Advertisement
MIRROR FOCUS

ತಣ್ಣೀರಲ್ಲಿ ಬೇಯುತ್ತೆ ಈ ವಿಶೇಷ ಅಕ್ಕಿ ತಳಿ…! | ಕೇವಲ 30 ನಿಮಿಷದಲ್ಲಿ ಅನ್ನ ರೆಡಿ…! |ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತ

Share

ಒಂದೆಡೆ ಅನ್ನದ(Rice) ಉಪಯೋಗ ದಿನಕಳೆದಂತೆ ಯುವ ಜನತೆ ಕಡಿಮೆ ಮಾಡುತ್ತಿದ್ದಾರೆ. ಹಾಗೆ ಆರೋಗ್ಯ(Health) ದೃಷ್ಟಿಯಿಂದ ಅನ್ನ ಒಳ್ಳೆಯದಲ್ಲಾ ಎನ್ನುವ ತಪ್ಪು ಸಂದೇಶಗಳನ್ನು ರವಾನಿಸಲಾಗುತ್ತಿದೆ. ಡಯಟ್‌(Diet) ಮಾಡುವವರಿಗೆ, ಸಕ್ಕರೆ ಕಾಯಿಲೆ(Diabetes) ಇರುವವರು ಅನ್ನದಿಂದ ದೂರ ಇದ್ದರೆ ಒಳ್ಳೆದು ಅನ್ನುವ ಸಲಹೆಯೇ ಹೆಚ್ಚು. ಆದರೆ ನಮ್ಮ ಹಿರಿಯರು ಅನ್ನ ತಿಂದೆ ನೂರಾರು ಕಾಲ ಬಾಳಿ ಬದುಕಿದ್ದಾರೆ. ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದಾರೆ. ಇಲ್ಲೊಂದು ವಿಶೇಷ ಭತ್ತದ ತಳಿ(variety of rice)ಇದೆ. ಇದರ ಅಕ್ಕಿಯನ್ನು ತಣ್ಣೀರಿನಲ್ಲೇ(Cold water) ಬೇಯಿಸಬಹುದಂತೆ. ಹಾಗೆ ಆರೋಗ್ಯಕ್ಕೂ ಒಳ್ಳೆಯದಂತೆ…!

ಅನ್ನವನ್ನು ತಣ್ಣೀರಿನಿಂದ ಬೇಯಿಸುವುದನ್ನು ಕೇಳಿದ್ದೀರಾ..? ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ನರ್ಕತಿಯಾಗಂಜ್‌ನ ಮುಶರ್ವಾ ಗ್ರಾಮದ ನಿವಾಸಿ ಕಮಲೇಶ್ ಚೌಬೆ ಈ ರೀತಿಯ ಅಕ್ಕಿಯನ್ನು ಬೆಳೆಯುತ್ತಾರೆ. ಇದೇ ಜಿಲ್ಲೆಯ ಹರ್ಪುರ್ ಗ್ರಾಮದಲ್ಲಿ ವಿಜಯ್ ಗಿರಿ ಎಂಬವರೂ 2020 ರಿಂದಲೇ ಈ ಮಾದರಿ ಅಕ್ಕಿ ಬೆಳೆದು ಸುದ್ದಿಯಾಗಿದ್ದರು. ಕಮಲೇಶ್ ಸಾಂಪ್ರದಾಯಿಕ ಕೃಷಿಯ ಹೊರತಾಗಿ ಹೊಸ ರೀತಿಯಲ್ಲಿ ಕೃಷಿ ಮಾಡುವ ಬಗ್ಗೆ ಸದಾ ಯೋಚಿಸುತ್ತಿರುತ್ತಾರೆ. ಸದ್ಯ ಕಮಲೇಶ್ ವಿಶೇಷ ಭತ್ತವೊಂದರ ಕೃಷಿ ಮಾಡುತ್ತಿದ್ದಾರೆ. ಕಮಲೇಶ್ ಐದು ಎಕರೆ ಹೊಲದಲ್ಲಿ ಈ ವಿಶೇಷ ಭತ್ತವನ್ನು ನಾಟಿ ಮಾಡಿದ್ದಾರೆ. ಈ ಬಗ್ಗೆ ವಿವಿಧ ಮಾಧ್ಯಮಗಳು ವರದಿ ಮಾಡಿದೆ.

ಕಮಲೇಶ್ ಅವರ ವಿವರಗಳ ಪ್ರಕಾರಈ ಅಕ್ಕಿಯನ್ನು ಕೇವಲ 30 ನಿಮಿಷದಲ್ಲಿ ತಣ್ಣೀರಿನಲ್ಲಿ ಬೇಯಿಸಬಹುದಂತೆ..! ಮತ್ತೊಂದೆಡೆ ತಜ್ಞರು ಕೂಡ ಈ ಅಕ್ಕಿ ಒಳ್ಳೆಯದು ಎಂದು ತಿಳಿಸಿದ್ದು, ಈ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ಕಡಿಮೆ ಎಂದು ಹೇಳಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಇದರ ಬಹುದೊಡ್ಡ ವಿಶೇಷತೆ ಏನೆಂದರೆ, ಈ ಅಕ್ಕಿಯು ಸಕ್ಕರೆ ಮುಕ್ತವಾಗಿದ್ದು, ಇದರಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್, ಪ್ರೊಟೀನ್ ಇರುವುದರಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ.

ಈ ರೀತಿಯ ಧಾನ್ಯವನ್ನು ಕೊಯ್ಲು ಮಾಡಿದ ನಂತರ ಕಮಲೇಶ್, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ನಾಗಾಲ್ಯಾಂಡ್, ಬಿಹಾರ ಮತ್ತು ಇತರ ಜಿಲ್ಲೆಗಳ ರೈತರಿಗೆ ಸರಬರಾಜು ಮಾಡುತ್ತಾರೆ. ಈ ವಿಶೇಷ ಅಕ್ಕಿಯನ್ನು ಬೆಳೆಯಲು ಒಟ್ಟು 140 ದಿನಗಳು ಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಕೆಜಿಗೆ 40-60 ರೂ. ಬೆಲೆ ಸಿಗುತ್ತದೆ. ಅಸ್ಸಾಂನಲ್ಲಿ ಈ ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಪ್ರವಾಹದಂತಹ ವಿಪತ್ತುಗಳ ಸಮಯದಲ್ಲಿ ಈ ಅಕ್ಕಿ ತುಂಬಾ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.ಈ ಭತ್ತದ ತಳಿಯು ಅಸ್ಸಾಂನಲ್ಲಿ ಹೆಚ್ಚು ಪ್ರಚಲಿತದಲ್ಲಿದೆ, ಇದು ಈಗಾಗಲೇ ಜಿಐ ಟ್ಯಾಗ್  ಪಡೆದುಕೊಂಡಿದೆ.

– ಅಂತರ್ಜಾಲ ಮಾಹಿತಿ

Heard of cooking rice with cold water? Kamlesh Chaube, a resident of Musharwa village in Narkatiyaganj, West Champaran district of Bihar, grows this type of rice. Kamlesh is always thinking about new ways of farming apart from traditional farming. Currently, Kamlesh is cultivating a special paddy. Kamlesh has planted this special paddy in a five acre field.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

5 hours ago

ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…

9 hours ago

ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು

2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…

15 hours ago

ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?

ಸಂಪತ್ತು ಮತ್ತು ಸೌಲಭ್ಯಗಳು ಹೆಚ್ಚಿರುವುದೇ ನಿಜವಾದ ಶ್ರೀಮಂತಿಕೆಯಲ್ಲ; ಅವುಗಳನ್ನು ವಿವೇಕದಿಂದ ಬಳಸುವ ಮನಸ್ಸು…

1 day ago

ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?

ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…

2 days ago

ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ

ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್‌ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್‌ ಪೂರೈಕೆಯ…

2 days ago