Advertisement
ಅನುಕ್ರಮ

ಅಭಿವೃದ್ಧಿಯ ಪಥದಲ್ಲಿ ಭಾರತ…. | ವಿವೇಕಾನಂದ ಎಚ್‌ ಕೆ ಬರೆಯುತ್ತಾರೆ.. |

Share

ಇದನ್ನು ವಿಶ್ವದ ಮೂರು ಬಲಿಷ್ಠ ಆರ್ಥಿಕತೆಯ ಹೊಂದಿರುವ ದೇಶಗಳ ಒಟ್ಟು ಪರಿಸ್ಥಿತಿಯನ್ನು ಅವಲೋಕಿಸಿದಾಗ ಯಾವ ರೀತಿ ಅಂದಾಜು ಮಾಡಬಹುದು ಎಂಬ ಒಂದು ಸರಳ ವಿಶ್ಲೇಷಣೆ.

ವಿಶ್ವದ ಅತಿ ದೊಡ್ಡ ಮತ್ತು ಶ್ರೀಮಂತ ಹಣಕಾಸು ವ್ಯವಸ್ಥೆ ಹೊಂದಿರುವ ಅಮೆರಿಕಾದ ಒಟ್ಟು ಆರ್ಥಿಕತೆಯ ಗಾತ್ರ 27 ಟ್ರಿಲಿಯನ್, ಎರಡನೇ ಸ್ಥಾನದಲ್ಲಿರುವ ಚೀನಾದ ಆರ್ಥಿಕತೆ 17 ಟ್ರಿಲಿಯನ್, ಮೂರನೆಯ ಸ್ಥಾನದಲ್ಲಿ ಜರ್ಮನಿ ಹಾಗು ನಾಲ್ಕನೆಯ ಸ್ಥಾನದಲ್ಲಿ ಜಪಾನ್ ಮತ್ತು ಐದನೆಯ ಸ್ಥಾನದಲ್ಲಿರುವ ಭಾರತದ ಎಕಾನಮಿ 4.1 ಟ್ರಿಲಿಯನ್.

ಅಮೆರಿಕಾದ ಒಟ್ಟು ಜನಸಂಖ್ಯೆ ಸುಮಾರು 33 ಕೋಟಿ, ಚೀನಾದ ಒಟ್ಟು ಜನಸಂಖ್ಯೆ 141 ಕೋಟಿ, ಭಾರತದ ಜನಸಂಖ್ಯೆ 143 ಕೋಟಿ ಆಸು ಪಾಸಿನಲ್ಲಿದೆ.

ಅಮೆರಿಕಾದ ಒಟ್ಟು ಭೌಗೋಳಿಕ ವಿಸ್ತೀರ್ಣ 9.8 ಸ್ಕ್ವೇರ್ ಕಿಲೋಮೀಟರ್, ಚೀನಾದ ವಿಸ್ತೀರ್ಣ 9.6 ಸ್ಕ್ವೇರ್ ಕಿಲೋಮೀಟರ್, ಭಾರತದ ಒಟ್ಟು ವಿಸ್ತೀರ್ಣ ಸುಮಾರು 3.25 ಸ್ವ್ಕೇರ್ ಕಿಲೋಮೀಟರ್.

ಅಮೆರಿಕಾದ ತಲಾ ಆದಾಯ 70000 ಅಮೆರಿಕನ್ ಡಾಲರ್, ಚೀನಾದ ತಲಾ ಆದಾಯ ಸುಮಾರು 19000 ಡಾಲರ್,
ಭಾರತದ ತಲ ಆದಾಯ ಸುಮಾರು 7000 ಸಾವಿರ ಡಾಲರ್. ಅಂದರೆ ಇವುಗಳ ನಡುವಿನ ವ್ಯತ್ಯಾಸವನ್ನು ಗಮನಿಸಿ. ಭಾರತದ ಈಗಿನ ಪ್ರಧಾನಿಗಳ ಬಹುದೊಡ್ಡ ಗುರಿ ಭಾರತವನ್ನು ಐದು ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡಿ ವಿಶ್ವದಲ್ಲಿ ಮೂರನೆಯ ಬಹುದೊಡ್ಡ ಆರ್ಥಿಕತೆ ಮಾಡುವ ಕನಸನ್ನ ಹೊಂದಿದ್ದಾರೆ. ಇದು ಆರ್ಥಿಕ ದೃಷ್ಟಿಯಿಂದ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯ ಆಲೋಚನೆ ನಿಜ ಆದರೆ ಇದರ ಇನ್ನೊಂದು ಮುಖ ಮತ್ತು ಇದಕ್ಕಾಗಿ ದೇಶದ ಜನತೆ ಮಾಡಬೇಕಾದ ತ್ಯಾಗ, ಶ್ರಮದ ಬಗ್ಗೆಯೂ ಕೂಡ ಸಣ್ಣದಾಗಿ ಗಮನಹರಿಸಬೇಕಿದೆ.

ಮೊದಲನೆಯದಾಗಿ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಾಗೆಯೇ ಪೂರ್ವ ಪಶ್ಚಿಮ ದಿಕ್ಕುಗಳಲ್ಲಿ ಸಹ ಪರಿಸರದ ಮೇಲೆ ಬಹುದೊಡ್ಡ ಒತ್ತಡ ಬೀಳುತ್ತಿದೆ. ಗಾಳಿ, ನೀರು, ಆಹಾರ, ಭೂಮಿಯ ಫಲವತ್ತತೆ, ಹೆಚ್ಚು ಕಡಿಮೆ ಮಲಿನವಾಗುತ್ತಿದೆ ಅಥವಾ ವಿಷಯವಾಗುತ್ತಿದೆ ಅಥವಾ ವಿನಾಶದ ಹಂಚಿಗೆ ತಲುಪುತ್ತಿದೆ.

ಎರಡನೆಯದಾಗಿ, ಇದರಿಂದಾಗಿ ಮನುಷ್ಯನ ದೇಹ ಮತ್ತು ಮನಸ್ಸುಗಳ ಮೇಲೆ ಸಹ ದುಷ್ಪರಿಣಾಮ ಬೀರಿ ಆತನ ಜೀವನೋತ್ಸಾಹ ಮತ್ತು ಆರೋಗ್ಯದಲ್ಲಿ ಗಣನೀಯ ಬದಲಾವಣೆಗಳಾಗುತ್ತಿದೆ. ಯುವಶಕ್ತಿ ಖಂಡಿತವಾಗಿಯೂ ಎಲ್ಲರ ನಿರೀಕ್ಷೆಯ ಆ ಬಲಾಡ್ಯತೆಯನ್ನ ಕಳೆದುಕೊಳ್ಳುತ್ತಿದೆ.

ಮೂರನೆಯದಾಗಿ ಆಡಳಿತ ವ್ಯವಸ್ಥೆ, ವ್ಯಾಪಾರ ವ್ಯವಹಾರಗಳು ಅಥವಾ ವೃತ್ತಿಗಳು ಎಲ್ಲವೂ ಕೂಡ ಹಣ ಕೇಂದ್ರೀಕೃತವಾಗಿ ಕೆಟ್ಟ ಅನಾರೋಗ್ಯಕಾರಿ ಸ್ಪರ್ಧೆ ಹೆಚ್ಚಾಗಿ ಗುಣಮಟ್ಟವೂ ಸಹ ನಿರಂತರವಾಗಿ ಕುಸಿಯುತ್ತಿದೆ. ಹಣವೇ ಪ್ರಾಧಾನ್ಯತೆ ಹೊಂದಿರುವುದರಿಂದ ಸಹಜವಾಗಿಯೇ ಗ್ರಾಹಕ ಸಂಸ್ಕೃತಿ ತಲೆ ಎತ್ತಿ ಜನರ ಹಿತಾಸಕ್ತಿ ಸಂಪೂರ್ಣ ಕಡೆಗಣಿಸಲಾಗಿದೆ.

ನಾಲ್ಕನೆಯದಾಗಿ ಮಾನವೀಯ ಮೌಲ್ಯಗಳು ಅಂದರೆ ಪ್ರೀತಿ, ಸಹಕಾರ, ಸಂಯಮ, ಸಭ್ಯತೆ, ತಾಳ್ಮೆ, ಕ್ಷಮಾಗುಣ, ಕರುಣೆ ಈ ಎಲ್ಲವೂ ಕೂಡ ವ್ಯಾಪಾರಿಕರಣವಾಗಿ ಮನುಷ್ಯ ಸಂಬಂಧಗಳು ಆ ಗಟ್ಟಿತನವನ್ನು, ಆ ಆತ್ಮೀಯತೆಯನ್ನು, ಆ ಪ್ರೀತಿಯನ್ನು ಕಳೆದುಕೊಳ್ಳುತ್ತಿವೆ. ಇದಕ್ಕೆ ಮೂಲ ಕಾರಣ ಕೇವಲ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದೇ ಮುಖ್ಯ ಗುರಿಯಾಗಿರುವುದರಿಂದ.

ಇದರ ಜೊತೆಗೆ ಐದನೆಯದಾಗಿ ಈ ಐದು ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸಬೇಕಾದರೆ ತೆರಿಗೆಗಳು ಎಲ್ಲಾ ರೀತಿಯ ತೆರಿಗೆಗಳನ್ನು ಸಹ ಹೆಚ್ಚು ಮಾಡಲೇಬೇಕಾಗಿದೆ. ಬೆಲೆ ಏರಿಕೆ ಹೆಚ್ಚು ಆಗಲೇಬೇಕು, ಮಧ್ಯಪಾನದ ಅಥವಾ ಆ ರೀತಿಯ ಅಮಲಿನ ಪದಾರ್ಥಗಳ ಬೆಳವಣಿಗೆಯನ್ನು ತಡೆಯುವುದು ಕಷ್ಟವಾಗುತ್ತದೆ, ಆನ್ಲೈನ್ ಗೇಮಿಂಗ್ ಅಥವಾ ಜೂಜು ಕ್ರೀಡೆಗೂ ಸಹ ಮಾನ್ಯತೆ ಕೊಡಬೇಕಾಗುತ್ತದೆ. ಶ್ರಮಪಟ್ಟು ಅಥವಾ ಮೌಲ್ಯಯುತವಾಗಿ ಐದನೆಯ ಸ್ಥಾನಕ್ಕೆ ಬರಬೇಕೆಂದರೆ ಈಗಿನ ಜಾಗತೀಕರಣದ ಸ್ಥಿತಿಯಲ್ಲಿ ಅಷ್ಟು ಸುಲಭವಲ್ಲ. ಮನುಷ್ಯರನ್ನು ಗ್ರಾಹಕರು ಎಂದು ಭಾವಿಸಿಯೇ ಸಾಮಾನ್ಯ ಜನರನ್ನು ಹೆಚ್ಚು ಗೊಂದಲಗೊಳಿಸುವ ಅಥವಾ ಶೋಷಿಸುವ ಮೂಲಕ ಈ ಅಭಿವೃದ್ಧಿ ಸಾಧಿಸಬೇಕಾಗುತ್ತದೆ. ಇದು ಎಷ್ಟರಮಟ್ಟಿಗೆ ದೇಶದ ಸುಸ್ಥಿರ ಹಿತಾಸಕ್ತಿಯನ್ನು ಕಾಪಾಡುತ್ತದೆ ಎನ್ನುವ ಪ್ರಶ್ನೆ ನಮ್ಮನ್ನು ನಾವೇ ಕೇಳಿಕೊಳ್ಳಬೇಕು.

ಶಿಕ್ಷಣ ಮತ್ತು ಆರೋಗ್ಯ ಈ ದೇಶದಲ್ಲಿ ತಲುಪುತ್ತಿರುವ ಸ್ಥಿತಿಯನ್ನು ನೋಡಿದರೆ ಭವಿಷ್ಯ ನಿಜಕ್ಕೂ ಆತಂಕವನ್ನು ಉಂಟುಮಾಡುತ್ತದೆ. ಶಿಕ್ಷಣ ಸಂಪೂರ್ಣ ವ್ಯಾಪಾರಿಕರಣವಾಗಿದೆ, ಶೈಕ್ಷಣಿಕ ಗುಣಮಟ್ಟ ಬಹುತೇಕ ಅಂಕಗಳನ್ನೇ ಆಧರಿಸಿ ಮುನ್ನಡೆಯುತ್ತಿದೆ, ಈ ಸ್ಪರ್ಧಾತ್ಮಕ ಪರೀಕ್ಷೆಗಳು ಯುವಕರಲ್ಲಿ ಹತಾಶ ಮನೋಭಾವವನ್ನು ಅಥವಾ ಅಸಹಾಯಕತೆಯನ್ನು ಸೃಷ್ಟಿ ಮಾಡಿ ಅವರನ್ನು ಬಲಿಪಶುಗಳನ್ನಾಗಿ ಮಾಡುತ್ತಿದೆ. ಅದಕ್ಕೆ ಒಂದು ಸಣ್ಣ ಉದಾಹರಣೆ ಎಂದರೆ ರಾಜಸ್ಥಾನದ ಕೋಟಾದಲ್ಲಿ ನೀಟ್ ಪರೀಕ್ಷೆಗೆ ಸಿದ್ಧವಾಗಲು ಓದುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಘಟನೆಗಳನ್ನು ನೋಡಿದಾಗ ಇದು ಇತರ ಪ್ರದೇಶಗಳಿಗೂ ಹರಡಬಹುದೇನೋ ಅನ್ನುವ ಅನುಮಾನ ಉಂಟಾಗುತ್ತದೆ.

ಇನ್ನು ಆರೋಗ್ಯ ಕ್ಷೇತ್ರ ಊಹೆಗೂ ನಿಲುಕದಂತೆ ಬೆಳವಣಿಗೆ ಮತ್ತು ಅಧಃಪತನ ಏಕಕಾಲದಲ್ಲಿ ಉಂಟಾಗುತ್ತಿದೆ. ವಿಪರೀತ ಜನಸಂಖ್ಯೆ ಹಾಗೆ ವಿವಿಧ ಅನಾರೋಗ್ಯಗಳು ಅದೇ ಸಮಯದಲ್ಲಿ ಮನುಷ್ಯರು ಆಸ್ಪತ್ರೆಗಳಿಗೂ ಸಹ ಗ್ರಾಹಕರೇ ಆಗುತ್ತಿದ್ದಾರೆ. ರೋಗಿಗಳಿಗಿಂತ ಹೆಚ್ಚಾಗಿ ಗ್ರಾಹಕ ಸಂಸ್ಕೃತಿ ಆಸ್ಪತ್ರೆ ಮತ್ತು ಶಾಲೆಗಳಲ್ಲಿ ಸೃಷ್ಟಿಯಾದರೆ ನಿಜಕ್ಕೂ ಈ ನೆಲಕ್ಕೆ ಅದನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ. ಮನುಷ್ಯನ ಅಥವಾ ಸಮಾಜದ ಅಥವಾ ದೇಶದ ಯಾವುದೇ ಅಭಿವೃದ್ಧಿ ಆತನ ಜೀವನ ಮಟ್ಟವನ್ನು ಹೆಚ್ಚಿಸುವಂತಿರಬೇಕು, ಆತನ ಸಂತೋಷ ನೆಮ್ಮದಿ ಉತ್ತಮವಾಗಿರುವಂತಿರಬೇಕು, ಅಸಮಾಧಾನ, ಅತೃಪ್ತಿ, ಅನಾರೋಗ್ಯ ಖಂಡಿತವಾಗಿಯೂ ದೇಶ ವಿಶ್ವಮಟ್ಟದಲ್ಲಿ ಆರ್ಥಿಕತೆವಾಗಿ ಮೂರನೇ ಸ್ಥಾನಕ್ಕೆ ತಲುಪಿದರು ಸಹ ಅಂತಹ ದೊಡ್ಡ ಪ್ರಯೋಜನವಾಗುವುದಿಲ್ಲ. ಅಧಿಕೃತವಾಗಿ ಹೆಸರಿಗೆ ಒಂದು ಸಾಧನೆ ಆಗಬಹುದೇ ಹೊರತು ಆಳದಲ್ಲಿ ಅದರಿಂದ ದುಷ್ಪರಿಣಾಮಗಳು ಹೆಚ್ಚು.

ಹಾಗೆಂದು ನಿರಾಶರಾಗಬೇಕಿಲ್ಲ. ಆದರೆ ಈ ಆರ್ಥಿಕ ಅಭಿವೃದ್ಧಿಯ ಜೊತೆ ಈಗ ವಿನಾಶದ ಅಂಚಿನಲ್ಲಿರುವ ಪರಿಸರ, ಪ್ರಜಾಪ್ರಭುತ್ವ, ಮಾನವೀಯ ಮೌಲ್ಯಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ವ್ಯಾವಹಾರಿಕವಾಗಿ ಕೇವಲ ಲಾಭ ಚಿಂತನೆ ಮಾಡಬಹುದು. ಆದರೆ ಅದರಲ್ಲಿ ದ್ರೋಹ ಚಿಂತನೆ ಅಥವಾ ವಂಚನೆ ಇರಬಾರದು. ಗ್ರಾಹಕ ಸಂಸ್ಕೃತಿಗಿಂತ ನಾಗರಿಕ ಸಂಸ್ಕೃತಿ ಮುಖ್ಯವಾಗಬೇಕು.

ಬರಹ :
ವಿವೇಕಾನಂದ ಎಚ್. ಕೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

5 hours ago

ಗ್ರಾಮೀಣ ಭಾರತದ ಆದಾಯಕ್ಕೆ ಹಿನ್ನಡೆ – ಕಳೆದ ವರ್ಷ ಅರ್ಧದಷ್ಟು ಕುಟುಂಬಗಳ ಆದಾಯದಲ್ಲಿ ಏರಿಕೆಯಾಗಿಲ್ಲ

ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…

12 hours ago

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

21 hours ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

21 hours ago

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…

23 hours ago