ತುಳುನಾಡು ಸಹಿತ ವಿಶ್ವದ ನಾನಾ ಭಾಗಗಳಲ್ಲಿ ಇರುವ ತುಳು ಭಾಷಿಕರಲ್ಲಿ ತುಳು ಲಿಪಿಯ ಬಗ್ಗೆ ಅರಿವು ಮತ್ತು ಆಸಕ್ತಿ ಮೂಡಿಸುವ ಉದ್ದೇಶದಿಂದ ‘ಜೈ ತುಳುನಾಡು (ರಿ.) ಸಂಘಟನೆ ನಡೆಸುವ ತುಳು ಲಿಪಿ ಆನ್-ಲೈನ್ ತರಗತಿಯಲ್ಲಿ ಭಾಗವಹಿಸಿ ಬಳಿಕ ನಡೆದ ಆನ್-ಲೈನ್ ಪರೀಕ್ಷೆಯಲ್ಲಿ ಪಂಚಮಿ ಬಿ.ಆರ್. 100 ಕ್ಕೆ 100 ಅಂಕಗಳನ್ನು ಗಳಿಸುವ ಮೂಲಕ ವಿಶೇಷ ಸಾಧನೆಯನ್ನು ಮಾಡಿದ್ದಾರೆ.
ಧಾರವಾಡದಲ್ಲಿರುವ JJS ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ನಲ್ಲಿ 8ನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಇವರು ಕಾಸರಗೂಡಿನ ದೇಲಂಪಾಡಿ ಗ್ರಾಮದ ಬಂದ್ಯಡ್ಕ ರಾಜೇಶ್ ಹಾಗೂ ಚಿತ್ರಕಲಾ ದಂಪತಿಯ ಪುತ್ರಿ.
ಕಳೆದ ವರ್ಷ ನವಂಬರ್ 22ರಂದು ತುಳು ಲಿಪಿ ತರಗತಿಯನ್ನು ಆನ್ ಲೈನ್ ಮುಖಾಂತರ ಜೈ ತುಳುನಾಡು (ರಿ) ಸಂಘಟನೆ ಆಯೋಜಿಸಿತ್ತು. ಸುಮಾರು 3-4 ತಿಂಗಳುಗಳ ಕಾಲ ನಡೆದ ಈ ತರಗತಿಯಲ್ಲಿ ಮೂವರು ಶಿಕ್ಷಕರು ತುಳು ವರ್ಣಮಾಲೆ, ಕಾಗುಣಿತ ಮತ್ತು ಅಂಕೆಗಳ ಪಾಠವನ್ನು ಹೇಳಿಕೊಡುತ್ತಿದ್ದರು.
ಬಳಿಕ, ಶಬ್ದಗಳು, ವಾಕ್ಯ ರಚನೆ, ತುಳುವಿನಿಂದ ಕನ್ನಡಕ್ಕೆ ಬರೆಯುವುದು, ಕನ್ನಡದಿಂದ ತುಳು ಭಾಷೆಯ ಲಿಪಿಯಲ್ಲಿ ಬರೆಯುವುದನ್ನು ಶಿಕ್ಷಕರು ಹೇಳಿಕೊಡುತ್ತಿದ್ದರು.
ಈ ಪಾಠವೆಲ್ಲಾ ಮುಗಿದ ಬಳಿಕ, ಜುಲೈ. 23ರಂದು ಜೈ ತುಳುನಾಡು ಸಂಘಟನೆ ಮುಖಾತರ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗಳ ಫಲಿತಾಂಶ ಆಗಸ್ಟ್ 15ರಂದು ಪ್ರಕಟವಾಗಿದೆ. ಇದರಲ್ಲಿ ಪಂಚಮಿ ಬಿ ಆರ್ 100ಕ್ಕೆ 100 ಅಂಕಗಳನ್ನು ಪಡೆದುಕೊಂಡು ಮೊದಲ ಸ್ಥಾನ ಪಡೆದಿಕೊಂಡಿದ್ದಾರೆ.
ಬೇಸಿಗೆ(summer) ಮತ್ತು ಬೆವರು(Sweating) ಒಂದು ಪರಿಪೂರ್ಣ ಸಮೀಕರಣವಾಗಿದೆ. ಬೇಸಿಗೆಯಲ್ಲಿ ಬೆವರುವುದು ಒಂದು ದೊಡ್ಡ…
ಗ್ಯಾರಂಟಿ(Guarantee) ಘೋಷಣೆ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇದೀಗ ಒಂದು ವರ್ಷ…
ದ್ವಿತೀಯ ಪಿಯುಸಿಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶ ಘೋಷಣೆಯಾದ…
ದೇಶದ ಮಹಾ ಸಮರ ಲೋಕಸಭೆ ಚುನಾವಣೆ ೨೦೨೪. ದೇಶದ ಜನತೆ ಬಹಳ ಕುತೂಹಲದಿಂದ…
ಮೇ 24ರಿಂದ ರಾಜ್ಯದಾದ್ಯಂತ ಮಳೆಯ ಪ್ರಮಾಣವೂ ಕಡಿಮೆಯಾಗುವ ಮುನ್ಸೂಚನೆ ಇದೆ. ಜೂನ್ ಮೊದಲ…
ಮಳೆಗಾಲದ ಆರಂಭದಲ್ಲಿ ಮೂಲಭೂತ ಸೇವೆ ಎಂದು ಇಂದು ಗ್ರಾಮೀಣ ಭಾಗದಲ್ಲೂ ಬಯಸುವ ವಿದ್ಯುತ್…