ಹವಾಮಾನ ಬದಲಾವಣೆಯ ಪರಿಣಾಮವಾಗಿ ವಿಶ್ವದ ಅನೇಕ ರಾಷ್ಟ್ರಗಳು ತೀವ್ರ ಉಷ್ಣ ಅಲೆಗಳನ್ನು ಎದುರಿಸುತ್ತಿರುವಾಗ, ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಮೇ ಹಾಗೂ ಜೂನ್ ತಿಂಗಳಲ್ಲಿ ಸಂಭವಿಸಿದ ಉರಿ ಬಿಸಿಲಿನಿಂದ 2,700 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಸಾವುಗಳಲ್ಲಿ 40 ಶೇಕಡಕ್ಕೂ ಹೆಚ್ಚಿನವು ಮಾನವಸೃಷ್ಟಿ ಹವಾಮಾನ ಬದಲಾವಣೆಗೆ ನೇರವಾಗಿ ಸಂಬಂಧಿಸಿವೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಈ ಅಧ್ಯಯನವನ್ನು ಇಂಪೀರಿಯಲ್ ಕಾಲೇಜ್ ಲಂಡನ್, ಯುಕೆ ಮೆಟ್ ಆಫೀಸ್ ಹಾಗೂ ಲಂಡನ್ ಸ್ಕೂಲ್ ಆಫ್ ಹೈಜಿನ್ ಅಂಡ್ ಟ್ರಾಪಿಕಲ್ ಮೆಡಿಸಿನ್ ಸಂಯುಕ್ತವಾಗಿ ನಡೆಸಿವೆ. ಮೇ ತಿಂಗಳ ಉಷ್ಣ ಅಲೆಯಲ್ಲಿ ಸುಮಾರು 550 ಮಂದಿ, ಜೂನ್ ತಿಂಗಳ ತೀವ್ರ ಬಿಸಿಗಾಳಿಯಲ್ಲಿ ಸುಮಾರು 2,200 ಮಂದಿ ಹೆಚ್ಚುವರಿಯಾಗಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಅಧ್ಯಯನದ ಪ್ರಕಾರ, ಕೈಗಾರಿಕಾ ಕ್ರಾಂತಿಯ ಬಳಿಕ ಜಾಗತಿಕ ಸರಾಸರಿ ತಾಪಮಾನ ಸುಮಾರು 1.4 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. ಈ ಏರಿಕೆಯೇ ಬ್ರಿಟನ್ನ ಉಷ್ಣ ಅಲೆಗಳನ್ನು ಇನ್ನಷ್ಟು ತೀವ್ರಗೊಳಿಸಿದ್ದು, ಅಂದಾಜು 40% ಕ್ಕಿಂತ ಹೆಚ್ಚು ಸಾವುಗಳಿಗೆ ಕಾರಣವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಯಾರಿಗೆ ಹೆಚ್ಚು ಅಪಾಯ? : ತೀವ್ರ ಬಿಸಿಲಿನಿಂದ ನೇರವಾಗಿ ಅಲ್ಲ, ಆದರೆ ಅದರ ಪರಿಣಾಮವಾಗಿ ಉಂಟಾಗುವ ಹೃದಯಾಘಾತ, ಪಾರ್ಶ್ವವಾಯು (ಸ್ಟ್ರೋಕ್), ಉಸಿರಾಟದ ತೊಂದರೆ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಜೀವಹಾನಿಗೆ ಪ್ರಮುಖ ಕಾರಣಗಳಾಗಿವೆ. ವಯೋವೃದ್ಧರು, ಮಕ್ಕಳು ಮತ್ತು ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದವರು ಹೆಚ್ಚು ಬಾಧಿತರಾಗಿದ್ದಾರೆ.
ಯುರೋಪಿನಲ್ಲೂ ಆತಂಕ : ಬ್ರಿಟನ್ ಮಾತ್ರವಲ್ಲದೆ ಜರ್ಮನಿ, ಫ್ರಾನ್ಸ್, ಬೆಲ್ಜಿಯಂ ಸೇರಿದಂತೆ ಯುರೋಪಿನ ಹಲವು ರಾಷ್ಟ್ರಗಳಲ್ಲೂ ಇದೇ ಅವಧಿಯಲ್ಲಿ ತೀವ್ರ ಉಷ್ಣ ಅಲೆಗಳ ಪರಿಣಾಮ ಸಾವಿರಾರು ಹೆಚ್ಚುವರಿ ಸಾವುಗಳು ದಾಖಲಾಗಿವೆ. ಜೂನ್ ಅಂತ್ಯದ ಒಂದೇ ವಾರದಲ್ಲಿ ಯುರೋಪಿನ 27 ದೇಶಗಳಲ್ಲಿ 10,000ಕ್ಕೂ ಹೆಚ್ಚು ಹೆಚ್ಚುವರಿ ಸಾವುಗಳು ಸಂಭವಿಸಿರುವುದಾಗಿ ವರದಿಯಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ತಜ್ಞರ ಪ್ರಕಾರ, ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಜೊತೆಗೆ ನಗರಗಳಲ್ಲಿ ಉಷ್ಣತೆಯನ್ನು ತಗ್ಗಿಸುವ ಮೂಲಸೌಕರ್ಯ, ಮುನ್ನೆಚ್ಚರಿಕೆ ವ್ಯವಸ್ಥೆ ಹಾಗೂ ಆರೋಗ್ಯ ರಕ್ಷಣಾ ಕ್ರಮಗಳನ್ನು ಬಲಪಡಿಸದಿದ್ದರೆ ಇಂತಹ ಘಟನೆಗಳು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
A new study by Imperial College London, the UK Met Office and the London School of Hygiene & Tropical Medicine estimates that more than 2,700 people died during the May and June 2026 heatwaves in England and Wales. Researchers say over 40% of these deaths were linked to human-caused climate change, highlighting the growing health risks of extreme heat across Europe.
ರಾಜ್ಯದ ಹಲವೆಡೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.…
ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…
ಮಳೆ ಮಾಹಿತಿ ಮೂಲಕ ಕೃಷಿಕರಿಗೆ ನೆರವಾಗುತ್ತಿರುವ ಸಾಯಿಶೇಖರ್ ಕರಿಕಳ ಅವರಿಗೆ ರೈತ ರತ್ನ…
ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಚೆಸ್ ಚಾಂಪಿಯನ್ಶಿಪ್ಗೆ ಭವ್ಯ ಚಾಲನೆ ದೊರೆತಿದ್ದು, ದೇಶದ 28…
ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್ 3ರಿಂದ ತೋಟದ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…