“ ಉಪವಾಸ” ಎನ್ನುವ ವ್ರತ

October 19, 2020
1:21 PM

ನಾಡಿನಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ. ಹಬ್ಬದ ಪ್ರಯುಕ್ತ ನಾನಾ ಬಗೆಯ ಭಕ್ಷ್ಯಗಳ ಭೂರಿ ಭೋಜನ ಸವಿಯುವವರು ಒಂದೆಡೆಯಾದರೆ, ಕಟ್ಟುನಿಟ್ಟಿನ “ಉಪವಾಸ” ವ್ರತ ಕೈಗೊಳ್ಳುವವರೂ ಅನೇಕರು. ಅದರಲ್ಲೂ ನವರಾತ್ರಿ ಹಬ್ಬದ ಒಂಬತ್ತು ದಿನ ಉಪವಾಸ ಮಾಡುವುದರಿಂದ ದುರ್ಗಾ ಮಾತೆಯ ಅನುಗ್ರಹ ಲಭಿಸುವುದು ಎನ್ನುವ ನಂಬಿಕೆ ಇದೆ.

Advertisement
Advertisement

“ಉಪ” ಎಂದರೆ ಹತ್ತಿರ, “ವಾಸ” ಎಂದರೆ ವಾಸಿಸು. ಅರ್ಥಾಥ್‍ ದೇವರಿಗೆ ಸನಿಹವಾಗುವುದು. ಶುದ್ಧ ಮನಸ್ಸಿನಿಂದ ಉಪವಾಸ ವ್ರತ ಕೈಗೊಳ್ಳುವುದರಿಂದ ಮನಸ್ಸು, ದೇಹ, ಆತ್ಮ ಪರಿಶುದ್ಧವಾಗುತ್ತದೆ ಎನ್ನುವುದು ನಮ್ಮ ಪೂರ್ವಿಕರ ನಂಬಿಕೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಉಪವಾಸಕ್ಕೆ ಮಹತ್ತರವಾದ ಸ್ಥಾನಮಾನವಿದೆ.

ಇದು “ನವರಾತ್ರಿ”ಗೆ ಮಾತ್ರ ಸೀಮಿತವಾಗದೆ ಸುಬ್ರಹ್ಮಣ್ಯ ಷಷ್ಠಿ, ಕಿರುಷಷ್ಠಿ, ಏಕಾದಶಿ, ವಾರದ ಒಂದು ದಿನ ಹೀಗೆ ನಾನಾ ದಿನಗಳಂದು ವ್ರತ ಪಾಲಿಸುವುದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಭೂರಿ ಭೋಜನಗಳು ಕಣ್ಣ ಮುಂದೆ ಇದ್ದರೂ ತಿನ್ನದೆ ಇರುವುದರಿಂದ ವ್ಯಕ್ತಿ ತನ್ನ ಆಸೆಗಳ ಮೇಲೆ ಹಿಡಿತ ಸಾಧಿಸುವಲ್ಲಿ ಸಫಲನಾಗುತ್ತಾನೆ.

ವಿವಿಧ ಪ್ರಕಾರದ ಉಪವಾಸಗಳು:

* ವಾರದ ಒಂದು ದಿನ ತಮ್ಮತಮ್ಮ ಇಷ್ಟ ದೇವರಿಗಾಗಿ ಮಾಡುವ ಉಪವಾಸ. ಮಂಗಳವಾರ ಹನುಮಂತನಿಗಾಗಿ, ಶನಿವಾರ ಉಪವಾಸ ಮಾಡುವುದು ಶನಿ ದೇವರ ಅನುಗ್ರಹ ಪಡೆಯಲು ಎನ್ನುವ ನಂಬಿಕೆ ಇದೆ.
* ನವರಾತ್ರಿ, ಶಿವರಾತ್ರಿ, ಷಷ್ಠಿ, ಹಬ್ಬಹರಿದಿನಗಳಂತಹ ವಿಶೇಷ ದಿನಗಳಂದು ಮಾಡುವ ಉಪವಾಸ.
* ಧಾರ್ಮಿಕ ಹಾಗು ದೈಹಿಕ ದೃಷ್ಟಿಯಿಂದ ಮಾಡುವ ಉಪವಾಸ. ನಿಗದಿತ ದಿನದಂದು ಉಪ್ಪು, ಸಿಹಿ, ಖಾರ ಇಲ್ಲದ ಆಹಾರ ಸೇವನೆ ಮಾಡುವುದು. ಇದು ಬಿಪಿ ಹಾಗು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತದೆ.
* ಕೇವಲ ಫಲಾಹಾರಇಲ್ಲವೇ ದ್ರವಾಹಾರ ಸೇವನೆ ಮಾಡುವುದೂ ಕೂಡಾ ಉಪವಾಸದ ಒಂದು ವಿಧ.

Advertisement

ಪ್ರಯೋಜನಗಳು:

*ಉಪವಾಸ ಇರುವುದರಿಂದ ದೇಹದ ಪಚನಕಾರಿ ಅಂಗಗಳಿಗೆ ವಿಶ್ರಾಂತಿ ಸಿಗುತ್ತದೆ.
*ಮನಸ್ಸು ಹಾಗು ಹೃದಯವನ್ನು ಶುದ್ಧ ಮಾಡುತ್ತದೆ.
*ಉಪವಾಸವಿರುವುದರಿಂದ ದೇಹದಲ್ಲಿ ಸೇರಿಕೊಂಡಿರುವ ವಿಷಯುಕ್ತ ವಸ್ತುಗಳನ್ನು ನಾಶಮಾಡುತ್ತದೆ.
*ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿಡುತ್ತದೆ.
*ಮನುಷ್ಯನನ್ನು ಮಾನಸಿಕ ಹಾಗು ದೈಹಿಕವಾಗಿ ಬಲಿಷ್ಟಗೊಳಿಸುತ್ತದೆ.

ನೆಂಟರಿಷ್ಟರು, ಗೆಳೆಯರು, ನೆರೆಹೊರೆಯವರು ಉಪವಾಸ ವ್ರತ ಕೈಗೊಳ್ಳುತ್ತಾರೆಂದು ಯಾರೂ ಉಪವಾಸ ಮಾಡಬಾರದು. ಎಲ್ಲರೂ ಅವರವರ ದೇಹ ಸ್ಥಿತಿಗೆ ಅನುಗುಣವಾಗಿ ವ್ರತ ಪಾಲನೆ ಮಾಡಿದರೆ ಒಳ್ಳೆಯದು. 24ಗಂಟೆ ಉಪವಾಸ ಇರಲು ಸಾಧ್ಯವಿಲ್ಲದಿದ್ದರೆ 10ರಿಂದ 12 ಗಂಟೆಗಳ ಕಾಲವಿದ್ದು ನಂತರ ಮಿತವಾಗಿ ಹಣ್ಣು ಹಂಪಲು ಸೇವಿಸಬೇಕು. ಇದರಿಂದ ತಲೆಸುತ್ತುವಿಕೆ, ನಿಶ್ಯಕ್ತಿಯಂತಹ ಸಮಸ್ಯೆ ಬಾಧಿಸದು. ಜೊತೆಗೆ ಉಪವಾಸ ಬಿಡುವಾಗಲೂ ಅಷ್ಟೇ ಹಸಿವಾಗಿದೆ ಎಂದು ಅತಿಯಾಗಿ ತಿನ್ನದೇ ಮಿತ ಆಹಾರ ಸೇವಿಸಬೇಕು. ಇಲ್ಲದಿದ್ದರೆ ಅಜೀರ್ಣವಾಗುವ ಸಾಧ್ಯತೆ ಇದೆ.

-ವಂದನಾರವಿ ಕೆ.ವೈ.ವೇಣೂರು.

 

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಅಡಿಕೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿ | ವರವೋ ಶಾಪವೋ?
May 24, 2025
9:13 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿ
May 24, 2025
8:00 AM
by: ದಿವ್ಯ ಮಹೇಶ್
ಛದ್ಮ ವೇಷದಲ್ಲಿ ನಮ್ಮ ಪ್ರಜಾಪ್ರಭುತ್ವ
May 22, 2025
6:53 AM
by: ಡಾ.ಚಂದ್ರಶೇಖರ ದಾಮ್ಲೆ
1954 ರಿಂದ 2025 | ಅಡಿಕೆ ಮೇಲೆ ಆಪಾದನೆಗಳು ಬಂದ ದಾರಿ ಯಾವುದೆಲ್ಲಾ…?
May 20, 2025
7:32 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group