Advertisement
MIRROR FOCUS

ತಣ್ಣೀರಲ್ಲಿ ಬೇಯುತ್ತೆ ಈ ವಿಶೇಷ ಅಕ್ಕಿ ತಳಿ…! | ಕೇವಲ 30 ನಿಮಿಷದಲ್ಲಿ ಅನ್ನ ರೆಡಿ…! |ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತ

Share

ಒಂದೆಡೆ ಅನ್ನದ(Rice) ಉಪಯೋಗ ದಿನಕಳೆದಂತೆ ಯುವ ಜನತೆ ಕಡಿಮೆ ಮಾಡುತ್ತಿದ್ದಾರೆ. ಹಾಗೆ ಆರೋಗ್ಯ(Health) ದೃಷ್ಟಿಯಿಂದ ಅನ್ನ ಒಳ್ಳೆಯದಲ್ಲಾ ಎನ್ನುವ ತಪ್ಪು ಸಂದೇಶಗಳನ್ನು ರವಾನಿಸಲಾಗುತ್ತಿದೆ. ಡಯಟ್‌(Diet) ಮಾಡುವವರಿಗೆ, ಸಕ್ಕರೆ ಕಾಯಿಲೆ(Diabetes) ಇರುವವರು ಅನ್ನದಿಂದ ದೂರ ಇದ್ದರೆ ಒಳ್ಳೆದು ಅನ್ನುವ ಸಲಹೆಯೇ ಹೆಚ್ಚು. ಆದರೆ ನಮ್ಮ ಹಿರಿಯರು ಅನ್ನ ತಿಂದೆ ನೂರಾರು ಕಾಲ ಬಾಳಿ ಬದುಕಿದ್ದಾರೆ. ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದಾರೆ. ಇಲ್ಲೊಂದು ವಿಶೇಷ ಭತ್ತದ ತಳಿ(variety of rice)ಇದೆ. ಇದರ ಅಕ್ಕಿಯನ್ನು ತಣ್ಣೀರಿನಲ್ಲೇ(Cold water) ಬೇಯಿಸಬಹುದಂತೆ. ಹಾಗೆ ಆರೋಗ್ಯಕ್ಕೂ ಒಳ್ಳೆಯದಂತೆ…!

Advertisement
Advertisement

ಅನ್ನವನ್ನು ತಣ್ಣೀರಿನಿಂದ ಬೇಯಿಸುವುದನ್ನು ಕೇಳಿದ್ದೀರಾ..? ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ನರ್ಕತಿಯಾಗಂಜ್‌ನ ಮುಶರ್ವಾ ಗ್ರಾಮದ ನಿವಾಸಿ ಕಮಲೇಶ್ ಚೌಬೆ ಈ ರೀತಿಯ ಅಕ್ಕಿಯನ್ನು ಬೆಳೆಯುತ್ತಾರೆ. ಇದೇ ಜಿಲ್ಲೆಯ ಹರ್ಪುರ್ ಗ್ರಾಮದಲ್ಲಿ ವಿಜಯ್ ಗಿರಿ ಎಂಬವರೂ 2020 ರಿಂದಲೇ ಈ ಮಾದರಿ ಅಕ್ಕಿ ಬೆಳೆದು ಸುದ್ದಿಯಾಗಿದ್ದರು. ಕಮಲೇಶ್ ಸಾಂಪ್ರದಾಯಿಕ ಕೃಷಿಯ ಹೊರತಾಗಿ ಹೊಸ ರೀತಿಯಲ್ಲಿ ಕೃಷಿ ಮಾಡುವ ಬಗ್ಗೆ ಸದಾ ಯೋಚಿಸುತ್ತಿರುತ್ತಾರೆ. ಸದ್ಯ ಕಮಲೇಶ್ ವಿಶೇಷ ಭತ್ತವೊಂದರ ಕೃಷಿ ಮಾಡುತ್ತಿದ್ದಾರೆ. ಕಮಲೇಶ್ ಐದು ಎಕರೆ ಹೊಲದಲ್ಲಿ ಈ ವಿಶೇಷ ಭತ್ತವನ್ನು ನಾಟಿ ಮಾಡಿದ್ದಾರೆ. ಈ ಬಗ್ಗೆ ವಿವಿಧ ಮಾಧ್ಯಮಗಳು ವರದಿ ಮಾಡಿದೆ.

ಕಮಲೇಶ್ ಅವರ ವಿವರಗಳ ಪ್ರಕಾರಈ ಅಕ್ಕಿಯನ್ನು ಕೇವಲ 30 ನಿಮಿಷದಲ್ಲಿ ತಣ್ಣೀರಿನಲ್ಲಿ ಬೇಯಿಸಬಹುದಂತೆ..! ಮತ್ತೊಂದೆಡೆ ತಜ್ಞರು ಕೂಡ ಈ ಅಕ್ಕಿ ಒಳ್ಳೆಯದು ಎಂದು ತಿಳಿಸಿದ್ದು, ಈ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ಕಡಿಮೆ ಎಂದು ಹೇಳಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಇದರ ಬಹುದೊಡ್ಡ ವಿಶೇಷತೆ ಏನೆಂದರೆ, ಈ ಅಕ್ಕಿಯು ಸಕ್ಕರೆ ಮುಕ್ತವಾಗಿದ್ದು, ಇದರಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್, ಪ್ರೊಟೀನ್ ಇರುವುದರಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ.

ಈ ರೀತಿಯ ಧಾನ್ಯವನ್ನು ಕೊಯ್ಲು ಮಾಡಿದ ನಂತರ ಕಮಲೇಶ್, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ನಾಗಾಲ್ಯಾಂಡ್, ಬಿಹಾರ ಮತ್ತು ಇತರ ಜಿಲ್ಲೆಗಳ ರೈತರಿಗೆ ಸರಬರಾಜು ಮಾಡುತ್ತಾರೆ. ಈ ವಿಶೇಷ ಅಕ್ಕಿಯನ್ನು ಬೆಳೆಯಲು ಒಟ್ಟು 140 ದಿನಗಳು ಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಕೆಜಿಗೆ 40-60 ರೂ. ಬೆಲೆ ಸಿಗುತ್ತದೆ. ಅಸ್ಸಾಂನಲ್ಲಿ ಈ ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಪ್ರವಾಹದಂತಹ ವಿಪತ್ತುಗಳ ಸಮಯದಲ್ಲಿ ಈ ಅಕ್ಕಿ ತುಂಬಾ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.ಈ ಭತ್ತದ ತಳಿಯು ಅಸ್ಸಾಂನಲ್ಲಿ ಹೆಚ್ಚು ಪ್ರಚಲಿತದಲ್ಲಿದೆ, ಇದು ಈಗಾಗಲೇ ಜಿಐ ಟ್ಯಾಗ್  ಪಡೆದುಕೊಂಡಿದೆ.

– ಅಂತರ್ಜಾಲ ಮಾಹಿತಿ

Heard of cooking rice with cold water? Kamlesh Chaube, a resident of Musharwa village in Narkatiyaganj, West Champaran district of Bihar, grows this type of rice. Kamlesh is always thinking about new ways of farming apart from traditional farming. Currently, Kamlesh is cultivating a special paddy. Kamlesh has planted this special paddy in a five acre field.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!

ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ,  ಅದು ಗಂಭೀರ ಆರೋಗ್ಯ ಅಪಾಯಗಳಿಗೆ…

16 hours ago

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…

16 hours ago

ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ

ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…

16 hours ago

ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ

ಜಲಜೀವನ್‌ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…

17 hours ago

ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು

ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…

17 hours ago

ಜಾಗತಿಕ ಒತ್ತಡ – ಗ್ರಾಮೀಣ ಜೀವನೋಪಾಯ | ಅಡಿಕೆ ಕುರಿತ ನಿಜವಾದ ಚರ್ಚೆ ಈಗ ಆರಂಭವಾಗಬೇಕು

ಭಾರತವು ಜಗತ್ತಿನ ಅತಿದೊಡ್ಡ ಅಡಿಕೆ ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ಉತ್ಪಾದನೆಯ ಸುಮಾರು 63…

17 hours ago