ದಯೆ ತೋರು ಶ್ರೀ ತುಳಸಿ

November 26, 2020
10:00 PM
ಕರವ ಮುಗಿದು ಶಿರವ ಬಾಗಿ
ಬೇಡುವೆನು ಅಮ್ಮ ತಾಯೆ
ವರವ ಕೊಡು ಹರಿಯ ಸಖಿ
ನಮಿಸುವೆನು ಎನ್ನ ಕಾಯೆ  ||
ಉದಯಕಾಲ ಮಡಿಯನುಟ್ಟು
ಸುಮಗಳಿಂದ ಪೂಜೆಗೈವೆ
ಭಕ್ತಿಯಲಿ ಬೇಡುವೆನು
ಹರಿಯ ಸ್ಮರಣೆ ಮಾಡುವೆನು  ||
ದಯೆಯ ತೋರು ಶ್ರೀ ತುಳಸಿ
ಅರಸಿನ ಕುಂಕುಮದ ಒಡತಿ
ಸಂತಾನಭಾಗ್ಯ ನೀಡಿ ಬೆಳಗು
ವರಿಸಿದ ಮನೆಯ ಪ್ರಣತಿ  ||
ಧೂಪದೀಪವನ್ನು ಬೆಳಗಿ
ನಿತ್ಯ ನಿನ್ನ ಪೂಜೆಗೈವೆ
ತಾಪವನ್ನು ದೂರಮಾಡು
ಸತ್ಯ ನಿನ್ನ ಜಪವಗೈವೆ  ||
ಕ್ಲೇಶವನ್ನು ದೂರಮಾಡು
ತೋಷವನ್ನು ಎನಗೆ ನೀಡು
ದಾತೆ ವೃಂದೆ ನಮಿಪೆ ನಿನಗೆ
ಮಾತೆ ನಿಂದೆ ಚರಣಕೆರಗಿ    ||
# ರೂಪಾಪ್ರಸಾದ ಕೋಡಿಂಬಳ

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಬದುಕು ಪುರಾಣ | ಮನವನ್ನು ಚುಚ್ಚುವ ಅಳಿಲು
July 14, 2025
10:56 PM
by: ನಾ.ಕಾರಂತ ಪೆರಾಜೆ
ಮೊಬೈಲ್‌ ಕಣ್ಣು ಮಾತ್ರವಲ್ಲ – ಮನಸ್ಸನ್ನೂ ಹಾಳು ಮಾಡುತ್ತದೆ..!
July 13, 2025
11:36 AM
by: ಮಹೇಶ್ ಪುಚ್ಚಪ್ಪಾಡಿ
ಹೊಸರುಚಿ | ಹಲಸಿನ ಬೀಜದ ಪರೋಟ
July 12, 2025
7:11 AM
by: ದಿವ್ಯ ಮಹೇಶ್
ಸೆಕ್ಸ್ ಎಂದರೆ ಜತೆಯಲ್ಲಿ ಕಾಫಿ ಕುಡಿದಂತಲ್ಲ!?
July 10, 2025
7:53 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror

Join Our Group