ಅನೂಚಾನ ವಿದ್ಯಾ ಪ್ರತಿಷ್ಟಾನ ಹಾಗೂ ಗುತ್ತಿಗಾರು ಹವ್ಯಕ ವಲಯ ಪರಿಷತ್ತು ಆಶ್ರಯದಲ್ಲಿ ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಗಾಯಂತ್ರಿ ಯಜ್ಞದ ಪ್ರಾರಂಭ ಹಾಗೂ ವಸಂತ ವೇದ ಶಿಬಿರ ಉದ್ಘಾಟನೆಗೊಂಡಿತು. ವೇ.ಮೂ ಕರುವಜೆ ಕೇಶವ ಜೋಯಿಸರು ವೇದ ಶಿಬಿರ ಉದ್ಘಾಟಿಸಿದರು.
ವೇದ ಶಿಬಿರ ಉದ್ಘಾಟಿಸಿದ ವೇ.ಮೂ ಕರುವಜೆ ಕೇಶವ ಜೋಯಿಸರು, ವೇದಾಧ್ಯಯನದ ಮೂಲಕ ಮಕ್ಕಳು ಅರಿವನ್ನು ಹೆಚ್ಚು ಮಾಡಿಕೊಳ್ಳಬೇಕು. ಸಂಸ್ಕಾರ ಎಂದರೆ ಜೀವನ ಪಾಠವಾಗಿದೆ. ಪ್ರತೀ ವಿದ್ಯಾರ್ಥಿಗಳೂ ಸಂಸ್ಕಾರದ ಕಡೆಗೂ ಗಮನಹರಿಸಬೇಕು ಎಂದರು.
ಅನೂಚಾನ ವಿದ್ಯಾ ಪ್ರತಿಷ್ಟಾನದ ಅಧ್ಯಕ್ಷ ಶ್ರೀಕೃಷ್ಣ ಭಟ್ ಗುಂಡಿಮಜಲು ಅಧ್ಯಕ್ಷತೆ ವಹಿಸಿದ್ದರು. ವೇದ ಶಿಬಿರದ ಮುಖ್ಯಗುರುಗಳಾದ ಮಹಾಬಲೇಶ್ವರ ಭಟ್ ಪಿ ವಿ ಉಪಸ್ಥಿತರಿದ್ದರು. ಅನೂಚಾನ ವಿದ್ಯಾ ಪ್ರತಿಷ್ಟಾನದ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಜೀರ್ಮುಕಿ ಕಾರ್ಯಕ್ರಮ ನಿರ್ವಹಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel