(ಚಿತ್ರ ಕೃಪೆ- ಅಂತರ್ಜಾಲ )
ಇತ್ತೀಚೆಗೆ ಕೃಷಿ ಪ್ರವಾಸೋದ್ಯಮ #Agritourism ಬೆಳವಣಿಗೆಯತ್ತ ಸಾಗುತ್ತಿದೆ. ಸರ್ಕಾರದ ಕಡೆಯಿಂದ ಅಲ್ಲದಿದ್ರು, ಕೃಷಿಕರೇ ಸೇರಿ ಈ ಪರಿಕಲ್ಪನೆಯನ್ನು ಬೆಳವಣಿಗೆಯ ಕಡೆ ಕೊಂಡೊಯ್ಯಿತ್ತಿದ್ದಾರೆ. ರೈತರು ಕೃಷಿಯನ್ನೇ ನಂಬಿ ಬದುಕುತ್ತಿರುವುದರಿಂದ ಮುಂದೆ ಇದರ ಅಗತ್ಯ ಬಹಳ ಇದೆ. ಈ ದೃಷ್ಟಿಯನ್ನು ಇಟ್ಟುಕೊಂಡು ಎಲ್ಲರು ಒಂದುಗೂಡಿ ಕೃಷಿ ಮತ್ತು ಗ್ರಾಮೀಣ ಕ್ಷೇತ್ರಗಳ ಸಬಲೀಕರಣದ ಪರಿಕಲ್ಪನೆಯನ್ನು ಹುಟ್ಟು ಹಾಕುತ್ತಿದ್ದಾರೆ. ಈ ಪ್ರಯುಕ್ತ ಮೈಸೂರಿನಲ್ಲಿ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ಎಲ್ಲಾ ಆಸಕ್ತ ರೈತರು ಪಡೆದುಕೊಳ್ಳಬಹುದು. ಈ ಕೃಷಿ ಪ್ರವಾಸೋದ್ಯಮದ ಬೆಳವಣಿಗೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು.
ಮೇಲ್ಕಂಡ ವಿಚಾರಗಳ ಜೊತೆಗೆ ಕೃಷಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿಚಾರಗಳೊಂದಿಗೆ ಸೆಪ್ಟೆಂಬರ್ ತಿಂಗಳು ಮೈಸೂರಿನಲ್ಲಿ 03 ದಿನಗಳ ಕಾರ್ಯಗಾರ ನಡೆಸುವ ಬಗ್ಗೆ ಉದ್ದೇಶಿಸಲಾಗಿದೆ.
ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆಗೆ ಕಳೆದ 2023 ಜೂನ್ ತಿಂಗಳಿನಲ್ಲಿ ಕೃಷಿ ಪ್ರವಾಸೋದ್ಯಮ ನೀತಿ ರೂಪಿಸುವ ಸಂಬಂಧ ನೀಡಲಾದ ಮನವಿ ಮತ್ತು ವರದಿಯ ಅನುಸಾರ ಈಗಾಗಲೇ ಕೆಲಸಗಳು ಪ್ರಾರಂಭವಾಗಿರುತ್ತದೆ ಮತ್ತು ವಿವಿಧ ರಾಜ್ಯಗಳ ಪ್ರವಾಸೋದ್ಯಮ ನೀತಿ ಅಧ್ಯಾಯನ ಮಾಡಿ ನಮ್ಮ ರಾಜ್ಯಕ್ಕೆ ಸೂಕ್ತವಾಗುವ ನೀತಿ ರೂಪಿಸುವ ಕೆಲಸಗಳು ಪ್ರಗತಿಯಲ್ಲಿದೆ.
ಕಾರ್ಯಾಗಾರದಲ್ಲಿ ಪ್ರವಾಸೋದ್ಯಮ ಇಲಾಖೆಯವರು,ಕೃಷಿ ಪ್ರವಾಸೋದ್ಯಮ ನೆಡೆಸುತ್ತಿರುವ ಕೃಷಿಕರು,ಕೇಂದ್ರ ಪ್ರಾರಂಭ ಮಾಡಲು ಸಿದ್ಧತೆ ಮಾಡಿಕೊಂಡಿರುವ ಮತ್ತು ಪ್ರಾರಂಭ ಮಾಡಲು ಆಸಕ್ತಿ ಹೊಂದಿರುವ ಕೃಷಿಕರು, ಪ್ರವಾಸಿ ನಿರ್ವಾಹಕರು, ಕೃಷಿ/ತೋಟಗಾರಿಕೆ ಇಲಾಖೆಯವರು,ಸಂಪನ್ಮೂಲ ವ್ಯಕ್ತಿಗಳು ಹೀಗೆ ಸಂಬಂಧಪಟ್ಟವರೊಂದಿಗೆ ವಿಚಾರಗಳನ್ನು ಚರ್ಚಿಸುವುದು ಮತ್ತು ಕಾರ್ಯಗತ ಮಾಡುವ ಬಗ್ಗೆ ತೆಗೆದುಕೊಳ್ಳಬೇಕಾದ ಜವಾಬ್ದಾರಿಗಳು,ಇತ್ಯಾದಿ ಕಾರ್ಯಗಾರದ ಉದ್ದೇಶವಾಗಿರುತ್ತದೆ.
ಕೃಷಿ ಪ್ರವಾಸೋದ್ಯಮ ಕೇಂದ್ರ ಪ್ರಾರಂಭ ಮಾಡಲು ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ಸಂಪರ್ಕಿಸಲು ಕೋರಲಾಗಿದೆ.
ಪ್ರಶಾಂತ್ ಜಯರಾಮ್, ಕೃಷಿಕರು & ಕೃಷಿ ಸಲಹೆಗಾರರು , ಮೊಬೈಲ್ :9342434530
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?