ಇದು ಅಂದು-ಇಂದಿನ ಲೆಕ್ಕಾಚಾರ | ಗತಕಾಲದ ವೈಭವಕ್ಕೆ ಇಂದಿನ ಐಶಾರಾಮಿ ಜೀವನ ಎಂದೂ ಸಮ ಆಗಲ್ಲ ಯಾಕೆ..?

December 4, 2023
11:30 AM
ಅಂದು ಹಾಗೂ ಇಂದಿನ ಬದುಕಿನ ಬಗ್ಗೆ ಎಂ ಡಿ ಪ್ರಧಾನಿ ಅವರು ಬರೆದ ಬರಹವೊಂದು ಇಲ್ಲಿದೆ...

ಅದೊಂದು ಕಾಲ ಇತ್ತು. ಸಾವದಾನ, ಸಮಧಾನ, ಸರಳತೆಯ ಬದುಕು(Simple Life) ಇತ್ತು. ದಿನಕಳೆದಂತೆ ಬದುಕುವ ರೀತಿ ಬದಲಾಗುತ್ತಾ ಹೋಯ್ತ. ಒಂದೋಳ್ಳೆ ರೀತಿಯಾಗಿ ಸಾಗುತಿದ್ದ ಜೀವನಕ್ಕೆ ಆಧುನಿಕರಣದ(Modernization) ಟಚ್‌ ಸಿಗುತ್ತಾ ಹೋಯ್ತು. ಹಳೆ ನೀರು ಕೊಚ್ಚಿ ಹೋಗಿ ಹೊಸ ನೀರು ಬಂತು. ಆದರೆ ಬದುಕು ಅದೇ. ಜೀವನ ಶೈಲಿ(Life Style) ಬದಲಾಯ್ತು. ಆದರೆ ಜೀವನ ಅದೇ.. ತಲತಲಾಂತರದಿಂದ ಬಂದ ನಮ್ಮ ಆಚರಣೆ ಬಿಟ್ಟು ಕೆಲವೊಂದು ಬದಲಾವಣೆಗಳು ನಮ್ಮ ಜೀವನದಲ್ಲಿ ಆದ್ರೂ ಅದರಿಂದ ಪ್ರಯೋಜನ ಶೂನ್ಯ..

Advertisement
Advertisement

ಹಾಗಿದ್ದರೆ ಅಂದು ಹೇಗಿತ್ತು…?

– ಹಳ್ಳದಲ್ಲಿ ಹರಿವ ನೀರಿಗೆ ಬಾಯಾಕಿ ಕುಡಿದಾಗ ನೆಗಡಿಯಾಗಲಿಲ್ಲ, ಇಂದು ಬಿಸ್ಲೇರಿ ನೀರು ಕುಡಿದಾಗ ಯಾಕೋ ಕೆಮ್ಮು ಬರುತ್ತಿದೆಯಲ್ಲ.
– ಮೈಲಿಗಟ್ಟಲೆ ಬರಿಗಾಲಿನಲ್ಲಿ ನಡೆದಾಗ ಸುಸ್ತಾಗಲಿಲ್ಲ, ಇಂದು ಬಸ್ಸಿನಲ್ಲಿ ಪ್ರಯಾಣಿಸುವಾಗ ಏಕೋ ‌ದಣಿವಾಗುತ್ತಿದೆಯಲ್ಲ.
– ಹಸುಕರುಗಳೆಲ್ಲ ಹಿತ್ತಲಬಾಗಲಲ್ಲಿ ಹಾಲುಕರೆದು ಅಂಬಾ ಎನ್ನುತ್ತಿದ್ದವಲ್ಲ, ಇಂದು ಮಕ್ಕಳಿಗೆ ಹಸುಗಳ ಚಿತ್ರವನ್ನು ಪುಸ್ತಕದಲ್ಲಿ ತೋರಿಸುವ ಪರಿಸ್ಥಿತಿಯಲ್ಲ.
– ತಂಗಳು ಮಜ್ಜಿಗೆ ಜೊತೆಗೆ ಮುದ್ದೆ ಕಿವುಚಿ ತಿಂದಾಗ ಹಸಿವು ಓಡಿತಲ್ಲ, ಇಂದು ವೈಭವದ ಕೈರುಚಿ ದರ್ಶಿನಿಗಳ ತಿನಿಸುಗಳೆಲ್ಲ ರುಚಿಗಷ್ಟೆ ಇವೆಯಲ್ಲ.
– ಅಟ್ಲಾಸ್ ಸೈಕಲ್ ದಿನವಿಡೀ ತುಳಿವಾಗ ರೋಗ ಹೆದಿರಿತಲ್ಲ, ಇಂದು ಐಶಾರಾಮಿ ಕಾರುಗಳಲ್ಲಿ ಬರುವವರೆಲ್ಲರಿಗೂ ಬಿಪಿ ಶುಗರ್ ಇದೆಯಲ್ಲಾ.
– ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಕಲಿತವರು ಗಟ್ಟಿ ಜೀವನ ಕಟ್ಟಿಕೊಂಡರಲ್ಲ, ಇಂದು ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಲಕ್ಷಗಟ್ಟಲೆ ಹಣ ವ್ಯಯಿಸಿ ಕಲಿತರೂ ಕೆಲಸವಿಲ್ಲವಲ್ಲ.

– ಸಣ್ಣಪುಟ್ಟ ರೋಗಗಳು ಬರುತ್ತಿದ್ದರೂ ಹೋಬಳಿ ತಾಲ್ಲೂಕಿಗೊಬ್ಬ ವೈದ್ಯರಿದ್ದರಲ್ಲ, ಇಂದು ಹೆಸರು ತಿಳಿಯದ ಅದೆಷ್ಟೋ ರೋಗರುಜುನೆಗಳು ಬಂದು ಬಡಾವಣೆಗೊಂದು ನರ್ಸಿಂಗ್ ಹೋಮ್ ತಲೆಯೆತ್ತುತ್ತಿವೆಯಲ್ಲ.
– ಎಂಬತ್ತು ಪೈಸೆ ಕೊಟ್ಟು ನೋಡಿದ ಸಿನಿಮಾ ಜೀವನಕ್ಕೆ ದಾರಿ ದೀಪವಾಗಿತ್ತಲ್ಲ, ಇಂದು ಸಾವಿರ ನೀಡಿ ಐನಾಕ್ಸ್ ಪಿವಿಆರ್ ಗಳಲ್ಲಿ ನೋಡಿದ ಸಿನಿಮಾದಿಂದ ಬದುಕು ಕಳೆದೋಯಿತಲ್ಲ.
– ಬೆರಳುಗಳ ಸಹಾಯದಿಂದ ಕಲಿತ ಗಣಿತ ವ್ಯಾಪಾರಕ್ಕೆ ಸಹಾಯ ಮಾಡಿತಲ್ಲ, ಕ್ಯಾಲ್ಕುಲೇಟರ್, ಐಪಾಡ್ ಗಳ ಉಪಯೋಗದಿಂದ ಕಲಿತ ಲೆಕ್ಕ ವ್ಯವಹಾರಕ್ಕೆ ಉಪಯೋಗವಾಗಲಿಲ್ಲವಲ್ಲ.
– ನಂಜನಗೂಡು ಹಲ್ಲುಪುಡಿ, ಲೈಫ್ ಬಾಯ್ ಸೋಪಿಗೆ ಸೌಂದರ್ಯ ಬೆದರಿ ಹೆಚ್ಚಿತಲ್ಲ, ಇಂದು ಡವ್ ಸೋಪು, ಫೇರ್ ಅಂಡ್ ಲವ್ಲಿಗೆ ಚರ್ಮ ಸುಕ್ಕುಗಟ್ಟಿತಲ್ಲ.
– ಗೆಡ್ಡೆ ಗೆಣಸು ಅಗೆದು ತಿನ್ನುತ್ತಿರುವಾಗ ಬಡತನವಿರಲಿಲ್ಲ, ಇಂದು ಬಂಗಾರ ಅಗೆದು ಮಾರಿದರೂ ಶ್ರೀಮಂತಿಕೆ ನಿಲ್ಲುತ್ತಿಲ್ಲವಲ್ಲ.
– ಬದುಕು ಕಟ್ಟಿಕೊಳ್ಳಲು ಜನಗಳೆಲ್ಲ ಪೇಟೆಯ ಕಡೆ ಮುಖ ಮಾಡಿದರಲ್ಲ, ಇಂದು ಜೀವ ಉಳಿಸಿಕೊಳ್ಳಲು ಅದ್ಯಾಕೋ ಜನ ಹಳ್ಳಿಗೆ ಬರುವವರಿದ್ದಾರಲ್ಲ ……..

ಬರಹ :
 ಎಂ .ಡಿ.ಪ್ರಧಾನಿ

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಾಜ್ಯದ ವಿವಿಧೆಡೆ ಮಳೆ –  ಬಹುತೇಕ ಜಲಾಶಯಗಳು ಭರ್ತಿ
July 29, 2025
8:46 PM
by: The Rural Mirror ಸುದ್ದಿಜಾಲ
ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ | ವಿಶ್ವ ದಾಖಲೆ ಸಾಧನೆ ಮಾಡಿದ ಮಂಗಳೂರಿನ ರೆಮೋನಾ ಪಿರೇರಾ
July 29, 2025
8:34 PM
by: The Rural Mirror ಸುದ್ದಿಜಾಲ
ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆ | ಲೋಕಸಭೆಯಲ್ಲಿ ಕೇಂದ್ರ ಕೃಷಿ  ಸಚಿವರ  ಹೇಳಿಕೆ
July 29, 2025
8:25 PM
by: The Rural Mirror ಸುದ್ದಿಜಾಲ
ಬಿಎಸ್ ಎನ್ ಎಲ್  ಪರಿಶೀಲನಾ ಸಭೆ | ʻಬಿಎಸ್ಎನ್ಎಲ್‌ʼ ಸೇವೆಗಳ ಸುಧಾರಣೆಗೆ ಕ್ರಮ
July 29, 2025
8:19 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group