Advertisement
MIRROR FOCUS

ಉತ್ತರಾಖಂಡದಲ್ಲಿ ಮತ್ತೆ ಮತ್ತೆ ಪ್ರವಾಹ | ಮಲೆನಾಡಿಗೂ ಮುನ್ನಚ್ಚರಿಕೆ ಯಾಕಲ್ಲ… ?

Share

ಉತ್ತರಾಖಂಡದಲ್ಲಿ  ಪ್ರತೀ ವರ್ಷ ಎಂಬಂತೆ ಪ್ರವಾಹ ಕಂಡುಬರುತ್ತಿದೆ. ಸಾಕಷ್ಟು ಹಾನಿಗಳು ಸಂಭವಿಸುತ್ತಿದೆ. ಗುಡ್ಡಗಳ ಕುಸಿತ,  ನೀರು, ಸಂಕಷ್ಟಗಳು ಕಾಣುತ್ತಿದೆ. ಮೇಲ್ನೋಟಕ್ಕೆ ಹವಾಮಾನ ಬದಲಾವಣೆ, ಪರಿಸರದ ಅಸಮತೋಲನ ಇತ್ಯಾದಿಗಳನ್ನು ಹೇಳಿದರೂ ಮೂಲ ಕಾರಣ ಏನು ಏಂಬ ಪ್ರಶ್ನೆ ಕಾಡುತ್ತದೆ. ಇದೇ ಮಾದರಿಯ ಸಣ್ಣ ಬದಲಾವಣೆ ಮಲೆನಾಡು ಭಾಗದಲ್ಲೂ ಆಗುತ್ತಿದೆ ಗಮನಿಸಿದ್ದೀರಾ ?

ಉತ್ತರಾಖಂಡದಲ್ಲಿ ಈ ಬಾರಿಯೂ ಭಾರೀ ಮಳೆ ಹಾಗೂ ಹಾನಿಗಳಾಗಿವೆ. ಇದಕ್ಕೆ ಕಾರಣ ಹವಾಮಾನ ಬದಲಾವಣೆ ಎಂದು ತಕ್ಷಣದ ಉತ್ತರ ಲಭ್ಯವಾಗುತ್ತಿದೆ. ಭೌಗೋಳಿಕ ಬದಲಾವಣೆಯೂ ಕಾರಣ ಏಕಲ್ಲ ? ಈ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಕೆಲವು ಅಧ್ಯಯನಗಳು ಪ್ರಾಕೃತಿಕ, ಪರಿಸರದ ಬದಲಾವಣೆಗಳಿಗಿಂತಲೂ ಮಾನವ ಹಸ್ತಕ್ಷೇಪದ ಬದಲಾವಣೆಗಳೇ ಮೊದಲ ಕಾರಣ ಎಂದು ಹೇಳಿವೆ. ಈ ಬಾರಿಯೂ ಮತ್ತೆ ಪ್ರವಾಹ ವಿಪರೀತ ಉಂಟಾದಾಗ ಮತ್ತೆ ಅದೇ ಪ್ರಶ್ನೆಗಳು ಕಾಡುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದ ಭೌಗೋಳಿಕತೆಯು  ಹರಿದು ಹೋಳಾಗಲು ಕಾರಣ ಏನು ?.

ಈ ಬಾರಿ ಉತ್ತರಾಖಂಡದಲ್ಲಿನ ಮಳೆ ಗಮನಿಸಿದರೆ ಅ.19 ರವರೆಗೆ ವಾಡಿಕೆ ಮಳೆಗಿಂತ ಶೇ.60  ರಷ್ಟು ಮಳೆ ಹೆಚ್ಚು ಬಿದ್ದಿತ್ತು ಎನ್ನುವುದು ದಾಖಲೆ ಹೇಳುತ್ತದೆ. 2013 ರಲ್ಲಿ  ಕಂಡುಬಂದ ಕೇದಾರನಾಥ ದುರಂತ ಹಾಗೂ ಆ ನಂತರದ ಎಲ್ಲಾ ದುರಂತಗಳೂ ವಾಡಿಕೆ ಮಳೆಗಿಂತ ಹೆಚ್ಚುವರಿಯಾದ ಎಲ್ಲಾ ಸಮಯದಲ್ಲೂ ಅಪಾಯಗಳು ಸಂಭವಿಸಿದೆ.

ಈ ಬಾರಿ ಚಂಪಾವತ್, ನೈನಿತಾಲ್ ಮತ್ತು ಉಧಮ್ ಸಿಂಗ್ ಮೊದಲಾದ ಕಡೆಗಳಲ್ಲಿ 24 ಗಂಟೆಗಳಲ್ಲಿ 403  ಮಿಮೀ ಗಿಂತಲೂ ಹೆಚ್ಚು ಮಳೆಯಾಗಿದೆ. ಇದನ್ನು ಮೇಘಸ್ಫೋಟ ಎನ್ನುತ್ತಾರೆ. ಉಳಿದಂತೆ ಹಲವು ಕಡೆಗಳಲ್ಲಿ  300 ಮಿಮೀಗಿಂತ ಹೆಚ್ಚು ಮಳೆಯಾಗಿದೆ.  ಒಮ್ಮೆಲೇ ಇಷ್ಟು ಮಳೆ ಸುರಿಯುವ ಕಾರಣದಿಂದ ಸಡಿಲಗೊಂಡ ಮಣ್ಣಿನ ಕಾರಣದಿಂದ ಭೂಕುಸಿತ ಹಾಗೂ ಪ್ರವಾಹಗಳು ಹೆಚ್ಚು ಕಾಣುತ್ತವೆ.

ಉತ್ತರಾಖಂಡವು ಅನೇಕ  ವರ್ಷಗಳಿಂದ ದೇವಭೂಮಿಯಾಗಿದೆ. ಆಧ್ಯಾತ್ಮ ಶಕ್ತಿಯ ಕೇಂದ್ರವೂ ಹೌದು. ಈಚೆಗೆ ಪ್ರವಾಸೋದ್ಯಮ ಹೆಚ್ಚಾಗುತ್ತಿದ್ದಂತೆಯೇ ನಗರೀಕರಣವಾದವು. ನದಿ, ಹೊಳೆಗಳ ವಿಸ್ತಾರ ಕಡಿಮೆಯಾದವು, ಕೃತಕ ಬದಲಾವಣೆಗಳು ಹೆಚ್ಚಾದವು. ಈ ಹಿಂದೆ ಕೇದಾರನಾಥದಲ್ಲಿ ಪ್ರವಾಹ ಎದುರಿಸಿದ ಸಂಕಷ್ಟಗಳು ಈಗ ಅಲ್ಲಲ್ಲಿ  ಮುಂದುವರಿಯುತ್ತಿದೆ.

ಇಂತಹ ಪ್ರಾಕೃತಿಕ ದುರಂತಗಳು ಈಚೆಗೆ ಕೆಲವು ಸಮಯಗಳಿಂದ ಮಲೆನಾಡಿನಲ್ಲೂ ಸಂಭವಿಸುತ್ತಿವೆ. ಕೇರಳದಲ್ಲೂ ನಡೆಯುತ್ತಿವೆ. ಎರಡು ವರ್ಷಗಳ ಹಿಂದೆ ಮಡಿಕೇರಿಯಲ್ಲಿ ಸಂಭವಿಸಿದೆ. ಚಾರ್ಮಾಡಿ, ಶಿರಾಡಿ ಕಡೆಗಳಲ್ಲೂ ಆಗಾಗ ಸಣ್ಣ ಪುಟ್ಟ ಪ್ರಮಾಣದಲ್ಲಿ ಕಾಣುತ್ತಿದೆ. ಇದಕ್ಕೆ ಹವಾಮಾನ ಬದಲಾವಣೆ, ಪ್ರಾಕೃತಿಕ ವಿಕೋಪ ಎಂದು ಹಣೆಪಟ್ಟಿ ಕಟ್ಟಬಹುದು. ಆದರೆ ನಮ್ಮಲ್ಲೇ ಎಲ್ಲೋ ಆಗುವ ಘಟನೆಗಳೂ ಎಲ್ಲದಕ್ಕೂ ಕಾರಣವಾಗುತ್ತದೆ. ಎತ್ತಿನಹೊಳೆಯ ಕಡೆಗೆ ತೆರಳಿದರೆ ಅಪಾಯ ಪ್ರಮಾಣದ ಪ್ರಾಕೃತಿಕ ಬದಲಾವಣೆ ಕಂಡರೆ, ಶಿರಾಡಿ, ಚಾರ್ಮಾಡಿ, ಮಡಿಕೇರಿ ಕಡೆಯಲ್ಲೂ ಕಾಣುತ್ತದೆ. ಈ ಬದಲಾವಣೆಗೆ ಒಂದು ಮಿತಿ ಇಲ್ಲದೇ ಇದ್ದರೆ ಮುಂದೆ ಮಲೆನಾಡಲ್ಲೂ ಉತ್ತರಾಖಂಡ ಮಾದರಿಯ ಪ್ರಾಕೃತಿಕ, ಹವಾಮಾನ ಬದಲಾವಣೆ ಎದುರಿಸುವ ದಿನಗಳ ಬಂದೀತು.

(ವಿಡಿಯೋ ಕೃಪೆ : ನೆಟ್ವರ್ಕ್ )

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ

ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…

19 hours ago

ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ

ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್‌, ಟಿಎಸ್‌ಎಸ್‌, ತುಮ್ಕೋಸ್‌, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…

19 hours ago

ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ

ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…

21 hours ago

ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ

ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ನಾಡಿಗೆ ಪ್ರವೇಶಿಸದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ…

22 hours ago

ಭವಿಷ್ಯದ ಬಾಳೆ ಬೆಳೆ ಉಳಿಸುವ ಗುಟ್ಟು ಕಾಡು ಬಾಳೆ ಜಾತಿಯಲ್ಲಿ!

ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…

1 day ago

ಕೃಷಿ ಮಾರುಕಟ್ಟೆ ವರದಿ | ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಫಲ…!

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…

2 days ago