Advertisement
MIRROR FOCUS

ತುಮಕೂರು ತೆಂಗಿನ ತೋಟಗಳಿಗೆ ಕೀಟದ ದಾಳಿ | ರೈತರಿಗೆ ₹ 54,000 ನೆರವು

Share

ತುಮಕೂರು ಜಿಲ್ಲೆಯಲ್ಲಿ ತೆಂಗಿನ ಕೃಷಿಗೆ ಕೀಟ ಮತ್ತು ರೋಗಗಳ ದಾಳಿ ಗಂಭೀರ ಸವಾಲಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ತೆಂಗಿನ ಬೆಳೆ ವ್ಯಾಪಕವಾಗಿರುವುದರಿಂದ ರೈತರ ಬದುಕಿನ ಪ್ರಮುಖ ಆದಾಯ ಮೂಲವಾಗಿರುವ ಈ ಬೆಳೆ ಈಗ ರೆಡ್ ಪಾಮ್ ವೀವಿಲ್ (Red Palm Weevil) ಕೀಟ ಹಾಗೂ ರೂಟ್ ವಿಲ್ಟ್ (Root Wilt) ರೋಗದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.  ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳ ಬಗ್ಗೆ ವಿಧಾನಪರಿಷತ್‌ನಲ್ಲಿ ಸದಸ್ಯ ಚಿದಾನಂದ್‌ ಎಂ ಗೌಡ ತೋಟಗಾರಿಕಾ ಸಚಿವರಿಗೆ ಪ್ರಶ್ನೆ ಕೇಳಿದ್ದರು.

ತೋಟಗಾರಿಕಾ ಇಲಾಖೆ ನೀಡಿರುವ ಮಾಹಿತಿಯಂತೆ, ಜಿಲ್ಲೆಯಲ್ಲಿ ಸುಮಾರು 8,817 ಹೆಕ್ಟೇರ್ ಪ್ರದೇಶದಲ್ಲಿ ರೆಡ್ ಪಾಮ್ ವೀವಿಲ್ ಕೀಟದ ದಾಳಿ ಕಂಡುಬಂದಿದೆ. ಜೊತೆಗೆ, ತೆಂಗಿನ ರೂಟ್ ವಿಲ್ಟ್ ರೋಗವು 22,071 ಹೆಕ್ಟೇರ್ ವ್ಯಾಪ್ತಿಗೆ ವಿಸ್ತಾರಗೊಂಡಿದೆ ಎಂದು ವರದಿಯಾಗಿದೆ.  ತುಮಕೂರು ಜಿಲ್ಲೆಯು ಕರ್ನಾಟಕದಲ್ಲೇ ತೆಂಗಿನ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಹೊಂದಿದ್ದು, ಜಿಲ್ಲೆಯ ಒಟ್ಟು 1.79 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಕೃಷಿ ನಡೆಯುತ್ತಿದೆ. ತೆಂಗಿನ ಬೆಳೆ ಉಳಿಸಲು ಮತ್ತು ರೈತರ ನೆರವಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ರೋಗ–ಕೀಟ ನಿಯಂತ್ರಣದ ಜೊತೆಗೆ ಪುನಶ್ಚೇತನ ಕಾರ್ಯಗಳಿಗೆ ಸಹಾಯಧನ ಒದಗಿಸಲಾಗುತ್ತಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.

ತೆಂಗಿನ ಪುನಶ್ಚೇತನ–ಪುನರ್ ನಾಟಿ ಯೋಜನೆಯ ಅಡಿಯಲ್ಲಿ ತೆಂಗಿನ ಮರಗಳ ಪುನಶ್ಚೇತನ ಹಾಗೂ ಮರುನಾಟಿಗೆ ಸರ್ಕಾರವು ಪ್ರತಿ ಹೆಕ್ಟೇರ್‌ಗೆ ₹54,000 ಸಹಾಯಧನ ನೀಡುತ್ತಿದ್ದು ಮೊದಲ ವರ್ಷ ₹45,250 ಹಾಗೂ ಎರಡನೇ ವರ್ಷ ನಿರ್ವಹಣೆಗಾಗಿ ₹8,750 ನೀಡಲಾಗುತ್ತಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೇ 1,084 ರೈತರಿಗೆ ನೆರವು ನೀಡಲಾಗಿದ್ದು 591 ಹೆಕ್ಟೇರ್ ವ್ಯಾಪ್ತಿಗೆ ₹187 ಲಕ್ಷ ಸಹಾಯಧನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕೀಟ–ರೋಗ ವ್ಯಾಪಕ ಪ್ರದೇಶಗಳಿಗೆ ಗುಂಪು ವಿಧಾನದಲ್ಲಿ ನಿಯಂತ್ರಣ ಕೈಗೊಳ್ಳಲಾಗಿದ್ದು, ಪ್ರತಿ ಹೆಕ್ಟೇರ್‌ಗೆ ₹35,000 ಸಹಾಯಧನ ನೀಡಲಾಗಿದ್ದು ಈ ಯೋಜನೆ ಅವಧಿ 2 ವರ್ಷವಾಗಿದೆ.  ತುಮಕೂರು ಜಿಲ್ಲೆಯಲ್ಲಿ 9,840 ಹೆಕ್ಟೇರ್ ವ್ಯಾಪ್ತಿಗೆ ₹1829.87 ಲಕ್ಷ ಅನುದಾನ ನೀಡಿದ್ದು 15,338 ರೈತರಿಗೆ ಲಾಭ ದೊರೆತಿದೆ ಎಂದು ತಿಳಿಸಿದ್ದಾರೆ.

ಬ್ಲಾಕ್ ಹೆಡೆಡ್ ಕ್ಯಾಟರ್ಪಿಲ್ಲರ್ ಮತ್ತು ವೈಟ್‌ಫ್ಲೈ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲಾಗಿದ್ದು ತೆಂಗಿನ ಎಲೆಗಳನ್ನು ನಾಶಮಾಡುವ ಕೀಟ ನಿಯಂತ್ರಣಕ್ಕೆ  23 ಪ್ರಯೋಗ ಕೇಂದ್ರಗಳ ಸ್ಥಾಪನೆ, ಜೈವಿಕ ನಿಯಂತ್ರಣ ಪರೋಪಜೀವಿಗಳ ಉತ್ಪಾದನೆ ಸೇರಿದಂತೆ  ಒಟ್ಟು ₹1.4 ಕೋಟಿ ವೆಚ್ಚ ಮಾಡಲಾಗಿದ್ದು ತುಮಕೂರಿಗೆ ₹21 ಲಕ್ಷ ವಿಶೇಷ ಅನುದಾನ ನೀಡಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಸಹಾಯದಿಂದ  ಪೋಷಕಾಂಶ ಕೊರತೆ ಹಾಗೂ ಕೀಟ ನಿರ್ವಹಣೆಗೆ ಒಟ್ಟು ವೆಚ್ಚ ₹5,000ನಲ್ಲಿ ₹1,500 ಸಹಾಯ ಹಾಗೂ ಗರಿಷ್ಠ 2 ಹೆಕ್ಟೇರ್ ವರೆಗೆ ₹3,000 ಮಿತಿ ಇದ್ದು ಇದರಿಂದ ರೈತರಿಗೆ ನೇರ ಆರ್ಥಿಕ ನೆರವು ಒದಗುತ್ತಿದೆ ಎಂದು ಉತ್ತರದಲ್ಲಿ ಉಲ್ಲೇಖಿಸಲಾಗಿದೆ.

ತೆಂಗಿನ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ, CPCRI ಕಾಸರಗೋಡು ತಜ್ಞರು 2025ರ ಜುಲೈ–ಆಗಸ್ಟ್‌ನಲ್ಲಿ ತುಮಕೂರು ಭೇಟಿ ನೀಡಿದ್ದಾರೆ. ಈ ವೇಳೆ 12 ಪ್ರದರ್ಶನ ಕಾರ್ಯಕ್ರಮ, 85 ತರಬೇತಿ ಶಿಬಿರ, 12,500 ರೈತರಿಗೆ ಜಾಗೃತಿ ಕಾರ್ಯಕ್ರಮಗಳು ಜರುಗಿವೆ ಎಂದು ತಿಳಿಸಿದ್ದಾರೆ.

ತೋಟಗಾರಿಕಾ ಇಲಾಖೆಯಲ್ಲಿನ ಪ್ರಸ್ತುತ ವ್ಯವಸ್ಥೆಯಲ್ಲಿ ಬೆಳೆ ನಷ್ಟ ಪರಿಹಾರಕ್ಕೆ ಪ್ರತ್ಯೇಕ ಯೋಜನೆ ಇಲ್ಲ. 2023-24 ರಿಂದ 2025-26ರ ಅವಧಿಯಲ್ಲಿ10.56 ಲಕ್ಷ ತೆಂಗಿನ ಮರಗಳಿಗೆ ರೆಡ್ ಪಾಮ್ ವೀವಿಲ್ ದಾಳಿ, 26.48 ಲಕ್ಷ ಮರಗಳಿಗೆ ರೂಟ್ ವಿಲ್ಟ್ ಸೋಂಕು ತಗುಲಿದೆ ಎಂದು ಅಂದಾಜಿಸಲಾಗಿದೆ.  ತೆಂಗಿನ ಕೀಟ–ರೋಗ ನಿಯಂತ್ರಣಕ್ಕಾಗಿ CPCRI ಹಾಗೂ NBAIR ಸಹಕಾರದೊಂದಿಗೆ ₹791.05 ಕೋಟಿ ಮೊತ್ತದ ಸಮಗ್ರ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…

3 hours ago

ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…

4 hours ago

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

14 hours ago

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

2 days ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

2 days ago