ತುಳುನಾಡ ದೈವಾರಾಧನೆ ಟೂರ್‌ ಪ್ಯಾಕೇಜ್‌…! | ಕರಾವಳಿಗರಿಂದ ಭಾರೀ ಖಂಡನೆ |

December 4, 2023
1:41 PM

ತುಳುನಾಡು(Tulunadu) ನಾಗಾರಾಧನೆ ಮತ್ತು ಭೂತಾರಾಧನೆಯ(Bhootharadhane) ನೆಲ. ಭೂತಾರಾಧನೆ ಪರಿಸರದ ಜನರನ್ನು ಒಳಗೊಳಿಸುವ ಬಹುತ್ವದ ಧರ್ಮ. ಭೂತದ ನುಡಿಯಲ್ಲಿಯೇ ಹೇಳುವುದಾದರೆ ಹತ್ತು ತಾಯಿಯ ಮಕ್ಕಳನ್ನು ಒಂದು ಮಡಿಲಲ್ಲಿರಿಸಿ ರಮಿಸಿ ಎದೆ ಹಾಲು ಕುಡಿಸಿ ಪೋಷಿಸುವ ಶಕ್ತಿಗಳು ಇವು. ಇಲ್ಲಿ ಭೂತ ಶಕ್ತಿಗಳು ತಾಯಿ ಶಕ್ತಿಗಳು ಎನ್ನುವುದು ನಂಬಿಕೆ. ಅಂತಹ ತುಳುನಾಡಿನ ಭೂತಾರಾಧನೆಗೆ ಆಚರಣೆಯನ್ನೇ ಉದ್ಯಮ ಮಾಡಲು ಹೊರಟಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದೀಗ ಕೋಲವನ್ನು ರದ್ದು ಪಡಿಸುವುದಾಗಿ ಸಂಘಟಕರು ಒಪ್ಪಿಕೊಂಡಿದ್ದಾರೆ.

ದೈವಕೋಲ, ಕಂಬಳದ ಹೆಸರಿನಲ್ಲಿ ದೈವಾರಾಧನೆಯಲ್ಲೂ ಟ್ರಾವೆಲ್ ಏಜೆನ್ಸಿಯೊಂದು ಟೂರ್ ಪ್ಯಾಕೇಜ್ ಪರಿಚಯಿಸಿದ್ದು, ಇದು ಕರಾವಳಿ(Coastal) ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ. ಟ್ರಾವೆಲ್ ಸಂಸ್ಥೆಯೊಂದು 2,899 ರೂಪಾಯಿ ದರ ವಿಧಿಸಿ ಬೋಟಿಂಗ್(Boating), ಉಪ್ಪಿನಂಗಡಿಯಲ್ಲಿ ಕಂಬಳ(Kambala), ಪುತ್ತೂರಿನಲ್ಲಿ ಪಾರ್ಟಿ(Party), ಬೊಳ್ಳಾಡಿ ಫಾರ್ಮ್‌ನಲ್ಲಿ ದೈವದ ಕೋಲ, ಬೀರಮಲೆ ಬೆಟ್ಟಕ್ಕೆ ಚಾರಣ(Trucking) ಎಂಬ ಆಫರ್(Offer) ನೀಡಿದೆ. ಫೆಬ್ರವರಿ 10 ಮತ್ತು 11ರಂದು ಎರಡು ದಿನಗಳ ಕಾಲ ಈ ಪ್ರವಾಸ ನಿಗದಿ ಮಾಡಲಾಗಿದೆ. ಸದ್ಯ ಈ ಪ್ಯಾಕೇಜ್ ‌ಬೆಂಗಳೂರು, ಮುಂಬೈಗಳಂತಹ ಮಹಾನಗರಗಳಲ್ಲಿ ಇರುವವರ ವಾಟ್ಸ್ಆ್ಯಪ್ ಗಳಲ್ಲಿ, ಪೇಸ್‌ ಬುಕ್‌ ನಲ್ಲಿ ಹರಿದಾಡಿದೆ.

ತುಳುನಾಡಿನಲ್ಲಿ ದೈವಾರಾಧನೆಗೆ ಅಪಚಾರ ಮಾಡುವುದು ಸರಿಯಲ್ಲ ಎಂದು ದೈವ ನರ್ತಕ ದಯಾನಂದ ಜಿ ಕತ್ತಲ್ ಸಾರ್ ಹೇಳಿದ್ದಾರೆ.

ತುಳುನಾಡ ಭೂತಾರಾಧನೆ ಬಗ್ಗೆ ಒಂದು ಕಾಲದಲ್ಲಿ ಭೂತದ ಹೆಸರು ಹೇಳಲು ಹಿಂದೆ ಮುಂದೆ ನೋಡುತ್ತಿದ್ದ ಕಾಲ ಇತ್ತು. ಅಂತಹದ್ದರಲ್ಲಿ ಈಗ ಭೂತಾರಾಧನೆಯ ಹೆಸರಲ್ಲಿ ಟೂರು ಪ್ಯಾಕೇಜ್‌ ಮಾಡಿ ಬಿಸಿನೆಸ್‌ ಮಾಡಲು ಹೊರಟಿದ್ದಾರೆ. ಕೇವಲ ದೈವಕೋಲವನ್ನು ಭಕ್ತಿಭಾವದಿಂದ ನೋಡಿ ಅದರ ಆಚರಣೆಗೆ ತಲೆ ಭಾಗಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ.

A travel agency has introduced a tour package in the name of Daivakola and Kambal, which has caused outrage among the coastal people. A travel agency charged Rs 2,899 and offered boating, blanket at Uppinandi, party at Puttur, Daivada Kola at Bolladi Farm, trek to Beeramale hill. The tour is scheduled for two days on February 10 and 11. Currently, this package is circulating in the WhatsApp groups and FBs of people in big cities like Bangalore and Mumbai.
- ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ
July 14, 2026
7:01 AM
by: ದ ರೂರಲ್ ಮಿರರ್.ಕಾಂ
ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ
July 14, 2026
6:53 AM
by: ದ ರೂರಲ್ ಮಿರರ್.ಕಾಂ
ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ
July 14, 2026
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror