Advertisement
MIRROR FOCUS

ರೈತ ಸಂಘಟನೆಗಳೊಂದಿಗೆ ಸಮಾಲೋಚನೆ | ಬೆಳೆ ವಿಮೆ, ಫಸಲ್ ಬಿಮಾ ಯೋಜನೆ, ಬೆಳೆ ಹಾನಿ ಬಗ್ಗೆ ಚರ್ಚೆ | ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್  ಭಾಗಿ

Share

ಕೇಂದ್ರ ಕೃಷಿ ಕಲ್ಯಾಣ ಖಾತೆ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ದೆಹಲಿಯಲ್ಲಿ ಇಂದು ರೈತರು ಹಾಗೂ ರೈತ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿದರು.…..ಮುಂದೆ ಓದಿ….

Advertisement
Advertisement

ಈ ವೇಳೆ ಶಿವರಾಜ್ ಸಿಂಗ್ ಚೌವ್ಹಾಣ್, ಕೃಷಿಕರು ದೇಶದ ಬೆನ್ನೆಲುಬು ಹಾಗೂ ಭಾರತದ ಆತ್ಮವಾಗಿದ್ದಾರೆ.ಕೃಷಿ ಭಾರತದ ಆರ್ಥಿಕತೆಯ ಬೆನ್ನೆಲುಬು. ರೈತರು ಅದರ ಆತ್ಮ ಮತ್ತು ರೈತರ ಸೇವೆ ನಮಗೆ ದೇವರನ್ನು ಪೂಜಿಸಿದಂತೆ ಎಂದರು. ಸಭೆಯಲ್ಲಿ ಹಲವು ವಿಷಯಗಳನ್ನು ರೈತರು ಪ್ರಸ್ತಾಪಿಸಿದ್ದಾರೆ. ರೈತರಿಂದ ಅನೇಕ ಸಲಹೆಗಳನ್ನು ಸ್ವೀಕರಿಸಿದ್ದೇವೆ, ಈ ಸಲಹೆಗಳನ್ನು ಕೆಲಸ ಮಾಡುವ ಮೂಲಕ ಪರಿಹರಿಸಲು ನಾವು ನಮ್ಮ  ಪ್ರಯತ್ನ ಮಾಡುತ್ತೇವೆ ಎಂದರು. ಬೆಳೆ ವಿಮೆ, ಫಸಲ್ ಬಿಮಾ ಯೋಜನೆ, ಬೆಳೆ ಹಾನಿ ಸೇರಿದಂತೆ ರೈತ ಪರ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ಸಂವಾದದಲ್ಲಿ ಕೃಷಿ ಸಚಿವಾಲಯ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ಅಧಿಕಾರಿಗಳು  ಉಪಸ್ಥಿತರಿದ್ದರು.…..ಮುಂದೆ ಓದಿ….

Advertisement

ಸುಮಾರು 50 ರೈತ ಮುಖಂಡರನ್ನು ಭೇಟಿ ಮಾಡಿದ್ದೇನೆ, ನಾವು ಅವರಿಂದ ಅನೇಕ ಸಲಹೆಗಳನ್ನು ಸ್ವೀಕರಿಸಿದ್ದೇವೆ, ಅವುಗಳಲ್ಲಿ ಕೆಲವು ಬೆಳೆಗಳ ಬೆಲೆಗೆ ಸಂಬಂಧಿಸಿವೆ ಮತ್ತು ಕೆಲವು ಫಸಲ್ ಭೀಮಾ ಯೋಜನೆಯ ಬಗ್ಗೆ ಕೆಲವು ಸಲಹೆಗಳು ಇವೆ. ಕಾಡು ಪ್ರಾಣಿಗಳ ಸಮಸ್ಯೆ ಮತ್ತು ಅವುಗಳಿಂದ ಉಂಟಾಗುವ ನಷ್ಟಗಳ ಬಗ್ಗೆಯೂ ಸಲಹೆ ಇವೆ. ಹೊಸ ಬೆಳೆ ಬಂದಾಗ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆಯೂ ಹಲವು ಸಲಹೆಗಳು ಬಂದಿವೆ ಎಂದರು.ಅಧಿಕಾರಿಗಳೊಂದಿಗೆ ಕುಳಿತು ಎಲ್ಲಾ ಸಲಹೆಗಳನ್ನು ಗಂಭೀರವಾಗಿ ಮಾತುಕತೆ ನಡೆಸಿ  ಸಾಧ್ಯವಿರುವ ಎಲ್ಲವನ್ನೂ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.…..ಮುಂದೆ ಓದಿ….

Advertisement

ತಾಳೆ ಎಣ್ಣೆಯ ಮೇಲಿನ ಆಮದು ಸುಂಕವನ್ನು 27.5% ಕ್ಕೆ ಹೆಚ್ಚಿಸಲಾಗಿದೆ, ಬಾಸ್ಮತಿಯಿಂದ ಕನಿಷ್ಠ ರಫ್ತು ಬೆಲೆಯನ್ನು ತೆಗೆದುಹಾಕಲಾಗಿದೆ, ಈರುಳ್ಳಿ ಮೇಲಿನ ರಫ್ತು ಸುಂಕವನ್ನು 40% ರಿಂದ 20% ಕ್ಕೆ ಇಳಿಸಲಾಗಿದೆ. ಇಂತಹ ಹಲವು ನಿರ್ಧಾರಗಳು ರೈತರ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ಉಲ್ಲೇಖಿಸಿದರು.

ರೈತರು ತ್ಯಾಜ್ಯಗಳನ್ನು ಸುಡುವ ಪ್ರವೃತಿ ಬಿಡಬೇಕು, ತ್ಯಾಜ್ಯವು ಕೃಷಿ ಬೆಳೆಯ  ಸಂಪತ್ತಾಗುತ್ತದೆ  ಅದನ್ನು ಸದುಪಯೋಗ ಪಡಿಸಿಕೊಂಡು ಜಾಗೃತಿ ಮೂಡಿಸುವ ಮೂಲಕ ರೈತರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇವೆ ಎಂದು ಸಚಿವರು ರೈತರ ಸಂವಾದಲ್ಲಿ ಹೇಳಿದರು.…..ಮುಂದೆ ಓದಿ….

Advertisement

(ಡಿಡಿ)

Advertisement

Union Minister for Agriculture, Farmers’ Welfare and Rural Development Shri Shivraj Singh Chouhan started a series of dialogues with farmers and farmers’ organizations in Delhi today. Chouhan stated, as I have said before, agriculture is the backbone of India’s economy and farmers are its soul and serving farmers is like worshiping God for us.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ | ಕೆ.ಜಿ.ಗೆ 35 ರೂಪಾಯಿಯಂತೆ ಈರುಳ್ಳಿ ಮಾರಾಟ

ಬೆಂಗಳೂರಿನಲ್ಲಿ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟಕ್ಕೆ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ-NCCF…

47 mins ago

ಎಐ ಸುರಕ್ಷತಾ ಪ್ರಮಾಣೀಕರಣ ಕಾರ್ಯಕ್ರಮ

ಕೃತಕ ಬುದ್ದಿಮತ್ತೆಯಲ್ಲಿ ANAB ಸಂಸ್ಥೆಯಿಂದ ಮಾನ್ಯತೆ ಪಡೆದ ವಿಶ್ವದ ಪ್ರಥಮ ಎಐ ಸುರಕ್ಷತಾ…

1 hour ago

ರಾಜ್ಯದ ಪ್ರಪಥಮ ನೈಸರ್ಗಿಕ ಅನಿಲ ಆಧಾರಿತ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರ ಲೋಕಾರ್ಪಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಲಹಂಕದಲ್ಲಿರುವ  ರಾಜ್ಯದ ಪ್ರಪಥಮ ನೈಸರ್ಗಿಕ ಅನಿಲ ಆಧಾರಿತ 370…

1 hour ago

ಉನ್ನತಿ ಗ್ರಾಮ ಅಭಿಯಾನ ಯೋಜನೆ | ಗದಗ-ದಾವಣಗೆರೆ ಜಿಲ್ಲೆಯ ಗ್ರಾಮಗಳು ಆಯ್ಕೆ |

ಉನ್ನತ ಗ್ರಾಮ ಅಭಿಯಾನದಡಿ ಆಯ್ಕೆಯಾದ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ…

1 hour ago

ಅ.2 : ಮಂಗಳೂರಿನಲ್ಲಿ ರಾಷ್ಟ್ರೀಯ ಓಪನ್ ರಾಪಿಡ್ ರೇಟೆಡ್ ಚೆಸ್ ಪಂದ್ಯಾವಳಿ |

ರಾಷ್ಟ್ರೀಯ ಓಪನ್-ರಾಪಿಡ್ ರೇಟೆಡ್ ಚೆಸ್ ಪಂದ್ಯಾವಳಿ ಅಕ್ಟೋಬರ್  2 ಮತ್ತು 3ರಂದು ಮಂಗಳೂರು…

6 hours ago