The Rural Mirror ವಾರದ ವಿಶೇಷ

ಕಿಂಡಿ ಅಣೆಕಟ್ಟಿನಿಂದ ಗ್ರಾಮೀಣ ಜನರಿಗೆ ಸಂಕಷ್ಟ …! | ಜಾರಿಯಾಗದ ಜಿಲ್ಲಾಧಿಕಾರಿಗಳ ಆದೇಶ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬಳಕೆಯಲ್ಲಿರದ ಕಿಂಡಿ ಆಣೆಕಟ್ಟುಗಳಲ್ಲಿ ಮಳೆಗಾಲದಲ್ಲಿ ಮರದ ತುಂಡು, ಕಸ ತುಂಬಿ ಎರಡು ಬದಿಯ ಹೊಳೆಯ ಮಧ್ಯೆ ಇರುವ ರಸ್ತೆ ಕಡಿತಕ್ಕೆ ಕಾರಣವಾಗುತ್ತಿರುವುದರಿಂದ  ತಕ್ಷಣ ತೆರವುಗೊಳಿಸುವಂತೆ ದ.ಕ. ಜಿಲ್ಲಾಧಿಕಾರಿಯವರು ಮಾಡಿದ ಆದೇಶವನ್ನು ಸ್ಥಳೀಯಾಡಳಿತ ಜಾರಿಗೊಳಿಸದೇ ಇರುವುದರಿಂದ ಅಪಾಯದ ಸ್ಥಿತಿ ಮುಂದುವರಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರಿನಲ್ಲಿ  ನಡೆಯುತ್ತಿದೆ.

Advertisement
Advertisement

ಬಡಗನ್ನೂರು ಗ್ರಾಮದ ಪಟ್ಟೆಯಿಂದ ಮುಂಡೋಳೆ, ಅಂಬಟೆಮೂಳೆ ಮೂಲಕ ಈಶ್ವರಮಂಗಲಕ್ಕೆ ಸಂಪರ್ಕಿಸುವ ಬಹುಮುಖ್ಯ ರಸ್ತೆಯ ಪಟ್ಟೆಯಿಂದ 200 ಮೀ. ದೂರದಲ್ಲಿ ದಶಕಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಈ ಕಿಂಡಿ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಕೆಲವು ಸಮಯ ಹಲಗೆ ಆಳವಡಿಸಿ ಪ್ರಯೋಜನಕಾರಿಯಾಗಿದ್ದ ಈ ಕಿಂಡಿ ಆಣೆಕಟ್ಟು ಈ ಸಮಸ್ಯೆಗೆ ಕಾರಣವಾಗುತ್ತಿದೆ.

ಏನು ಸಮಸ್ಯೆ ? : ಇಲ್ಲಿ ಯು ಮಾದರಿಯಲ್ಲಿ ಸೀರೆ ಹೊಳೆ ಹರಿಯುತ್ತದೆ. ಹೊಳೆ ಸುತ್ತು ಬಳಸಿ ಹರಿಯುತ್ತಿದ್ದು, ಮಧ್ಯೆ ಕಿರು ಸೇತುವೆಯ ಮೂಲಕ ಸಾಗುವ ರಸ್ತೆ ಇದೆ. ತಗ್ಗಿನಲ್ಲಿರುವ ಕಿಂಡಿ ಆಣೆಕಟ್ಟಿನಲ್ಲಿ ಮಳೆಗಾಲದಲ್ಲಿ ತೇಲಿ ಬರುವ ಮರದ ತುಂಡು, ಕಸ ಕಡ್ಡಿಗಳು ನಿಂತು ಸರಾಗ ನೀರು ಹರಿಯಲು ಸಮಸ್ಯೆಯಾಗುತ್ತದೆ. ಈ ಸಮಸ್ಯೆ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿದೆ. ಇದರ ಪರಿಣಾಮ ಪಕ್ಷದಲ್ಲಿರುವ ಸ್ಥಳೀಯ ನಿವಾಸಿಯೊಬ್ಬರ ಸುಮಾರು ಅರ್ಧ ಎಕ್ರೆಯಷ್ಟು ಕೃಷಿ ತೋಟ ಕೊರೆದು ಹೋಗಿದೆ. ಜತೆಗೆ ಮಳೆಗಾಲದಲ್ಲಿ ಇಕ್ಕೆಲಗಳ ತೋಡಿನ ನೀರು ಸಂಗಮಗೊಂಡು ರಸ್ತೆಯಲ್ಲಿ ಹರಿದು ರಸ್ತೆ ಕಡಿತಗೊಳ್ಳುತ್ತಾ ಹೋಗುತ್ತಿದೆ. ರಕ್ಷಣಾ ಕ್ರಮಗಳು ಪ್ರಯೋಜನಕ್ಕೆ ಬರುತ್ತಿಲ್ಲ.
ಬೆಟ್ಟಂಪಾಡಿ, ಪೆರಿಗೇರಿ, ಪಾಣಾಜೆ ಸೇರಿದಂತೆ ವಿವಿಧ ಕಡೆಗಳಿಂದ ಈಶ್ವರಮಂಗಲ ತೆರಳುವವರಿಗೆ ಇದು ಸುಲಭ ದಾರಿ. ಈ ರಸ್ತೆಯಲ್ಲಿ ಪಟ್ಟೆ ಸೇರಿದಂತೆ ನಗರಕ್ಕೆ ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ತೆರಳುತ್ತಾರೆ. ಮಳೆಗಾಲದಲ್ಲಿ ಹಲವು ಬಾರಿ ರಸ್ತೆ ಮುಳುಗಡೆಯಾಗುತ್ತಿದ್ದು, ಜನರು ಸಂಕಷ್ಟಪಡುತ್ತಿದ್ದಾರೆ. ಸಣ್ಣ ಮಕ್ಕಳ ಸಂಚಾರಕ್ಕಂತೂ ಅಪಾಯಕಾರಿಯಾಗಿದೆ.
Advertisement
ಜಿಲ್ಲಾಧಿಕಾರಿಗೆ ದೂರು: ಕಿಂಡಿ ಆಣೆಕಟ್ಟಿನ ಕಾರಣದಿಂದ ಉಂಟಾಗಿರುವ ಸಮಸ್ಯೆಯ ಕುರಿತು ಹಾಗೂ ತೆರವಿಗೆ ಕ್ರಮ ಕೈಗೊಳ್ಳುವಂತೆ ನೂರಾರು ಮಂದಿ ಸಾರ್ವಜನಿಕರ ಸಹಿಗಳುಳ್ಳ ಮನವಿಯನ್ನು ಬಡಗನ್ನೂರು ಗ್ರಾ.ಪಂ.ನ ಸುಳ್ಯಪದವಿನಲ್ಲಿ ಎ.17 ರಂದು ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ನೀಡಲಾಗಿತ್ತು. ಪರಿಸ್ಥಿತಿಯ ಅರಿವು ಪಡೆದುಕೊಂಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಅಣೆಕಟ್ಟಿನ ತೆರವಿಗೆ ಸ್ಥಳದಲ್ಲೇ ಆದೇಶ ನೀಡಿದ್ದರು. ಆದರೆ ಸಂಬಂಧಪಟ್ಟವರು ವಿಳಂಬ ಧೋರಣೆ ಅನುಸರಿಸಿದ ಪರಿಣಾಮ ಸಮಸ್ಯೆ ಬಿಗಡಾಯಿಸಿದೆ. ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗೆ ಈ ಜವಾಬ್ದಾರಿ ನೀಡಲಾಗಿದೆ. ಗ್ರಾ.ಪಂ. ಆಡಳಿತ ಹಾಗೂ ಇಲಾಖೆಯ ಮಧ್ಯೆ ಸಮನ್ವಯದಲ್ಲಿ ಕೊರತೆ ಉಂಟಾಗಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಆತ್ಮನಿರ್ಭರ ಯೋಜನೆಯಿಂದ ಸ್ವಾವಲಂಬಿ ಬದುಕು | ಸಾವಯವ ಕೃಷಿಯಲ್ಲಿ ಕಬ್ಬು ಬೆಳೆದು ಯಶಸ್ವಿ

ಆತ್ಮನಿರ್ಭರ ಯೋಜನೆಯಡಿ ಸ್ವಾವಲಂಬಿ ಬದುಕಿನ ಕನಸು ಕಂಡಿದ್ದ ಬಿ. ನಂದೀಶ್ ತಮ್ಮ ಜಮೀನಿನಲ್ಲಿ…

13 hours ago

ಹೊಸರುಚಿ | ನೆಕ್ಕರೆ ಮಾವಿನ ಕಾಯಿ ಪಲ್ಯ

ನೆಕ್ಕರೆ ಮಾವಿನ ಕಾಯಿ ಪಲ್ಯ ಮಾಡುವ ವಿಧಾನ..

16 hours ago

ಜೂನ್ ಮೂರನೇ ವಾರ ಗುರು ಆದಿತ್ಯ ರಾಜಯೋಗ, ಈ 5 ರಾಶಿಗೆ ಅದೃಷ್ಟವೋ ಅದೃಷ್ಟ.!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

17 hours ago

ಮುಂದುವರಿದ ಮಳೆಯಬ್ಬರ | 4 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ |

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.  ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ…

1 day ago

ವಿದೇಶದಿಂದ ಹಳ್ಳಿಗೆ ಬಂದು ಕೃಷಿ ಸಾಧನೆ ಮಾಡಿದ ಯುವಕ

ಕೃಷಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು ಎಂಬುದನ್ನು ರೈತ  ಯೋಗೇಶ್ ತೋರಿಸಿಕೊಟ್ಟಿದ್ದಾರೆ.…

2 days ago