ಸಾವಯವ ಕೃಷಿ ಉತ್ತೇಜನಕ್ಕೆ ಆದ್ಯತೆ | 256 ಒಂಗೋಲ್ ಜಾನುವಾರುಗಳನ್ನು ನೀಡಲಿರುವ ತಿರುಪತಿ ದೇವಸ್ಥಾನ |

January 17, 2022
7:00 AM

ಸಾವಯವ ಕೃಷಿಯನ್ನು ಉತ್ತೇಜಿಸುವ  ಭಾಗವಾಗಿ ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಪ್ರಕಾಶಂ ಜಿಲ್ಲೆಯ ರೈತರಿಗೆ ಓಂಗೋಲ್ ತಳಿಯ 256 ಜಾನುವಾರುಗಳನ್ನು ನೀಡಲಿದೆ.

Advertisement
Advertisement

ಆಂದ್ರಪ್ರದೇಶದ  ಚಿರಾಳ, ಕೂರಿಸಪದವು, ಅರ್ಧವೀಡು, ಮುರ್ತೂರು ಮಂಡಲಗಳಿಗೆ  40 ಹಸುಗಳು ಹಾಗೂ ಹೋರಿಗಳನ್ನು ನೀಡಲಾಗಿದೆ. ಉಳಿದ ಜಾನುವಾರುಗಳನ್ನು ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ನೀಡಲಾಗುವುದು. ಜಿಲ್ಲೆಯ 56 ಮಂಡಲಗಳ ಪೈಕಿ 45 ಮಂಡಲಗಳ ಸಾವಯವ ಕೃಷಿಕರು  ಅರ್ಜಿ ಸಲ್ಲಿಸಿದ್ದಾರೆ.

ಸಾವಯವ ಕೃಷಿ ಕಾರ್ಯಕ್ರಮದಡಿ ಪ್ರತಿ ರೈತರಿಗೆ ಒಂದು ಹಸು ಅಥವಾ ಜೋಡಿ ಎತ್ತುಗಳ ನ್ನು ಟಿಟಿಡಿ ಮಂಜೂರು ಮಾಡಿದೆ. ಮೊದಲ ಬ್ಯಾಚ್‌ನ ಓಂಗೋಲ್ ತಳಿಯ ಜಾನುವಾರು ಮಂಗಳವಾರ  ಆಗಮಿಸಿದ್ದು ಅದೇ ದಿನ ರೈತರಿಗೆ ವಿತರಿಸಲಾಗಿದೆ. ಉಳಿದ ಗೋವುಗಳನ್ನು ಸದ್ಯವೇ ನೀಡಲಾಗುವುದು ಎಂದು ಝಡ್‌ವಿಎನ್‌ಎಫ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಸುಭಾಷಿಣಿ ಹೇಳಿದರು.

ಪ್ರಸಾದ ತಯಾರಿಕೆಗಾಗಿ, ಟಿಟಿಡಿ ಮಂಡಳಿಯು ಸಾವಯವವಾಗಿ ಬೆಳೆದ 6,000 ಕ್ವಿಂಟಲ್ ಭತ್ತವನ್ನು ಸೂಕ್ತ ಬೆಂಬಲ ಬೆಲೆಯಲ್ಲಿ ಜಿಲ್ಲಾ ಅಧಿಕಾರಿಗಳಿಂದ ಖರೀದಿಸಲು ಒಪ್ಪಿಗೆಯನ್ನು ನೀಡಿದೆ. ಆದುದರಿಂದ 625 ರೈತರು ಝಡ್‌ಬಿಎನ್‌ಎಫ್ ಅಥವಾ ಸಾವಯವ ಕೃಷಿ ಮೂಲಕ ಜಿಲ್ಲೆಯ ಕೃಷಿ ಅಧಿಕಾರಿಗಳ ಬೆಂಬಲದೊಂದಿಗೆ ಬೆಳೆ ಬೆಳೆಯಲು ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ.

 

Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 07-06-2025 | ಜೂನ್ 11 ರಿಂದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆ
June 7, 2025
1:48 PM
by: ಸಾಯಿಶೇಖರ್ ಕರಿಕಳ
ಸುಸ್ಥಿರ ಅಭಿವೃದ್ಧಿ ಯಾವಾಗಲೂ ತತ್ವಶಾಸ್ತ್ರ ಮತ್ತು ಸಿದ್ಧಾಂತದ ಮೂಲತತ್ವಾಗಿದೆ
June 7, 2025
7:15 AM
by: The Rural Mirror ಸುದ್ದಿಜಾಲ
ನಿಮಗೆ ಸಾಡೇಸಾತಿ ಶುರುವಾಗಿದ್ರೆ ಶನಿ ನೀಡ್ತಾನೆ ಈ 6 ಸೂಚನೆ..!
June 7, 2025
6:58 AM
by: ದ ರೂರಲ್ ಮಿರರ್.ಕಾಂ
ಡೀಮ್ಡ್, ಸೆಕ್ಷನ್ 4 ಬಿಕ್ಕಟ್ಟು ಪರಿಹಾರಕ್ಕೆ ಶೀಘ್ರವೇ ಕೇಂದ್ರ, ಸುಪ್ರೀಂಗೆ ಮನವಿ | ಸಚಿವ ಈಶ್ವರ್ ಖಂಡ್ರೆ
June 6, 2025
9:39 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group