ದಯೆ ತೋರು ಶ್ರೀ ತುಳಸಿ

November 26, 2020
10:00 PM
ಕರವ ಮುಗಿದು ಶಿರವ ಬಾಗಿ
ಬೇಡುವೆನು ಅಮ್ಮ ತಾಯೆ
ವರವ ಕೊಡು ಹರಿಯ ಸಖಿ
ನಮಿಸುವೆನು ಎನ್ನ ಕಾಯೆ  ||
ಉದಯಕಾಲ ಮಡಿಯನುಟ್ಟು
ಸುಮಗಳಿಂದ ಪೂಜೆಗೈವೆ
ಭಕ್ತಿಯಲಿ ಬೇಡುವೆನು
ಹರಿಯ ಸ್ಮರಣೆ ಮಾಡುವೆನು  ||
ದಯೆಯ ತೋರು ಶ್ರೀ ತುಳಸಿ
ಅರಸಿನ ಕುಂಕುಮದ ಒಡತಿ
ಸಂತಾನಭಾಗ್ಯ ನೀಡಿ ಬೆಳಗು
ವರಿಸಿದ ಮನೆಯ ಪ್ರಣತಿ  ||
ಧೂಪದೀಪವನ್ನು ಬೆಳಗಿ
ನಿತ್ಯ ನಿನ್ನ ಪೂಜೆಗೈವೆ
ತಾಪವನ್ನು ದೂರಮಾಡು
ಸತ್ಯ ನಿನ್ನ ಜಪವಗೈವೆ  ||
ಕ್ಲೇಶವನ್ನು ದೂರಮಾಡು
ತೋಷವನ್ನು ಎನಗೆ ನೀಡು
ದಾತೆ ವೃಂದೆ ನಮಿಪೆ ನಿನಗೆ
ಮಾತೆ ನಿಂದೆ ಚರಣಕೆರಗಿ    ||
# ರೂಪಾಪ್ರಸಾದ ಕೋಡಿಂಬಳ

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕುಂಭಸ್ನಾನ ಮತ್ತು ವಿಜ್ಞಾನ
February 27, 2025
9:25 PM
by: ಡಾ.ಚಂದ್ರಶೇಖರ ದಾಮ್ಲೆ
“ನದಿ ಮತ್ತು ಪರಿಸರ” ಶುದ್ಧತೆ ಉಳಿಸಿಕೊಳ್ಳಬೇಕಾದರೆ ಭಾವನಾತ್ಮಕವಾಗಿ ಅಷ್ಟೇ ಕನೆಕ್ಟ್‌ ಆಗಬೇಕಾದ್ದಲ್ಲ…
February 26, 2025
8:21 AM
by: ಮಹೇಶ್ ಪುಚ್ಚಪ್ಪಾಡಿ
ಸಹಕಾರಿ ಪಾಠ | ಆರ್ಥಿಕ ಶಿಸ್ತು ಹಾಗೂ ಸಣ್ಣ ಸಣ್ಣ ಮೊತ್ತವೂ ಬ್ಯಾಂಕಿಗೆ ಏಕೆ ಬರಬೇಕು…?
February 24, 2025
9:25 PM
by: ರಮೇಶ್‌ ದೇಲಂಪಾಡಿ
ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು
February 20, 2025
7:14 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror