ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ 2026-27ರಲ್ಲಿ ಕೃಷಿ, ಕರಾವಳಿ ಮೀನುಗಾರಿಕೆ, ಆರೋಗ್ಯ ಕ್ಷೇತ್ರ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು ನೀಡಲಾಗಿದೆ. “ವಿಕಸಿತ ಭಾರತ” ಗುರಿಯೊಂದಿಗೆ ಗ್ರೇಡ್-2(ಟೈರ್ -2) ಮತ್ತು ಗ್ರೇಡ್-3(ಟೈರ್-3) ನಗರಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ಘೋಷಿಸಿದೆ.
ಸಾರ್ವಜನಿಕ ಬಂಡವಾಳ ವೆಚ್ಚವನ್ನು ₹11.2 ಲಕ್ಷ ಕೋಟಿಯಿಂದ ₹12.2 ಲಕ್ಷ ಕೋಟಿಗೆ ಹೆಚ್ಚಿಸಲಾಗಿದ್ದು, ಮೂಲಸೌಕರ್ಯ ವಿಸ್ತರಣೆ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ವೇಗ ಸಿಗಲಿದೆ.
ಕರಾವಳಿ ಆರ್ಥಿಕತೆಯ ಪ್ರಮುಖ ವಲಯವಾಗಿರುವ ಮೀನುಗಾರಿಕೆ ಹಾಗೂ ಸೀಫುಡ್ ರಫ್ತುಗೆ ಬೆಂಬಲ ನೀಡಲಾಗಿದ್ದು, ಡ್ಯೂಟಿ-ಫ್ರೀ ಇನ್ಪುಟ್ ಮಿತಿಯನ್ನು 1%ರಿಂದ 3%ಗೆ ಹೆಚ್ಚಿಸಲಾಗಿದೆ.
ಅದೇ ವೇಳೆ ಕೃಷಿಯಲ್ಲಿ ತೆಂಗು–ಕೋಕೋ ಸೇರಿದಂತೆ ವಾಣಿಜ್ಯ ಬೆಳೆಗಳಿಗೆ ಉತ್ತೇಜನ ನೀಡುವ ಜೊತೆಗೆ MSME ಹಾಗೂ ಸಣ್ಣ ಕೈಗಾರಿಕೆಗಳಿಗೆ ‘Corporate Mitras’ ತರಬೇತಿ ಯೋಜನೆ ಜಾರಿಗೆ ತರಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಿರುವ 17 ಔಷಧಗಳ ಮೇಲೆ ಕಸ್ಟಮ್ಸ್ ಡ್ಯೂಟಿ ವಿನಾಯಿತಿ ನೀಡಲಾಗಿದೆ.


