ಕೆಲವು ದಿನಗಳಿಂದ ತಾಪಮಾನದ ಏರಿಕೆಯ ಮೂಲಕ ಸುದ್ದಿಯಾಗಿದ್ದ ಕರಾವಳಿ ಜಿಲ್ಲೆಯಲ್ಲಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಮಳೆಯಾಗಿದೆ. ಸಂಜೆ ಸುಳ್ಯ-ಪುತ್ತೂರು ಹಾಗೂ ಆಸುಪಾಸಿನ ತಾಲೂಕುಗಳಲ್ಲಿ ಮಳೆಯಾಗಿದ್ದರೆ ರಾತ್ರಿ ವೇಳೆ ಎರಡನೇ ಬಾರಿಗೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಸುಳ್ಯದ ವಿವಿದೆಡೆ ಮಳೆಯಾಗಿದೆ. ಪುತ್ತೂರು ತಾಲೂಕಿನ ವಿವಿಧ ಕಡೆಗಳಲ್ಲಿ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ವಿವಿಧ ಕಡೆಗಳಲ್ಲೂ ಮಳೆಯಾಗಿದೆ. ಕಕ್ಕಿಂಜೆಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ ಎಂದು ಕೃಷಿಕರು ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ ಕೊಡಗಿನ ಕೆಲವು ಕಡೆ, ಚಿಕ್ಕಮಗಳೂರು , ಮೂಡಿಗೆರೆ ಪ್ರದೇಶದ ಕೆಲವು ಕಡೆ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ತಾಪಮಾನ ಏರಿಕೆಯಿಂದ ಕರಾವಳಿ ಜಿಲ್ಲೆಯ ಜನರು ಆತಂಕಕ್ಕೂ ಒಳಗಾಗಿದ್ದರು. ಕೃಷಿ ನಷ್ಟವಾಗುವ ಆತಂಕ್ಕೆ ಒಳಗಾಗಿದ್ದರು. ಇದೀಗ ಮಳೆಯಾಗುವ ಮೂಲಕ ತಾಪಮಾನ ಇಳಿಕೆಯಾಗಿದೆ, ಆದರೆ ಅಡಿಕೆ ಬೆಳೆಯ ಮೇಲೆ ಪರಿಣಾಮ ಬೀರಬಹುದು ಎನ್ನುವ ಭೀತಿಯನ್ನು ಕೃಷಿಕರು ವ್ಯಕ್ತಪಡಿಸಿದ್ದಾರೆ.………ಮುಂದೆ ಓದಿ……..