ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..

January 10, 2026
10:33 PM

ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ ಸಾಕು ಎಂದೆನಿಸಿ ಬಿಡುತ್ತದೆ. ಹಾಗೆಯೇ ನಾವು ಆರೋಗ್ಯವಾಗಿ ಇದ್ದೇವೆ ಎಂದು ಬೇರೆ ಯಾರೂ ಹೇಳಬೇಕಾಗಿಲ್ಲ. ನಮ್ಮ ದೇಹವೇ ಕೆಲವೊಂದು ಸಂಕೇತದ ಮೂಲಕ ತಿಳಿಸಿಕೊಡುತ್ತದೆ. ಈ ಸಂಕೇತವೂ ನಮಗೆ ತಿಳಿದರೆ ಸಾಕು. ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ.

ಯಾವೆಲ್ಲಾ ಸಂಕೇತಗಳೆಂದರೆ: 

  • ಬೆಳಗ್ಗೆ ತಾಜಾತನದಿಂದ ಏಳುವುದು: ಉಲ್ಲಾಸದಿಂದ ಬೆಳಿಗ್ಗೆ ಯಾರೂ ಏಳುತ್ತಾರೋ ಅವರೇ ಆರೋಗ್ಯವಂತರು. ಏಕೆಂದರೆ ದೇಹವು ಆರೋಗ್ಯವಾಗಿದೆ ಎಂಬುದನ್ನು ಸೂಚಿಸುವಲ್ಲಿ ನಿದ್ರೆ ಒಂದು. ರಾತ್ರಿ ಗುಣಮಟ್ಟದ ನಿದ್ರೆಯು ಆರೋಗ್ಯದ ರೋಗ ನಿರೋಧಕ ಶಕ್ತಿಯನ್ನು ಸೂಚಿಸುತ್ತದೆ.
  • ಸರಿಯಾದ ಮಲವಿಸರ್ಜನೆ ಹಾಗೂ ಸ್ವಚ್ಛವಾದ ಮೂತ್ರ: ಬೆಳಿಗ್ಗಿನ ಮೂತ್ರವೂ ಸ್ಚಚ್ಛವಾಗಿದ್ದರೆ ಕಿಡ್ನಿಯೂ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದರ್ಥ. ಹಾಗೂ ಯಾವುದೇ ತೊಂದರೆ ಇಲ್ಲದೆ ಮಲವಿಸರ್ಜನೆ ಸಾಧ್ಯವಾದರೆ ಅದು ಕರುಳಿನ ಉತ್ತಮ ಕಾರ್ಯನಿರ್ವಹಣೆ ಹಾಗೂ ಜೀರ್ಣಾಂಗ ವ್ಯವಸ್ಥೆಯ ಉತ್ತಮ ಸ್ಥಿತಿಯನ್ನು ಸೂಚಿಸುತ್ತದೆ.
  • ಗಾಯ: ದೇಹಕ್ಕೆ ಆಗುವ ಗಾಯವೂ ಬೇಗನೆ ವಾಸಿಯಾದರೆ ನಮ್ಮ ದೇಹವೂ ರೋಗನಿರೋಧಕ ಶಕ್ತಿ ಹಾಗೂ ನಾವು ಸರಿಯಾದ ಪೋಷಕಾಂಶಗಳನ್ನು ಸೇವಿಸುತ್ತಿದ್ದೇವೆ ಎಂಬುದರ ಸಂಕೇತವಾಗಿದೆ.
  • ಚರ್ಮದ ಆರೋಗ್ಯ: ನಮ್ಮ ಚರ್ಮವೂ ಆರೋಗ್ಯಕರವಾಗಿ ಕಾಂತಿಯುತವಾಗಿದೆ ಎಂದರೆ ನಮ್ಮ ದೇಹಕ್ಕೆ ಸರಿಯಾದ ಜಲಸಂಚಯನವಾಗುತ್ತಿದೆ ಎಂದರ್ಥ.
  • ಆಯಾಸವಿಲ್ಲದ ನಡೆ: ವೇಗಾಗಿ ನಡೆಯುವಾಗ ಬೇಗನೆ ಆಯಾಸವಾಗುವುದಿಲ್ಲ ಎಂದರೆ ರಕ್ತ ಪರಿಚಲನೆ, ನರವ್ಯೂಹ, ಸ್ನಾಯುಗಳು ಆರೋಗ್ಯ ಉತ್ತಮವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.
  • ಸ್ಮರಣಶಕ್ತಿ: ಸ್ಮರಣಶಕ್ತಿ ಉತ್ತಮವಾಗಿದ್ದರೆ ಮೆದುಳಿನ ಸರಿಯಾದ ಕಾರ್ಯನಿರ್ವಹಣೆಯನ್ನು ಸೂಚಿಸುತ್ತದೆ.
  • ಸ್ಥಿರವಾದ ಉಸಿರಾಟ: ಸಾಮಾನ್ಯ ಹಾಗೂ ಸ್ಥಿರವಾದ ಉಸಿರಾಟದ ಮಾದರಿ ಆರೋಗ್ಯಕರ ಉಸಿರಾಟದ ವ್ಯವಸ್ಥೆಯನ್ನು ಸೂಚಿಸುತ್ತದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!
March 26, 2026
7:04 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror