MIRROR FOCUS

ಗುತ್ತಿಗಾರಿನಲ್ಲಿ ಸ್ವಚ್ಛತಾ ಅಭಿಯಾನ | ರಸ್ತೆ ಬದಿ ಕಸ ಚೆಲ್ಲಿದವರೇ ಮತ್ತೆ ಎತ್ತಿದರು….! | ಜನರು ಜಾಗೃತರಾಗಿದ್ದರೆ ಇದು ಸಾಧ್ಯ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಕಳೆದ 21 ವಾರಗಳಿಂದ   ಪ್ರತೀ ಗುರುವಾರ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಈ ಮೂಲಕ ಸ್ವಚ್ಛತೆಯ ಕಡೆಗೆ ಜನರನ್ನು ಜಾಗೃತಿ ಮಾಡುವುದು ಉದ್ದೇಶ. ಇದೀಗ ಗುತ್ತಿಗಾರು ಪ್ರದೇಶದಲ್ಲಿ ಪ್ರಜ್ಞಾವಂತ ಜನರು ಜಾಗೃತರಾಗಿದ್ದಾರೆ. ಹೀಗಾಗಿ ಗುತ್ತಿಗಾರು ಸಮೀಪದ ಕಡ್ತಲ್‌ಕಜೆ ಬಳಿ ಕಸ ಎಸೆದವರೇ ಕಸ ಎತ್ತಿದ ಘಟನೆ ನಡೆದಿದೆ.

Advertisement
Advertisement

ಗುತ್ತಿಗಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸ್ವಚ್ಛ ಗ್ರಾಮ ಗುತ್ತಿಗಾರು ಟಾಸ್ಕ್‌ ಫೋರ್ಸ್‌ ತಂಡವು ಕಳೆದ 5 ತಿಂಗಳಿನಿಂದ ಪ್ರತೀ ಗುರುವಾರ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಮಾಡುತ್ತಿದೆ. ಕಸ ಹೆಕ್ಕುವುದು  ಹಾಗೂ ಕಸ ಎಸೆಯದಂತೆ ಜಾಗೃತಿ ನೀಡುವುದು ಇದರ ಉದ್ದೇಶ. ಈ ತಂಡದಲ್ಲಿ  ಗ್ರಾಮ ಪಂಚಾಯತ್‌, ಸಂಜೀವಿನಿ ಒಕ್ಕೂಟ, ಗುತ್ತಿಗಾರು ವರ್ತಕರ ಸಂಘ ಹಾಗೂ ಇತರ ಸಂಘಸಂಸ್ಥೆಗಳ ನೆರವಿನೊಂದಿಗೆ ಈ ಕೆಲಸ ನಡೆಯುತ್ತಿದೆ. ಇದೀಗ ಗುತ್ತಿಗಾರು ಪೇಟೆ ಸ್ವಚ್ಛತೆಯತ್ತ ಸಾಗುತ್ತಿದೆ. ಆದರೆ ಗ್ರಾಮದ ಅಲ್ಲಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು ಕಾಣುತ್ತಿದೆ. ಈಗ ಪ್ರಜ್ಞಾವಂತ ಜನರು ಜಾಗೃತರಾಗಿ ಕಸ ಎಸೆಯುವುದನ್ನು ತಡೆಯುತ್ತಿರುವುದು  ಗಮನಾರ್ಹವಾಗಿದೆ.

ಕಳೆದ ಶನಿವಾರ ಬೆಳಗ್ಗೆ ಏಳು ಗಂಟೆಯ ಸುಮಾರಿಗೆ ಜೆಸಿಬಿ ವಾಹನವೊಂದು ತನ್ನ ಒಡೆದ ಬೃಹತ್ ಪ್ಲಾಸ್ಟಿಕ್ ಯುಕ್ತ ಗಾಜನ್ನು ಕಡ್ತಲ್ಕಜೆ ಸಮೀಪ ರಸ್ತೆ ಪಕ್ಕದಲ್ಕಿ ಎಸೆದು ಹೋಗಿತ್ತು.ಪಕ್ಕದ ಮನೆಯವರಿಗೆ ಸಂಶಯ ಬಂದು ಗಮನಿಸಿದರು. ತಕ್ಷಣವೇ ಸಾಮಾಜಿಕ ಕಾಳಜಿಯುಳ್ಳ ಪತ್ರಕರ್ತರೊಬ್ಬರು ವಾಹನವನ್ನು ತಡೆದು ಕಸ ಎಸೆದ ಬಗ್ಗೆ ಪ್ರಶ್ನಿಸಿದರು. ಸಂಜೆಯ ವೇಳೆ ಕೆಲಸ ಮುಗಿಸಿ ಹೋಗುವಾಗ ತೆಗಿತೇವೆ ಎಂದು ಹೇಳಿದ್ದರು. ಆದರೆ ಮೂರು ದಿನವಾಗಿದ್ದರು ಕೂಡಾ ಕಸ ತೆಗೆಯದಿರುವ ಬಗ್ಗೆ ಪಂಚಾಯತ್ ಸಿಬ್ಬಂದಿ ಮತ್ತು ಪಂಚಾಯತ್ ಸದಸ್ಯೆಯೊಬ್ಬರ ಜೊತೆ ಸಂಬಂಧಿತ ವಾಹನಕ್ಕೆ ದಂಡ ವಿಧಿಸುವ ಬಗ್ಗೆ ಮಾಹಿತಿ ಪಡೆದರು. ದೂರು ನೀಡಿದರೆ ದಂಡ ವಿಧಿಸುವ ಬಗ್ಗೆ ತಿಳಿಸಿದ ಹಿನ್ನೆಲೆಯಲ್ಲಿ ದೂರು ನೀಡಲು ಸಿದ್ಧತೆ ನಡೆಸಿದ್ದರು ಕೂಡಾ. ಈ ಮಾಹಿತಿ ಪಡೆದ ಅದೇ ವಾಹನದವರು ಆಗಮಿಸಿ ಎಸೆದಿದ್ದ ವಾಹನದ ಗಾಜನ್ನು ಎತ್ತಿದರು.

Advertisement

ಈಗಾಗಲೆ ತ್ಯಾಜ್ಯ ಮುಕ್ತ ಗ್ರಾಮವನ್ನಾಗಿ ಪಂಚಾಯತ್ ಆಡಳಿತ ಹಾಗೂ ಸಾರ್ವಜನಿಕ ಸಂಘಟನೆಗಳು ಶ್ರಮಿಸುತಿರುವಾಗ ಸಾರ್ವಜನಿಕ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಕಸ, ಪ್ಲಾಸ್ಟಿಕ್, ಮದ್ಯದ ಬಾಟಲಿ ಮೊದಲಾದ ತ್ಯಾಜ್ಯ ಎಸೆಯುವ ವಾಹನ ಅಥವಾ ವ್ಯಕ್ತಿ ಗಳ ಪೋಟೊ ಸಮೇತ ವಾಹನದ ನಂಬರ್, ವ್ಯಕ್ತಿಗಳ ಹೆಸರನ್ನು ಲಿಖಿತವಾಗಿ ದೂರಿತ್ತರೆ ಪಂಚಾಯತ್ ಆಡಳಿತ ದೂರು ಸ್ವೀಕರಿಸಿ ದಂಡ ವಿಧಿಸಲು ಸಾಧ್ಯವಿದೆ. ಈ ಬಗ್ಗೆ ಟಾಸ್ಕ್‌ ಫೋರ್ಸ್‌ ಗ್ರಾಮ ಪಂಚಾಯತ್‌ ಗೆ ಮನವಿ ಕೂಡಾ ನೀಡಿದೆ. ಪ್ರತಿಯೊಬ್ಬ ನಾಗರೀಕರು ಸ್ವಪ್ರೇರಣೆಯಿಂದ ಪಂಚಾಯತ್ ಆಡಳಿತದೊಂದಿಗೆ ಕೈಜೋಡಿಸಬೇಕಿದೆ.

ಈಚೆಗೆ ಶಾಲೆಗಳಲ್ಲೂ ಕಸ ಎಸೆಯುವ ಬಗ್ಗೆ ಜಾಗೃತಿ ನೀಡಲಾಗಿತ್ತು. ಆದರೆ ಗುತ್ತಿಗಾರು ದೂರವಾಣಿ ಕೇಂದ್ರದ ಬಳಿ ಈಚೆಗೆ ಶಾಲೆಯ ವಿದ್ಯಾರ್ಥಿಗಳು ಬಾಟಲಿಯ ಕಟ್ಟನ್ನು ಎಸೆದಿರುವ ಬಗ್ಗೆಯೂ ಸ್ಥಳೀಯರು ಮಾಹಿತಿ ನೀಡಿದ್ದರು. ಆದರೆ ವಿದ್ಯಾರ್ಥಿಗಳು ಎಂಬ ಕಾರಣದಿಂದ ದೂರು ದಾಖಲಿಸಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಇದರ ಜೊತೆಗೇ, ಸಾಕುಪ್ರಾಣಿಗಳನ್ನು , ಹೋರಿ ಕರುಗಳನ್ನು ರಸ್ತೆ ಬದಿ ತಂದು ಬಿಡುವವರ ಬಗ್ಗೆಯೂ ಈಗ ಚರ್ಚೆಗಳು ನಡೆಯುತ್ತಿವೆ. ರಸ್ತೆ ಬದಿ ತಂದು ಬಿಡುವುದರಿಂದ ಜನರಿಗೂ, ಆಸುಪಾಸಿನಲ್ಲೂ, ವಾಹನ ಸವಾರರಿಗೂ ಸಮಸ್ಯೆ ಉಂಟಾಗಬಹುದಾಗಿದೆ ಎನ್ನುವುದು ಚರ್ಚೆಯ ಸಾರಾಂಶ. ಸ್ವಚ್ಛತಾ ಅಭಿಯಾನವು ಈ ಎಲ್ಲಾ ಕಾರಣಗಳಿಂದ ಗ್ರಾಮದ ಜನರನ್ನು ಜಾಗೃತರನ್ನಾಗಿಸುತ್ತಿದೆ.

The Swachcha Gram Guthigar Task Force team has been conducting cleanliness awareness program every Thursday for the last 5 months under Guthigar Gram Panchayath. The purpose of this is to create awareness about Swach Bharath. Now Guthigar village is moving towards cleanliness. But littering is seen everywhere in the village. It is remarkable that now conscious people are aware and stop littering. This work is being done with the help of Gram Panchayat, Sanjeevini okkuta, Guthigar Vartaka Sangh and other organizations.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಫಸಲ್ ಭೀಮಾ ಯೋಜನೆ ಹಣ ಬಿಡುಗಡೆ | ಕಲಬುರಗಿ ಜಿಲ್ಲೆಗೆ ಹೆಚ್ಚಿನ ಬೆಳೆ ವಿಮೆ

ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆಯಡಿ ಅತಿ ಹೆಚ್ಚು ಬೆಳೆ ವಿಮೆ ಪಡೆದ…

25 minutes ago

ಲಡಾಖ್‌ನ ದ್ರಾಸುದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ| ವೀರಯೋಧರಿಗೆ ಪಾದಯಾತ್ರೆ ಮೂಲಕ ಗೌರವ

ಲಡಾಖ್‌ನ ದ್ರಾಸುದಲ್ಲಿಂದು  26ನೇ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ   ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ…

1 hour ago

ಬದುಕಿಗೆ ಧರ್ಮದ ತಳಹದಿ ಅಗತ್ಯ : ರಾಘವೇಶ್ವರ ಶ್ರೀ

ಧರ್ಮ ಎನ್ನುವ ತಳಹದಿಯಲ್ಲಿ ಬದುಕು ನಿಂತಿದೆ. ಅರ್ಥ ಮತ್ತು ಕಾಮನೆಗಳಿಗೆ ಧರ್ಮವೇ ತಳಹದಿ.…

2 hours ago

ಹವಾಮಾನ ವರದಿ | 26-07-2025 | ಜುಲೈ ಅಂತ್ಯದವರೆಗೂ ಸಾಮಾನ್ಯ ಮಳೆ | ಕಾರಣ ಏನು ?

ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಜುಲೈ 27 ರಂದು ಮಧ್ಯಪ್ರದೇಶ ದಾಟಿ ರಾಜಸ್ಥಾನ ಗಡಿ…

5 hours ago

ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ

ಭಾರತದಲ್ಲಿ, ಮೇ ತಿಂಗಳಿನಲ್ಲಿ ಉಂಟಾದ ತೀವ್ರ ಉಷ್ಣತೆಯು ಬೆಳೆ ಇಳುವರಿ ಮತ್ತು ಪೂರೈಕೆ…

8 hours ago

ಗಂಡ-ಹೆಂಡತಿ ಸಂಬಂಧವು ಜೀವನದ ಅತ್ಯಂತ ಗಾಢವಾದ ಮತ್ತು ಆಧ್ಯಾತ್ಮಿಕ ಬಂಧ

ಗಂಡ-ಹೆಂಡತಿ ಸಂಬಂಧವು ಜೀವನದ ಅತ್ಯಂತ ಗಾಢವಾದ ಮತ್ತು ಆಧ್ಯಾತ್ಮಿಕ ಬಂಧವಾಗಿದೆ. ಜ್ಯೋತಿಷ್ಯ ಶಾಸ್ತ್ರದ…

9 hours ago