MIRROR FOCUS

ಮಳೆಯಾದರೂ ಕಡಿಮೆಯಾಗದ ತಾಪಮಾನ…! | ಭಾರತದಲ್ಲಿ ದಾಖಲೆ ಬರೆದ ಹೀಟ್‌ವೇವ್…‌ | ಹದಗೆಡುತ್ತಿರುವ ಹವಾಮಾನ ಬದಲಾವಣೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕಳೆದ 15 ದಿನಗಳಿಂದ ಕರ್ನಾಟಕದ ವಿವಿದೆಡೆ ಮಳೆಯಾಗುತ್ತಿದೆ. ಹೀಗಾದರೂ ವಾತಾವರಣದ ತಾಪಮಾನ ಕಡಿಮೆಯಾಗಿಲ್ಲ. ಮಳೆ ಕಡಿಮೆಯಾಗಿ ಸಣ್ಣ ಬಿಸಿಲು ಬಂದರೆ ಒಮ್ಮೆಲೇ ತಾಪಮಾನ ಏರಿಕೆಯಾಗುತ್ತಿದೆ. ಮಳೆ ಬಂದಾಗ 26-27 ಡಿಗ್ರಿಗೆ ಇಳಿಯುವ ವಾತಾವರಣದ ತಾಪಮಾನ , ಬಿಸಿಲು ಬಂದ ತಕ್ಷಣವೇ 34-35 ಡಿಗ್ರಿಗೆ ಏರಿಕೆಯಾಗುತ್ತಿದೆ. ಹೀಗಾಗಿ ಬಹುತೇಕ ಕೃಷಿ ಫಸಲಿಗೆ ಸಂಕಷ್ಟವಾಗಿದೆ.  ಭಾರತದಲ್ಲಿ ಈ ಬಾರಿ ಹೀಟ್‌ ವೇವ್‌ ದಾಖಲೆ ಬರೆದಿದೆ.  ಈ ಬಾರಿ ಸಾಮಾನ್ಯ ಬೇಸಗೆಗಿಂತ 5-9 ಡಿಗ್ರಿ ಅಧಿಕ ತಾಪಮಾನ ಕಂಡಿದೆ. ದೆಹಲಿ ಅಧಿಕ ತಾಪಮಾನದ ಕಾರಣದಿಂದ ನಲುಗಿ ಹೋಗಿದೆ.

Advertisement

ದೇಶದಲ್ಲಿ ಈ ಬಾರಿ ಹಲವು ಭಾಗಗಳು 45 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿನ ತಾಪ ಕಂಡುಬಂದಿದೆ. ದೆಹಲಿಯಲ್ಲಿ 50 ಡಿಗ್ರಿಗಿಂತಲೂ ಅಧಿಕ ತಾಪಮಾನ ಕಂಡುಬಂದಿತ್ತು. ದೇಶದೆಲ್ಲೆಡೆಯೂ ನೀರಿಗಾಗಿ ಹಾಹಾಕಾರ ಈ ಬಾರಿ ಕಂಡುಬಂದಿತು. ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವು ವರದಿಯಾಗಿದೆ, ಆದರೆ ಇದನ್ನು ಇನ್ನೂ ಮೌಲ್ಯಮಾಪನ ಮಾಡಲಾಗುತ್ತಿದೆ ಹಾಗೂ ಮರುಪರಿಶೀಲಿಸಲಾಗುತ್ತಿದೆ. 2024 ರ ಮೇ 27 ರಂದು ತಾಪಮಾನವು 49.9 ಡಿಗ್ರಿ ಸೆಲ್ಸಿಯಸ್ ತಲುಪುವುದರೊಂದಿಗೆ 2002 ರಿಂದ ದೆಹಲಿಯ ನಗರದ 49.2 ಡಿಗ್ರಿ ಸೆಲ್ಸಿಯಸ್ ದಾಖಲೆಯನ್ನು ಮುರಿದಿದೆ.

ಗ್ರಾಮೀಣ ಭಾಗದಲ್ಲೂ ಈ ಪರಿಣಾಮ ಕಡಿಮೆ ಇರಲಿಲ್ಲ. ಈ ವರ್ಷ ಅಧಿಕ ಪ್ರಮಾಣದ ತಾಪಮಾನ ಕಂಡುಬಂದಿತ್ತು. ಪರಿಣಾಮವಾಗಿ ನೀರಿನ ಕೊರತೆ ಎಲ್ಲೆಡೆಯೂ ಇತ್ತು. ಈ ಕಾರಣದಿಂದ ಕೃಷಿಗೆ ಈ ಬಾರಿ ದೇಶದಲ್ಲಿ ಅಧಿಕ ಪ್ರಮಾಣದ ಹೊಡೆತ ಬಿದ್ದಿದೆ. ಹೀಗಾಗಿ ಕೃಷಿ ಇಳುವರಿಯ ಮೇಲೆ ದೇಶದಲ್ಲಿ ಗಂಭೀರವಾದ ಹೊಡೆತ ಕಂಡುಬಂದಿದೆ.

ಹವಾಮಾನ ಬದಲಾವಣೆಯು ಮಾನವ ಹಸ್ತಕ್ಷೇಪದಿಂದ ಉಲ್ಬಣಗೊಳ್ಳುತ್ತಿದೆ. ಹೀಟ್‌ ವೇವ್‌ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪ್ರಪಂಚದ ಹಲವು ಕಡೆಗಳಲ್ಲಿ ಹವಾಮಾನ ಸಂಕಷ್ಟ ತರಲಿದೆ ಹಾಗೂ  ಹೇಗೆ ಹವಾಮಾನ ಬದಲಾಗುತ್ತಿವೆ ಎಂಬುದನ್ನು ಅಧ್ಯಯನ ಮಾಡುವ ವಿಜ್ಞಾನಿಗಳು ಹೇಳಿದ್ದಾರೆ.

ಲಂಡನ್‌ನ ಇಂಪೀರಿಯಲ್ ಕಾಲೇಜ್ ಮತ್ತು ವರ್ಲ್ಡ್ ವೆದರ್ ಅಟ್ರಿಬ್ಯೂಷನ್‌ನ ನಿರ್ದೇಶಕ ಡಾ ಫ್ರೆಡ್ರಿಕ್ ಒಟ್ಟೊ ಅವರ ಪ್ರಕಾರ, ಈ ಹವಾಮಾನ ಬದಲಾವಣೆಯು ನೈಸರ್ಗಿಕ ವಿಕೋಲವಲ್ಲ, ಮುಖ್ಯವಾಗಿ ಕಲ್ಲಿದ್ದಲು, ತೈಲ ಮತ್ತು ಅನಿಲವನ್ನು ಸುಡುವುದರಿಂದ ಮತ್ತು ಅರಣ್ಯನಾಶದಿಂದ ಉಂಟಾಗುವ ಹವಾಮಾನ ಬದಲಾವಣೆಯಾಗಿದೆ. ಭಾರತವು ಅತ್ಯಂತ ಗಂಭೀರವಾಗಿ ಈ ಪರಿಸ್ಥಿತಿ ಎದುರಿಸುತ್ತಿದೆ. ಈ ಸಮಸ್ಯೆಯನ್ನು ನಿಯಂತ್ರಣ ಮಾಡದೇ ಇದ್ದರೆ, ಇನ್ನಷ್ಟು ಭಯಾನಕ ಹೀಟ್‌ವೇವ್ ಹೆಚ್ಚು ಹೆಚ್ಚು ಸಂಭವಿಸುತ್ತದೆ. ಶಾಖವು ಉಲ್ಬಣಗೊಳ್ಳುತ್ತದೆ ಮತ್ತು ಸಾವಿನ ಸಂಖ್ಯೆಯು ವೇಗವಾಗಿ ಏರುತ್ತಲೇ ಇರುತ್ತದೆ ಎಂದು ಎಚ್ಚರಿಸಿದ್ದಾರೆ.

ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಾಯುಮಂಡಲದ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ  ಡಾ ಕೃಷ್ಣ ಅಚ್ಯುತ ರಾವ್ ಅವರು, ಏರುತ್ತಿರುವ ಜಾಗತಿಕ ಸರಾಸರಿ ತಾಪಮಾನವನ್ನು ನಿಯಂತ್ರಿಸಲು ಹೊಂದಾಣಿಕೆಯ ಕ್ರಮಗಳನ್ನು ತೆಗೆದುಕೊಳ್ಳುವ ತುರ್ತು ಅಗತ್ಯವಿದೆ, ಇಲ್ಲದಿದ್ದರೆ ಮುಂದಿನ ಸ್ಥಿತಿ ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿದ್ದಾರೆ.

 

The weather in Karnataka has been quite unpredictable lately, with continuous rain for the past 15 days. Despite the rainfall, the temperature has remained relatively stable. However, once the sun comes out after the rain, the temperature quickly rises. This pattern of fluctuating weather is not uncommon in this region, where the climate can change rapidly. It is important to stay prepared for sudden shifts in temperature and weather conditions when living in Karnataka.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?

ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…

17 hours ago

ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

17 hours ago

ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ

ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…

18 hours ago

ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ

ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…

1 day ago

ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ

ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು  ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…

2 days ago

ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ – ಅರಣ್ಯ ಸಚಿವ ಈಶ್ವರ ಖಂಡ್ರೆ

ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…

2 days ago