ಬಳಕೆಯಲ್ಲಿರದ ಕಿಂಡಿ ಆಣೆಕಟ್ಟುಗಳಲ್ಲಿ ಮಳೆಗಾಲದಲ್ಲಿ ಮರದ ತುಂಡು, ಕಸ ತುಂಬಿ ಎರಡು ಬದಿಯ ಹೊಳೆಯ ಮಧ್ಯೆ ಇರುವ ರಸ್ತೆ ಕಡಿತಕ್ಕೆ ಕಾರಣವಾಗುತ್ತಿರುವುದರಿಂದ ತಕ್ಷಣ ತೆರವುಗೊಳಿಸುವಂತೆ ದ.ಕ. ಜಿಲ್ಲಾಧಿಕಾರಿಯವರು ಮಾಡಿದ ಆದೇಶವನ್ನು ಸ್ಥಳೀಯಾಡಳಿತ ಜಾರಿಗೊಳಿಸದೇ ಇರುವುದರಿಂದ ಅಪಾಯದ ಸ್ಥಿತಿ ಮುಂದುವರಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರಿನಲ್ಲಿ ನಡೆಯುತ್ತಿದೆ.
ಬಡಗನ್ನೂರು ಗ್ರಾಮದ ಪಟ್ಟೆಯಿಂದ ಮುಂಡೋಳೆ, ಅಂಬಟೆಮೂಳೆ ಮೂಲಕ ಈಶ್ವರಮಂಗಲಕ್ಕೆ ಸಂಪರ್ಕಿಸುವ ಬಹುಮುಖ್ಯ ರಸ್ತೆಯ ಪಟ್ಟೆಯಿಂದ 200 ಮೀ. ದೂರದಲ್ಲಿ ದಶಕಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಈ ಕಿಂಡಿ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಕೆಲವು ಸಮಯ ಹಲಗೆ ಆಳವಡಿಸಿ ಪ್ರಯೋಜನಕಾರಿಯಾಗಿದ್ದ ಈ ಕಿಂಡಿ ಆಣೆಕಟ್ಟು ಈ ಸಮಸ್ಯೆಗೆ ಕಾರಣವಾಗುತ್ತಿದೆ.
ಏನು ಸಮಸ್ಯೆ ? : ಇಲ್ಲಿ ಯು ಮಾದರಿಯಲ್ಲಿ ಸೀರೆ ಹೊಳೆ ಹರಿಯುತ್ತದೆ. ಹೊಳೆ ಸುತ್ತು ಬಳಸಿ ಹರಿಯುತ್ತಿದ್ದು, ಮಧ್ಯೆ ಕಿರು ಸೇತುವೆಯ ಮೂಲಕ ಸಾಗುವ ರಸ್ತೆ ಇದೆ. ತಗ್ಗಿನಲ್ಲಿರುವ ಕಿಂಡಿ ಆಣೆಕಟ್ಟಿನಲ್ಲಿ ಮಳೆಗಾಲದಲ್ಲಿ ತೇಲಿ ಬರುವ ಮರದ ತುಂಡು, ಕಸ ಕಡ್ಡಿಗಳು ನಿಂತು ಸರಾಗ ನೀರು ಹರಿಯಲು ಸಮಸ್ಯೆಯಾಗುತ್ತದೆ. ಈ ಸಮಸ್ಯೆ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿದೆ. ಇದರ ಪರಿಣಾಮ ಪಕ್ಷದಲ್ಲಿರುವ ಸ್ಥಳೀಯ ನಿವಾಸಿಯೊಬ್ಬರ ಸುಮಾರು ಅರ್ಧ ಎಕ್ರೆಯಷ್ಟು ಕೃಷಿ ತೋಟ ಕೊರೆದು ಹೋಗಿದೆ. ಜತೆಗೆ ಮಳೆಗಾಲದಲ್ಲಿ ಇಕ್ಕೆಲಗಳ ತೋಡಿನ ನೀರು ಸಂಗಮಗೊಂಡು ರಸ್ತೆಯಲ್ಲಿ ಹರಿದು ರಸ್ತೆ ಕಡಿತಗೊಳ್ಳುತ್ತಾ ಹೋಗುತ್ತಿದೆ. ರಕ್ಷಣಾ ಕ್ರಮಗಳು ಪ್ರಯೋಜನಕ್ಕೆ ಬರುತ್ತಿಲ್ಲ. ಬೆಟ್ಟಂಪಾಡಿ, ಪೆರಿಗೇರಿ, ಪಾಣಾಜೆ ಸೇರಿದಂತೆ ವಿವಿಧ ಕಡೆಗಳಿಂದ ಈಶ್ವರಮಂಗಲ ತೆರಳುವವರಿಗೆ ಇದು ಸುಲಭ ದಾರಿ. ಈ ರಸ್ತೆಯಲ್ಲಿ ಪಟ್ಟೆ ಸೇರಿದಂತೆ ನಗರಕ್ಕೆ ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ತೆರಳುತ್ತಾರೆ. ಮಳೆಗಾಲದಲ್ಲಿ ಹಲವು ಬಾರಿ ರಸ್ತೆ ಮುಳುಗಡೆಯಾಗುತ್ತಿದ್ದು, ಜನರು ಸಂಕಷ್ಟಪಡುತ್ತಿದ್ದಾರೆ. ಸಣ್ಣ ಮಕ್ಕಳ ಸಂಚಾರಕ್ಕಂತೂ ಅಪಾಯಕಾರಿಯಾಗಿದೆ. ಜಿಲ್ಲಾಧಿಕಾರಿಗೆ ದೂರು: ಕಿಂಡಿ ಆಣೆಕಟ್ಟಿನ ಕಾರಣದಿಂದ ಉಂಟಾಗಿರುವ ಸಮಸ್ಯೆಯ ಕುರಿತು ಹಾಗೂ ತೆರವಿಗೆ ಕ್ರಮ ಕೈಗೊಳ್ಳುವಂತೆ ನೂರಾರು ಮಂದಿ ಸಾರ್ವಜನಿಕರ ಸಹಿಗಳುಳ್ಳ ಮನವಿಯನ್ನು ಬಡಗನ್ನೂರು ಗ್ರಾ.ಪಂ.ನ ಸುಳ್ಯಪದವಿನಲ್ಲಿ ಎ.17 ರಂದು ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ನೀಡಲಾಗಿತ್ತು. ಪರಿಸ್ಥಿತಿಯ ಅರಿವು ಪಡೆದುಕೊಂಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಅಣೆಕಟ್ಟಿನ ತೆರವಿಗೆ ಸ್ಥಳದಲ್ಲೇ ಆದೇಶ ನೀಡಿದ್ದರು. ಆದರೆ ಸಂಬಂಧಪಟ್ಟವರು ವಿಳಂಬ ಧೋರಣೆ ಅನುಸರಿಸಿದ ಪರಿಣಾಮ ಸಮಸ್ಯೆ ಬಿಗಡಾಯಿಸಿದೆ. ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗೆ ಈ ಜವಾಬ್ದಾರಿ ನೀಡಲಾಗಿದೆ. ಗ್ರಾ.ಪಂ. ಆಡಳಿತ ಹಾಗೂ ಇಲಾಖೆಯ ಮಧ್ಯೆ ಸಮನ್ವಯದಲ್ಲಿ ಕೊರತೆ ಉಂಟಾಗಿದೆ.ಕರ್ನಾಟಕದಲ್ಲಿ ಫೆಬ್ರುವರಿ 27ರವರೆಗೆ ಬಿಸಿಲಿನ ಜೊತೆಗೆ ತುಂತುರು ಮತ್ತು ಗುಡುಗು ಮಳೆಯ ಮುನ್ಸೂಚನೆ.…
ಮಲೆನಾಡಿನಲ್ಲಿ ಅಡಿಕೆ ರೈತರು ಮಿಶ್ರ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಹವಾಮಾನ ಬದಲಾವಣೆ, ಬೆಲೆ…
ನಂದಿನಿ ಹಾಲು ಮತ್ತು ಉತ್ಪನ್ನಗಳು ಸೇವನೆಗೆ ಸಂಪೂರ್ಣ ಸುರಕ್ಷಿತವೆಂದು ಕೆಎಂಎಫ್ ಸ್ಪಷ್ಟನೆ ನೀಡಿದೆ.…
ರೈತರಿಗೆ ಗನ್ ಪರವಾನಗಿ ಹಾಗೂ ನವೀಕರಣ ಪ್ರಕ್ರಿಯೆಯನ್ನು ಸುಲಭಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ…
ಮಂಗಳೂರಿನ ಅಡಿಕೆ ಮಾರುಕಟ್ಟೆಯು ಪ್ರಸ್ತುತ ಕೇವಲ ಬೆಲೆ ಏರಿಳಿತದ ಕೇಂದ್ರವಾಗಿ ಉಳಿದಿಲ್ಲ; ಬದಲಾಗಿ…
ಪುತ್ತೂರಿನ ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮಾರ್ಚ್ 11ರಂದು ಗೋಡಂಬಿ ಹಣ್ಣಿನ ಮೌಲ್ಯವರ್ಧನೆ ಕುರಿತು…