ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರ ಮಳೆ | ವೈಷ್ಣೋದೇವಿ ದೇಗುಲದ ತೀರ್ಥಯಾತ್ರೆ ಮುಂದೂಡಿಕೆ

September 16, 2025
6:55 AM

ಜಮ್ಮು ಮತ್ತು ಕಾಶ್ಮೀರದಲ್ಲಿ  ನಿರಂತರ ಮಳೆಯಾಗುತ್ತಿದ್ದು,  ಪ್ರಸಿದ್ಧ   ಶ್ರೀಮಾತಾ ವೈಷ್ಣೋದೇವಿ  ದೇಗುಲದ   ತೀರ್ಥಯಾತ್ರೆಯನ್ನು  ಮುಂದೂಡಲಾಗಿದೆ. ಹಲವು ದಿನಗಳಿಂದ   ಸ್ಥಗಿತಗೊಂಡಿದ್ದ  ಈ ತೀರ್ಥಯಾತ್ರೆಯನ್ನು  ಪುನರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ರಿಯಾಸಿ ಜಿಲ್ಲೆಯಲ್ಲಿ  ನಿರಂತರ ಮಳೆಯಾಗುತ್ತಿರುವುದರಿಂದ   ಈ ತೀರ್ಥಯಾತ್ರೆಯನ್ನು  ಮುಂದಿನ ಆದೇಶದ ವರೆಗೆ   ಮುಂದೂಡಲಾಗಿದೆ ಎಂದು   ಶ್ರೀ ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯು  ತನ್ನ ಅಧಿಕೃತ  ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ  ತಿಳಿಸಿದೆ. ಯಾತ್ರಾರ್ಥಿಗಳ  ಸುರಕ್ಷತೆ ಹಾಗೂ ಭದ್ರತೆಯ ಕಾರಣದಿಂದ  ಈ ನಿರ್ಧಾರಕ್ಕೆ  ಬರಲಾಗಿದೆ. ಭಾರೀ ಮಳೆಯ ಕಾರಣದಿಂದ  ದೇಗುಲಕ್ಕೆ ಹೋಗುವ ಮಾರ್ಗಗಳಲ್ಲಿ  ಬೃಹತ್‌  ಭೂಕುಸಿತ ಉಂಟಾಗಿದ್ದರಿಂದ  ಕಳೆದ ತಿಂಗಳ  26 ರಂದು   ಗುಹಾ ದೇಗುಲದ   ಪವಿತ್ರ ತೀರ್ಥಯಾತ್ರೆಯನ್ನು   ತಾತ್ಕಾಲಿಕವಾಗಿ   ಸ್ಥಗಿತಗೊಳಿಸಲಾಯಿತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?
August 22, 2026
10:25 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ
August 22, 2026
2:07 PM
by: ಸಾಯಿಶೇಖರ್ ಕರಿಕಳ
ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ
August 22, 2026
6:47 AM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ
August 21, 2026
7:49 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror