ಇಂದು ರೈತ ದಿನಾಚರಣೆ | ನಾವು ರೈತರು ನಮಗೆ “ನಾವೇ” ಶುಭಾಶಯ ಕೋರಿಕೊಳ್ಳಬೇಕಾಗಿದೆ…!

December 23, 2023
11:20 AM

ಇವತ್ತು ರೈತರ ದಿನಾಚರಣೆ(Farmers day) ಅಂತೆ. ಕೃಷಿ ಗುಂಪುಗಳಲ್ಲಿ ಇತರೆ ಜಾಲತಾಣದಲ್ಲಿ(Social Media)”ರೆಡಿಮೇಡ್”(Ready-made) ಶುಭಾಶಯಗಳ(greetings) ಹಂಚಿಕೆಯಾಗುತ್ತಿದೆ. ದುರಂತ(tragedy) ಎಂದರೆ ಬೇರೆಲ್ಲಾ ದಿನಾಚರಣೆಗಳನ್ನು ಆಚರಿಸಲು(celebration ) ಸಮಾಜಕ್ಕೆ(Social) ಮತ್ತು ನಮ್ಮ ರಾಜಕೀಯ ವ್ಯವಸ್ಥೆಗಿರುವ(Political system) ಖುಷಿ “ರೈತ ದಿನಾಚರಣೆ” ಆಚರಣೆಗಿಲ್ಲ..!? ನಾವು ರೈತರು(Farmers) ನಮಗೆ “ನಾವೇ” ಶುಭಾಶಯಗಳನ್ನ‌” ಕೋರಿಕೊಳ್ಳಬೇಕಾಗಿದೆ”…

Advertisement
Advertisement

ಬದಲಾದ ಋತುಮಾನ, ಯಾವುದೇ ಔಷಧಕ್ಕೂ ಬಗ್ಗದ ಕೃಷಿ ರೋಗಗಳು, ಉತ್ಪಾದನಾ ವೆಚ್ಚಕ್ಕೂ ಮಾರುಕಟ್ಟೆ ಬೆಲೆಗೂ ತಾಳೆಯಾಗದ ಕೃಷಿ ಉತ್ಪನ್ನದ ಬೆಲೆಗಳೂ, ಕೃಷಿ ಬದುಕನ್ನ ಮಾಡಲು ಬರದ ಮೂರು ನಾಲ್ಕನೇ ತಲೆಮಾರಿನ ಪೀಳಿಗೆ… ಕೃಷಿಯಲ್ಲೀಗ ವೃದ್ದ ಕೃಷಿಕರು ಮತ್ತು ಕೂಲಿ ಕಾರ್ಮಿಕರು… ಸರ್ಕಸ್ ಕಂಪೆನಿಯವರು ಊರ ಬಯಲಿನಲ್ಲಿ ಪ್ರದರ್ಶನ ಹಾಕಿ ಒಂದು ದಿನ ಪ್ರದರ್ಶನ ‌ಮುಗಿಸಿ ಟೆಂಟು ಕಿತ್ತು ತಮ್ಮ ಸಾಮಾನು ಸರಂಜಾಮಿನ ಸಹಿತ ಇನ್ನೊಂದು ಊರಿಗೆ ಹೋಗುವಂತೆ ಕೃಷಿ ಬದುಕೂ ಟೆಂಟ್ ಕಿತ್ತು ಇನ್ನೊಂದು ಬದುಕಿನತ್ತ ಹೋಗುವ ಬದಲಾವಣೆ ಆಗುವ “ಆಟ” ದಂತೆ ಎನಿಸುತ್ತಿದೆ.

ಈ ಅಸ್ಥಿರ ಅಭದ್ರ ಯಾರಿಗೂ ಬೇಡವಾದ ಅನ್ನ ಆಹಾರ ಕೊಡುವ ರಂಗದ ” ಕಿಸಾನ”ರಿಗೆ ಶುಭಾಶಯ ಹೇಳುವುದೋ  “ಶುಭ ವಿದಾಯ” ಹೇಳುವುದೋ ಅರಿವಾಗದಾಗಿದೆ..‌‌.!! ಸದ್ಯಕ್ಕೆ ನಮಗೆ ನಾವೇ ಜಯ್ ಎನ್ನೋಣ…. “ಜಯ್ ಕಿಸಾನ್ “… ರೈತ ಬಂಧುಗಳೇ ಪರಸ್ಪರ ಶುಭಾಶಯಗಳು…

Today is Farmers Day. “Ready-made” greetings are being shared among farming groups and other websites. The tragedy is that there is no celebration of “Farmer’s Day” for the society and our political system to celebrate all the other days..!? We farmers have to “wish” for “ourselves”…

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಬೆಳಗಾವಿಯಲ್ಲಿ ಧಾರಾಕಾರ ಮಳೆ | ವ್ಯಾಪಕವಾಗಿ ಕೃಷಿಗೆ ಹಾನಿ
June 26, 2025
7:42 AM
by: ದ ರೂರಲ್ ಮಿರರ್.ಕಾಂ
ಪುತ್ತೂರಿನಲ್ಲಿ ಜೂನ್ 30 ರಿಂದ ಜುಲೈ 6 ರ ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ | ‘ಕುರಿಯ ಪ್ರಶಸ್ತಿ’ ಪ್ರದಾನ
June 26, 2025
7:05 AM
by: The Rural Mirror ಸುದ್ದಿಜಾಲ
ಅಡಿಕೆ ಮಾರಾಟದ ದಾರಿಗಳು ಯಾವುದೆಲ್ಲಾ…?
June 26, 2025
6:48 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ | ಕೃಷಿಕರಿಗೆ ಹೇಗೆ ಪ್ರಯೋಜನವಾಗುತ್ತಿದೆ…?
June 26, 2025
6:31 AM
by: ರಮೇಶ್‌ ದೇಲಂಪಾಡಿ

You cannot copy content of this page - Copyright -The Rural Mirror

Join Our Group