ಇಂದು ವಿಶ್ವ ಕವಿತಾ ದಿನ | ಕವಿತೆ ಎನ್ನುವ ಭಾವನೆಗಳ ಗೊಂಚಲು

March 21, 2021
10:17 AM

ವಿಶ್ವ ಕವಿತಾ ದಿನದ ಶುಭಾಶಯಗಳು…

Advertisement

ಕವಿತೆ ಹುಟ್ಟುವುದು ಮನಸಿನಿಂದ. ಅಲ್ಲಿನ  ಭಾವನೆಗಳು ಕವಿತೆಯಾಗಿ  ರೂಪು ತಳೆಯುತ್ತವೆ. ಕವಿ ಹೃದಯಕ್ಕೆ ಎಲ್ಲವೂ ವಿಷಯವೇ….
ಓಡುವ ಮೋಡ, ಸುರಿಯುವ ಮಳೆ, ಮೂಡುವ ಸೂರ್ಯ , ಬಾನಂಚಿನಲ್ಲಿ ಮರೆಯಾಗುವ ಭಾಸ್ಕರ. ಅರಳು ನೈದಿಲೆ, ಮುಸುಕಿದ ಮಂಜು , ಕೊನೆ ಮೊದಲಿಲ್ಲದ ಆಗಸ.  ಹೀಗೆ  ಕವಿಗೆ  .ಬರೆಯುವ ಮನಸಿದ್ದಾಗ ಎಲ್ಲವೂ ವಸ್ತುಗಳೇ.

ಕವಿತೆ ಬರೆಯುವುದು ಗದ್ಯ ಬರೆದಂತಲ್ಲ.  ಹಾಡಲು ಅನುಕೂಲವಾಗುವಂತೆ ಬರೆದಾಗ ಅದಕ್ಕೊಂದು ವಿಶೇಷ ಆಕರ್ಷಣೆ. ಛಂದೋಬದ್ಧವಾಗಿ ಬರೆದಾಗ ಒಂದು ತೂಕ ಜಾಸ್ತಿಯೇ. ಕೆಲವೊಮ್ಮೆ ನಾಲ್ಕು ಗೆರೆ ಪ್ರಾಸಬದ್ಧವಾಗಿ ಬರೆದರೂ ಪದ್ಯವಾಗಿ ಬಿಡುತ್ತದೆ..   ಭಾವನೆಗಳ ಅಭಿವ್ಯಕ್ತಿಯೇ ಮುಖ್ಯ.

ಸಣ್ಣ ದೊಡ್ಡ ಕವಿಗಳನ್ನು ಪ್ರೋತ್ಸಾಹಿಸುವ ಮಹತ್ತರವಾದ  ಉದ್ದೇಶದೊಂದಿಗೆ 1999 ರಲ್ಲಿ ಯುನೆಸ್ಕೊ  ವಿಶ್ವ ಕವಿತಾ ದಿನವೆಂದು ಮಾರ್ಚ್ 21 ರಂದು ಆರಂಭಿಸಿತು.  ಈ ಹಿನ್ನೆಲೆಯಲ್ಲಿ ವಿಶ್ವ ದೆಲ್ಲೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ತೆಗೆದು ಕೊಳ್ಳಿ ಪೆನ್ನು , ಪೇಪರ್. ಬರೆದುಬಿಡಿ ಒಂದು ಕವಿತೆ.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಕೃಷಿಯಲ್ಲಿ ಮುಂದಿನ ಕ್ರಾಂತಿ AI ಮೂಲಕ | ರೈತರಿಗೆ ₹70,000 ಕೋಟಿ ಹೆಚ್ಚುವರಿ ಆದಾಯ ಸಾಧ್ಯ – ಕೇಂದ್ರ ಸಚಿವ ಜಿತೇಂದ್ರ ಸಿಂಗ್
February 24, 2026
6:29 AM
by: ದ ರೂರಲ್ ಮಿರರ್.ಕಾಂ
ಕೃಷಿ ಮಣ್ಣು ಸಾಗಾಟಕ್ಕೆ ತೊಂದರೆ ಕೊಡಬೇಡಿ ; ಅಧಿಕಾರಿಗಳಿಗೆ ಸಂಸದ ಕೋಟ ಸೂಚನೆ
February 24, 2026
6:25 AM
by: ಮಿರರ್‌ ಡೆಸ್ಕ್
“ಬಯೋ” ಔಷಧಿಗಳ ಹೆಸರಿನಲ್ಲಿ ಅಡಿಕೆ ರೈತರ ವಂಚನೆ..? ರೋಗಕ್ಕಿಂತಲೂ ದೊಡ್ಡ ಸವಾಲಾಗಿ ಮೂಡಿದ ಕೆಲವು ಔಷಧಿಗಳು..!, ಆದರೂ ಇಲಾಖೆಗಳು, ಸರ್ಕಾರ ಮೌನ…!
February 23, 2026
9:21 PM
by: ಮಿರರ್‌ ಡೆಸ್ಕ್
ಅಡಿಕೆ ತೋಟದಲ್ಲಿ ಲೆಮನ್ ಗ್ರಾಸ್ ಬೆಳೆ | ‘ಕೃಷ್ಣ’ ಜಾತಿಗೆ ಹೆಚ್ಚು ಉತ್ಪಾದನೆ – ಐಸಿಎಆರ್ ಅಧ್ಯಯನ
February 23, 2026
8:39 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror