ನೀರಿನ ಅಡಿಯಲ್ಲೇ ಮುಳುಗಿರುತ್ತೆ ಈ ಅಣೆಕಟ್ಟು | ಸರ್ ಎಂ ವಿಶ್ವೇಶ್ವರಯ್ಯನವರು ಶರಾವತಿ ನದಿಗೆ ಕಟ್ಟಿದ ಹಿರೇಭಾಸ್ಕರ ಡ್ಯಾಂ |

June 13, 2023
2:30 PM

ಕರ್ನಾಟಕ ನದಿಗಳ ತವರೂರು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಅನೇಕ ನದಿಗಳು ಉಗಮಗೊಳ್ಳುತ್ತವೆ. ರೈತಾಪಿ ವರ್ಗಕ್ಕೆ ಈ ನದಿಗಳೇ ನೀರಿನ ಮೂಲ. ಕಡು ಬೇಸಿಗಯಲ್ಲೂ ನದಿಗಳು ಕೃಷಿಗೆ ನೀರು ಒದಗಿಸುತ್ತವೆ. ನಮ್ಮ ಪೂರ್ವಜರು ಕಟ್ಟಿದ ವಿವಿಧ ನಾವಿನ್ಯತೆಯ ಅಣೆಕಟ್ಟುಗಳು ಇದನ್ನು ಸಾಧ್ಯವಾಗಿಸಿವೆ. ರಾಜ್ಯದಲ್ಲಿ ಅನೇಕ ಜಲಾಶಯಗಳಿವೆ. ಆದರೆ ಈ ಜಲಾಶಯ ಮಾತ್ರ ವಿಶೇಷ.  ಹಾಗೆ ಈ ಜಲಾಶವನ್ನು ನೋಡಿರುವವರು ಬಹು ವಿರಳ. ಇದು ವರ್ಷಪೂರ್ತಿ ನೀರಿನಲ್ಲೇ ಮುಳುಗಿರುತ್ತದೆ.  ಈ ಜಲಾಶಯ  ಕಾಣಲು ಸಿಗೋದು ಹತ್ತಾರು ವರ್ಷಗಳಿಗೊಮ್ಮೆ ಮಾತ್ರ! ಶಿವಮೊಗ್ಗ ಜಿಲ್ಲೆಯ ಶರಾವತಿ ಒಡಲಲ್ಲಿ ಮುಳುಗಿ ಹೋಗಿರುವ ರಾಜ್ಯದ ಹಳೆಯ ಜಲಾಶಯ ಇದು.

ಲಿಂಗನಮಕ್ಕಿ ಜಲಾಶಯ ನಿರ್ಮಾಣಕ್ಕಿಂತ ಮೊದಲು, ಅಂದರೆ 20 ವರ್ಷಗಳ ಹಿಂದೆ ಇನ್ನೊಂದು ಜಲಾಶಯ ನಿರ್ಮಿಸಲಾಗಿತ್ತು. ಶರಾವತಿ ನದಿಗೆ ಅಡ್ಡಲಾಗಿ ಮೊದಲು ಹಿರೇಭಾಸ್ಕರ ಎಂಬ ಡ್ಯಾಂನ್ನು ಸರ್.ಎಂ.ವಿಶ್ವೇಶ್ವರಯ್ಯನವರು ನಿರ್ಮಿಸಿದ್ದು. ಶರಾವತಿ ಹಾಗೂ ಎಣ್ಣೆ ಹೊಳೆ ಸಂಗಮ ಸ್ಥಾನದ ಹಿರೇಬಚ್ಚಗಾರು ಎಂಬಲ್ಲಿ ಸಮುದ್ರ ಮಟ್ಟದಿಂದ 1778 ಅಡಿ ಎತ್ತರದಲ್ಲಿ ಡ್ಯಾಂ ನಿರ್ಮಾಣಗೊಂಡಿತ್ತು.

ಮಡೇನೂರು ಡ್ಯಾಂ, ಹಿರೇಭಾಸ್ಕರ ಡ್ಯಾಂ ಎಂದು ಸಹ ಕರೆಯಲಾಗುತ್ತೆ. 1939ರಲ್ಲಿ ಶರಾವತಿ ಕಣಿವೆ ಜಲ ವಿದ್ಯುತ್ ಯೋಜನೆಯ ಶಂಕುಸ್ಥಾಪನೆ ನೆರವೇರಿದ್ದರೂ, ಡ್ಯಾಂ ಕಾಮಗಾರಿ 1943ರಲ್ಲಿ ಪ್ರಾರಂಭಗೊಂಡು 1948ಕ್ಕೆ ಪೂರ್ಣಗೊಂಡಿತ್ತು.
ಈ ಡ್ಯಾಂನ ವಿನ್ಯಾಸ ಎಂಥವರೂ ವಿಸ್ಮಯಗೊಳ್ಳುವಂತಿದೆ. 50 ವರ್ಷಕ್ಕೂ ಹೆಚ್ಚು ಕಾಲ ಈ ಡ್ಯಾಂ ನೀರಿನಲ್ಲಿ ಮುಳುಗಿಯೇ ಇತ್ತು. ಆದ್ರೂ ಇದುವರೆಗೆ ಖಡಕ್ ಆಗಿ ಗಟ್ಟಿಮುಟ್ಟಾಗಿರುವುದು ಹಿರೇಭಾಸ್ಕರ್ ಡ್ಯಾಂನ ಇನ್ನೊಂದು ವಿಶೇಷ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ
August 22, 2026
2:07 PM
by: ಸಾಯಿಶೇಖರ್ ಕರಿಕಳ
ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ
August 22, 2026
6:47 AM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ
August 21, 2026
7:49 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ
August 21, 2026
4:04 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror