ಈ ಪ್ರಾಣಿಯ ಹಾಲಿನಲ್ಲಿ ಬಿಯರ್​ಗಿಂತ ಹೆಚ್ಚು ಆಲ್ಕೋಹಾಲ್ ಇರುತ್ತಂತೆ……! |

May 30, 2023
9:51 PM

ಮನುಷ್ಯ ಹುಟ್ಟಿನಿಂದ ಸಾಯುವ ತನಕ ಹಾಲು ಕುಡಿದು ಶಕ್ತಿ ವೃದ್ಧಿಸಿಕೊಳ್ಳುತ್ತಾನೆ. ಹುಟ್ಟುತ್ತಾ ತಾಯಿ ಹಾಲು ಕುಡಿದರೆ ನಂತರ ಬೆಳೆಯುತ್ತಾ ದನ ಅಥವಾ ಎಮ್ಮೆ ಹಾಲು ಕುಡಿಯುವುದು ರೂಢಿ. ಕೆಲವರು ಕತ್ತೆ, ಆಡು, ಒಂಟೆ, ಕುರಿ ಹಾಲು ಕುಡಿಯುತ್ತಾರೆ. ಆದರೆ ಇದು ತೀರ ವಿರಳ. ಇನ್ನುಳಿದಂತೆ ಅನೇಕ ಪ್ರಾಣಿಗಳು ಹಾಲು ನೀಡಿದರು ಅದು ಮನುಷ್ಯನ ಬಳಕೆಗೆ ನಿಷಿದ್ಧ. ಆದರೆ ಇಲ್ಲೊಂದು ಪ್ರಾಣಿಯ ಹಾಲು ಮದ್ಯದಲ್ಲಿ ಇರುವ ಅಮಲಿಗಿಂತ ಜಾಸ್ತಿ ಅಲ್ಕೋಹಾಲ್ ಕಂಟೆಂಟ್ ಇದೆಯಂತೆ…!. ಆದರೆ ಅದನ್ನು ಮನುಷ್ಯ ಬಳಸಬಹುದಾ..? 

ಪ್ರಾಣಿಗಳ ಹಾಲಿನಲ್ಲಿ ವಿಸ್ಕಿ, ಬಿಯರ್ ಅಥವಾ ವೈನ್‌ಗಿಂತ ಹೆಚ್ಚು ಆಲ್ಕೋಹಾಲ್ ಇದೆ ಎಂದರೆ ನೀವು ನಂಬುತ್ತೀರಾ? ಪ್ರತಿ ಮನೆಯಲ್ಲಿ ಪ್ರತಿದಿನ ಹಾಲು ಸೇವಿಸಲಾಗುತ್ತಿದೆ. ಕೆಲವರು ಹಸುವಿನ ಹಾಲನ್ನು ಇಷ್ಟಪಡುತ್ತಾರೆ, ಇನ್ನು ಕೆಲವರ ಮನೆಯಲ್ಲಿ ಎಮ್ಮೆಯ ಹಾಲನ್ನು ಕುಡಿಯುತ್ತಾರೆ. ಆದರೆ, ಕೆಲವೊಮ್ಮೆ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಮೇಕೆ ಹಾಲು ಕುಡಿಯುವುದು ಉತ್ತಮ.

ಹಸು, ಎಮ್ಮೆ ಅಥವಾ ಮೇಕೆ ಹಾಲು ಪ್ರೋಟೀನ್ ಗಳು ಮತ್ತು ವಿಟಮಿನ್‌ ಗಳಿಂದ ಸಮೃದ್ಧವಾಗಿದೆ. ಹಾಗಿದ್ದರೆ ಕೆಲವು ಪ್ರಾಣಿಯ ಹಾಲು ಕುಡಿದರೆ ಅಮಲು ಬರುತ್ತದೆ. ಇದು ಯಾವ ಪ್ರಾಣಿ? ಅದರ ಹಾಲಿನಲ್ಲಿ ಎಷ್ಟು ಆಲ್ಕೋಹಾಲ್ ಕಂಡುಬರುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಈ ವರದಿಯ ಪ್ರಕಾರ ಆನೆಯ ಹಾಲು ಶೇ.60 ರಷ್ಟು ಆಲ್ಕೋಹಾಲ್ ಇರುತ್ತದೆಯಂತೆ.

ಆನೆಯ ಹಾಲಿನಲ್ಲಿ ಶೇಕಡಾ 60ರಷ್ಟು ಆಲ್ಕೋಹಾಲ್ ಇರುತ್ತದೆ. ವಾಸ್ತವವಾಗಿ, ಆನೆಯು ಕಬ್ಬನ್ನು ತಿನ್ನಲು ಇಷ್ಟಪಡುತ್ತದೆ. ಅದೇ ಸಮಯದಲ್ಲಿ, ಕಬ್ಬು ದೊಡ್ಡ ಪ್ರಮಾಣದಲ್ಲಿ ಆಲ್ಕೋಹಾಲ್-ರೂಪಿಸುವ ಪದಾರ್ಥಗಳನ್ನು ಹೊಂದಿರುತ್ತದೆ. ಆದ್ದರಿಂದ, ಆನೆಯ ಹಾಲಿನಲ್ಲಿ ಆಲ್ಕೋಹಾಲ್ ಸಮೃದ್ಧವಾಗಿದೆ. ಸಂಶೋಧಕರ ಪ್ರಕಾರ, ಆನೆ ಹಾಲು ಮಾನವ ಬಳಕೆಗೆ ಸೂಕ್ತವಲ್ಲ. ಕೆಲವು ಅಧ್ಯಯನಗಳ ಪ್ರಕಾರ, ಆನೆಯ ಹಾಲಿನಲ್ಲಿ ಕಂಡುಬರುವ ರಾಸಾಯನಿಕಗಳು ಮನುಷ್ಯರಿಗೆ ಅಪಾಯಕಾರಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!
July 15, 2026
9:49 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?
July 15, 2026
2:10 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?
July 15, 2026
7:02 AM
by: ದ ರೂರಲ್ ಮಿರರ್.ಕಾಂ
ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror