ಇಂದು ವಿಶ್ವ ಕವಿತಾ ದಿನ | ಕವಿತೆ ಎನ್ನುವ ಭಾವನೆಗಳ ಗೊಂಚಲು

March 21, 2021
10:17 AM

ವಿಶ್ವ ಕವಿತಾ ದಿನದ ಶುಭಾಶಯಗಳು…

Advertisement
Advertisement

ಕವಿತೆ ಹುಟ್ಟುವುದು ಮನಸಿನಿಂದ. ಅಲ್ಲಿನ  ಭಾವನೆಗಳು ಕವಿತೆಯಾಗಿ  ರೂಪು ತಳೆಯುತ್ತವೆ. ಕವಿ ಹೃದಯಕ್ಕೆ ಎಲ್ಲವೂ ವಿಷಯವೇ….
ಓಡುವ ಮೋಡ, ಸುರಿಯುವ ಮಳೆ, ಮೂಡುವ ಸೂರ್ಯ , ಬಾನಂಚಿನಲ್ಲಿ ಮರೆಯಾಗುವ ಭಾಸ್ಕರ. ಅರಳು ನೈದಿಲೆ, ಮುಸುಕಿದ ಮಂಜು , ಕೊನೆ ಮೊದಲಿಲ್ಲದ ಆಗಸ.  ಹೀಗೆ  ಕವಿಗೆ  .ಬರೆಯುವ ಮನಸಿದ್ದಾಗ ಎಲ್ಲವೂ ವಸ್ತುಗಳೇ.

ಕವಿತೆ ಬರೆಯುವುದು ಗದ್ಯ ಬರೆದಂತಲ್ಲ.  ಹಾಡಲು ಅನುಕೂಲವಾಗುವಂತೆ ಬರೆದಾಗ ಅದಕ್ಕೊಂದು ವಿಶೇಷ ಆಕರ್ಷಣೆ. ಛಂದೋಬದ್ಧವಾಗಿ ಬರೆದಾಗ ಒಂದು ತೂಕ ಜಾಸ್ತಿಯೇ. ಕೆಲವೊಮ್ಮೆ ನಾಲ್ಕು ಗೆರೆ ಪ್ರಾಸಬದ್ಧವಾಗಿ ಬರೆದರೂ ಪದ್ಯವಾಗಿ ಬಿಡುತ್ತದೆ..   ಭಾವನೆಗಳ ಅಭಿವ್ಯಕ್ತಿಯೇ ಮುಖ್ಯ.

ಸಣ್ಣ ದೊಡ್ಡ ಕವಿಗಳನ್ನು ಪ್ರೋತ್ಸಾಹಿಸುವ ಮಹತ್ತರವಾದ  ಉದ್ದೇಶದೊಂದಿಗೆ 1999 ರಲ್ಲಿ ಯುನೆಸ್ಕೊ  ವಿಶ್ವ ಕವಿತಾ ದಿನವೆಂದು ಮಾರ್ಚ್ 21 ರಂದು ಆರಂಭಿಸಿತು.  ಈ ಹಿನ್ನೆಲೆಯಲ್ಲಿ ವಿಶ್ವ ದೆಲ್ಲೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ತೆಗೆದು ಕೊಳ್ಳಿ ಪೆನ್ನು , ಪೇಪರ್. ಬರೆದುಬಿಡಿ ಒಂದು ಕವಿತೆ.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ
July 26, 2025
10:25 PM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ
July 26, 2025
10:13 PM
by: The Rural Mirror ಸುದ್ದಿಜಾಲ
ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ
July 26, 2025
10:05 PM
by: The Rural Mirror ಸುದ್ದಿಜಾಲ
ರಾಜ್ಯಕ್ಕೆ ಅಗತ್ಯ ರಸಗೊಬ್ಬರ ಪೂರೈಸುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ
July 26, 2025
9:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group