ನೀರಿನ ಅಡಿಯಲ್ಲೇ ಮುಳುಗಿರುತ್ತೆ ಈ ಅಣೆಕಟ್ಟು | ಸರ್ ಎಂ ವಿಶ್ವೇಶ್ವರಯ್ಯನವರು ಶರಾವತಿ ನದಿಗೆ ಕಟ್ಟಿದ ಹಿರೇಭಾಸ್ಕರ ಡ್ಯಾಂ |

June 13, 2023
2:30 PM

ಕರ್ನಾಟಕ ನದಿಗಳ ತವರೂರು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಅನೇಕ ನದಿಗಳು ಉಗಮಗೊಳ್ಳುತ್ತವೆ. ರೈತಾಪಿ ವರ್ಗಕ್ಕೆ ಈ ನದಿಗಳೇ ನೀರಿನ ಮೂಲ. ಕಡು ಬೇಸಿಗಯಲ್ಲೂ ನದಿಗಳು ಕೃಷಿಗೆ ನೀರು ಒದಗಿಸುತ್ತವೆ. ನಮ್ಮ ಪೂರ್ವಜರು ಕಟ್ಟಿದ ವಿವಿಧ ನಾವಿನ್ಯತೆಯ ಅಣೆಕಟ್ಟುಗಳು ಇದನ್ನು ಸಾಧ್ಯವಾಗಿಸಿವೆ. ರಾಜ್ಯದಲ್ಲಿ ಅನೇಕ ಜಲಾಶಯಗಳಿವೆ. ಆದರೆ ಈ ಜಲಾಶಯ ಮಾತ್ರ ವಿಶೇಷ.  ಹಾಗೆ ಈ ಜಲಾಶವನ್ನು ನೋಡಿರುವವರು ಬಹು ವಿರಳ. ಇದು ವರ್ಷಪೂರ್ತಿ ನೀರಿನಲ್ಲೇ ಮುಳುಗಿರುತ್ತದೆ.  ಈ ಜಲಾಶಯ  ಕಾಣಲು ಸಿಗೋದು ಹತ್ತಾರು ವರ್ಷಗಳಿಗೊಮ್ಮೆ ಮಾತ್ರ! ಶಿವಮೊಗ್ಗ ಜಿಲ್ಲೆಯ ಶರಾವತಿ ಒಡಲಲ್ಲಿ ಮುಳುಗಿ ಹೋಗಿರುವ ರಾಜ್ಯದ ಹಳೆಯ ಜಲಾಶಯ ಇದು.

ಲಿಂಗನಮಕ್ಕಿ ಜಲಾಶಯ ನಿರ್ಮಾಣಕ್ಕಿಂತ ಮೊದಲು, ಅಂದರೆ 20 ವರ್ಷಗಳ ಹಿಂದೆ ಇನ್ನೊಂದು ಜಲಾಶಯ ನಿರ್ಮಿಸಲಾಗಿತ್ತು. ಶರಾವತಿ ನದಿಗೆ ಅಡ್ಡಲಾಗಿ ಮೊದಲು ಹಿರೇಭಾಸ್ಕರ ಎಂಬ ಡ್ಯಾಂನ್ನು ಸರ್.ಎಂ.ವಿಶ್ವೇಶ್ವರಯ್ಯನವರು ನಿರ್ಮಿಸಿದ್ದು. ಶರಾವತಿ ಹಾಗೂ ಎಣ್ಣೆ ಹೊಳೆ ಸಂಗಮ ಸ್ಥಾನದ ಹಿರೇಬಚ್ಚಗಾರು ಎಂಬಲ್ಲಿ ಸಮುದ್ರ ಮಟ್ಟದಿಂದ 1778 ಅಡಿ ಎತ್ತರದಲ್ಲಿ ಡ್ಯಾಂ ನಿರ್ಮಾಣಗೊಂಡಿತ್ತು.

ಮಡೇನೂರು ಡ್ಯಾಂ, ಹಿರೇಭಾಸ್ಕರ ಡ್ಯಾಂ ಎಂದು ಸಹ ಕರೆಯಲಾಗುತ್ತೆ. 1939ರಲ್ಲಿ ಶರಾವತಿ ಕಣಿವೆ ಜಲ ವಿದ್ಯುತ್ ಯೋಜನೆಯ ಶಂಕುಸ್ಥಾಪನೆ ನೆರವೇರಿದ್ದರೂ, ಡ್ಯಾಂ ಕಾಮಗಾರಿ 1943ರಲ್ಲಿ ಪ್ರಾರಂಭಗೊಂಡು 1948ಕ್ಕೆ ಪೂರ್ಣಗೊಂಡಿತ್ತು.
ಈ ಡ್ಯಾಂನ ವಿನ್ಯಾಸ ಎಂಥವರೂ ವಿಸ್ಮಯಗೊಳ್ಳುವಂತಿದೆ. 50 ವರ್ಷಕ್ಕೂ ಹೆಚ್ಚು ಕಾಲ ಈ ಡ್ಯಾಂ ನೀರಿನಲ್ಲಿ ಮುಳುಗಿಯೇ ಇತ್ತು. ಆದ್ರೂ ಇದುವರೆಗೆ ಖಡಕ್ ಆಗಿ ಗಟ್ಟಿಮುಟ್ಟಾಗಿರುವುದು ಹಿರೇಭಾಸ್ಕರ್ ಡ್ಯಾಂನ ಇನ್ನೊಂದು ವಿಶೇಷ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬೇವಿನ ಬೀಜದಿಂದ ಆದಾಯದ ಅವಕಾಶ ! ಚಿಕ್ಕಮಗಳೂರಿನ ಯುವ ರೈತನ ಸಕ್ಸಸ್ ಸ್ಟೋರಿ
May 4, 2026
2:57 PM
by: ದ ರೂರಲ್ ಮಿರರ್.ಕಾಂ
ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕೃಷಿಗೆ ಎದುರಾಗುತ್ತಿರುವ ಸವಾಲು
May 4, 2026
7:58 AM
by: ದ ರೂರಲ್ ಮಿರರ್.ಕಾಂ
ಯಾದಗಿರಿಯಲ್ಲಿ ಬಿಸಿಗಾಳಿ ಎಚ್ಚರಿಕೆ – ‘ಯೆಲ್ಲೋ ಅಲರ್ಟ್’ ಘೋಷಣೆ, ಮುನ್ನೆಚ್ಚರಿಕೆ ಪಾಲಿಸಿ..!
May 4, 2026
7:35 AM
by: ಮಿರರ್‌ ಡೆಸ್ಕ್
ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!
May 3, 2026
10:27 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror