿಸಬಹುದು ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ಅಧ್ಯಯನ ಹೇಳುತ್ತಿದೆ.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

10 hours ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

19 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

23 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

2 days ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago