ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿಯಾದ ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) 2022-23 ನೇ ಹಣಕಾಸು ವರ್ಷದ ವಾರ್ಷಿಕ ಬಜೆಟನ್ನು ಬಿಡುಗಡೆ ಮಾಡಿದ್ದು, 3,096.40 ಕೋಟಿ ರೂಪಾಯಿಗಳ ಬಜೆಟ್ ಮಾಡಲಾಗಿದೆ.
ಬಜೆಟ್ ಸಭೆಯಲ್ಲಿ ಮುಂದಿನ 12 ತಿಂಗಳ ಹಣಕಾಸು ಯೋಜನೆಯನ್ನು ಪರಿಶೀಲಿಸಿದ ನಂತರ, ಪ್ರಸಕ್ತ ವರ್ಷ 1000 ಕೋಟಿ ಆದಾಯದ ಸಿಂಹಪಾಲು ದೇವಸ್ಥಾನದ ಹುಂಡಿ ಅಥವಾ ಭಕ್ತರ ಕಾಣಿಕೆಯಿಂದ ಬರುವ ನಿರೀಕ್ಷೆಯಿದೆ. ಅದೇ ರೀತಿ ಬಡ್ಡಿ ರಸೀದಿಗಳು 6668.5 ಕೋಟಿ ರೂಪಾಯಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ, ಆದರೆ ಲಡ್ಡು ಮತ್ತು ಇತರ ಪ್ರಸಾದ ಮಾರಾಟದಿಂದ 365 ಕೋಟಿ ರೂಪಾಯಿಗಳ ನಿರೀಕ್ಷೆಯಿದೆ.
1,360.15 ಕೋಟಿ ರೂ.ಗಳ ಅತ್ಯಧಿಕ ವೆಚ್ಚವು ಮಾನವ ಸಂಪನ್ಮೂಲ ಪಾವತಿಗಳ ಮತ್ತು ನಂತರದ ವಸ್ತುಗಳ ಖರೀದಿ ಮತ್ತು ಇಂಜಿನಿಯರಿಂಗ್ ಬಂಡವಾಳದ ಕೆಲಸಗಳಿಗೆ ಕ್ರಮವಾಗಿ ರೂ.489.50 ಕೋಟಿ ಮತ್ತಿ ರೂ 220 ಕೋಟಿಗಳಾಗಿವೆ.
ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ನೇತೃತ್ವದ ಟಿಟಿಡಿ ಮಂಡಳಿಯು 2022-23 ರವಾರ್ಷಿಕ ಬಜೆಟ್ ಮತ್ತು 2021-22 ಪರಿಷ್ಕೃತ ಬಜೆಟ್ ಅಂದಾಜು 3,೦೦೦.76 ಕೋಟಿ ರೂ ಆಗಿದೆ.
ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…