ಹವಾಮಾನ ವರದಿ | 13-12-2025 | ತುಂತುರು ಮಳೆಯ ಸಾಧ್ಯತೆ ಇದೆ..! ಕಾರಣ ಏನು..?

December 13, 2025
8:27 PM

14.12.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :  ಕಾಸರಗೋಡು ಸೇರಿದಂತೆ ರಾಜ್ಯದಾದ್ಯಂತ ಉತ್ತಮ ಚಳಿ ಹಾಗೂ ಒಣ ಹವೆ ಮುಂದುವರಿಯಲಿದೆ.

ಮಧ್ಯಮ ಸ್ತರದ ಗಾಳಿಯು ಗುಜರಾತ್ ಹಾಗೂ ರಾಜಸ್ಥಾನ ಕೇಂದ್ರಿಕರಿಸಿಕೊಂಡು ಬೃಹತ್ ಗಾತ್ರದಲ್ಲಿ ಅಸ್ವಾಭಾವಿಕ ತಿರುಗುವಿಕೆಯ ಪರಿಣಾಮದಿಂದ ಉತ್ತರ ಭಾರತದ ಕಡೆಯಿಂದ ಶೀತ ಮಾರುತಗಳು ದಕ್ಷಿಣದ ಕಡೆಗೆ ಬಲವಾಗಿ ಬೀಸುತ್ತಿದೆ ಹಾಗೂ ರಾಜ್ಯದ ವಾತಾವರಣದ ಉಷ್ಣಾಂಶ ತೀವ್ರವಾಗಿ ಕುಸಿದಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಈಗಿನಂತೆ ಡಿಸೆಂಬರ್ 15 ರಿಂದ ಈ ತಿರುಗುವಿಕೆಯು ಮತ್ತಷ್ಟು ವಿಸ್ತಾರಗೊಂಡು ಬಂಗಾಳಕೊಲ್ಲಿಯ ತನಕ ತಲಪುವ ನಿರೀಕ್ಷೆಯಿದೆ. ಈ ಗಾಳಿಯು ಬಂಗಾಳಕೊಲ್ಲಿಯ ಕಡೆಯಿಂದ ಬೀಸಿದರೆ, ವಾತಾವರಣದ ಉಷ್ಣಾಂಶ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿ, ಡಿಸೆಂಬರ್ 15 ರಿಂದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿಯ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಸಾಧ್ಯತೆಗಳಿವೆ.
ಡಿಸೆಂಬರ್ 16 ರಿಂದ 18 ರ ತನಕ ದಕ್ಷಿಣ ಒಳನಾಡು ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಪಿಎಂ ಯಶಸ್ವಿನಿ ಯೋಜನೆ | ಪರೀಕ್ಷೆ ಇಲ್ಲದೆ ಉಚಿತ ಲ್ಯಾಪ್ ಟಾಪ್ ಹಾಗೂ 3 ಲಕ್ಷ ನೆರವು
December 14, 2025
7:28 AM
by: ರೂರಲ್‌ ಮಿರರ್ ಸುದ್ದಿಜಾಲ
ತೆಂಗು ಉತ್ಪಾದಿಸುವ ಪ್ರಮುಖ ರಾಜ್ಯವಾಗಿ ಬದಲಾಗುತ್ತಿರುವ ಗುಜರಾತ್
December 13, 2025
9:50 PM
by: ರೂರಲ್‌ ಮಿರರ್ ಸುದ್ದಿಜಾಲ
ರಾಜ್ಯದಲ್ಲಿ ಕೋಳಿಗಳಿಗೆ ಹಾರ್ಮೋನ್ ಚುಚ್ಚು ಮದ್ದು ಬಳಸುವಂತಿಲ್ಲ
December 13, 2025
9:36 PM
by: ರೂರಲ್‌ ಮಿರರ್ ಸುದ್ದಿಜಾಲ
ತೆಂಗಿಗೆ ಬೆಂಬಲ ಬೆಲೆ | ಕ್ವಿಂಟಾಲ್ ಗೆ 445 ರೂ ವರೆಗೆ ಹೆಚ್ಚಳ
December 13, 2025
8:47 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror