ಗುತ್ತಿಗಾರು : ಮೆಟ್ಟಿನಡ್ಕದಲ್ಲಿ ಎಲ್ಲಾ ಇದೆ -ಕುಡಿಯುವ ನೀರಿಲ್ಲ..! | ಇಲ್ಲಿ ಎಲ್ಲಾ ಯೋಜನೆಗಳೂ ಹೀಗೇಕೆ ? |

April 8, 2021
2:56 PM
Advertisement

Advertisement
Advertisement
Advertisement

ಕೊಳವೆಬಾವಿ ಇದೆ. ನೀರಿನ ಟ್ಯಾಂಕ್‌ ಇದೆ, ಪೈಪ್‌ ಲೈನ್‌ ಇದೆ. ಕುಡಿಯುವ ನೀರು ಮಾತ್ರಾ ಇಲ್ಲ…! . ಇದು ಗುತ್ತಿಗಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೆಟ್ಟಿನಡ್ಕದಲ್ಲಿನ ಪರಿಸ್ಥಿತಿ. ಸರಕಾರದ ಯೋಜನೆಗಳೆಲ್ಲಾ ಹೀಗಾದರೆ ಹೇಗೆ ?

Advertisement

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್‌ ಅತ್ಯಂತ ಪ್ರತಿಷ್ಟಿತ ಪಂಚಾಯತ್‌ ಎಂಬ ಹೆಗ್ಗಳಿಕೆ. ಇಲ್ಲಿ ಎಲ್ಲಾ ಪಕ್ಷಗಳಿಂದಲೂ ಪ್ರಮುಖ ನಾಯಕರು ಇದ್ದಾರೆ. ಆದರೆ ಎಲ್ಲಾ ಯೋಜನೆಗಳೂ ಅರ್ಧಕ್ಕೆ ಅರ್ಧವೇ..!. ಮೊನ್ನೆ ಮೊನ್ನೆ ಗುತ್ತಿಗಾರಿನಲ್ಲಿ ಸುದ್ದಿ ಮಾಡಿದ್ದು ಕುಡಿಯುವ ನೀರು. ಗುತ್ತಿಗಾರು ಪೇಟೆಯಲ್ಲಿಯೇ ಕುಡಿಯುವ ನೀರಿಲ್ಲದೆ ಹಲವು ದಿನಗಳಾದರೂ ಯಾವುದೇ ಸ್ಪಂದನ ಇರಲಿಲ್ಲ ಎಂದು ಸಾರ್ವಜನಿಕರು  ಹೇಳಿದ್ದರು.

 

Advertisement

ಇನ್ನೊಂದು ಸುದ್ದಿಯಾದ ಸಂಗತಿ ಎಂದರೆ ಜಿಮ್‌ ಕೇಂದ್ರ. ಗುತ್ತಿಗಾರಿಗೆ ಜಿಮ್‌ ಪರಿಕರಗಳು ಲಭ್ಯವಿದ್ದರೂ ಅದು ಸಾರ್ವಜನಿಕರಿಗೆ ಉಪಯೋಗಕ್ಕೆ ಸಿಗಲಿಲ್ಲ. ಈ ಬಗ್ಗೆಯೂ ಯಾವುದೇ ಸ್ಪಂದನೆ ಇಲ್ಲ.

Advertisement

ಇದೀಗ ಇದೇ ಪಂಚಾಯತ್‌ ವ್ಯಾಪ್ತಿಯ ನಾಲ್ಕೂರು ಗ್ರಾಮದ ಮೆಟ್ಟಿನಡ್ಕದಲ್ಲಿ ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ವಿಶ್ವ ಬ್ಯಾಂಕ್‌ ಯೋಜನೆಯಡೆ ನೀರಿನ ಟ್ಯಾಂಕ್‌ ನಿರ್ಮಾಣವಾಗಿದೆ. ಕೆಲವು ಸಮಯಗಳವರೆಗೆ ಸಾರ್ವಜನಿಕರಿಗೆ ಉಪಯೋಗವಾಗುತ್ತಿತ್ತು. ಈಚೆಗೆ ಸುಮಾರು ಆರೇಳು ವರ್ಷಗಳಿಂದ ಈ ಟ್ಯಾಂಕ್‌ ಗೆ ನೀರು ಪೂರೈಕೆ ಆಗುತ್ತಿರಲಿಲ್ಲ. ಹೀಗಾಗಿ ಮೆಟ್ಟಿನಡ್ಕ ಶಾಲೆ ಹಾಗೂ ಆಸುಪಾಸಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಅಚ್ಚರಿ ಎಂದರೆ ಸುಳ್ಯದ ಶಾಸಕರ ಸಂಬಂಧಿಕರೋರ್ವರಿಗೂ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಅವರು ಈ ಬಗ್ಗೆ ಸಮಾಧಾನದಿಂದಲೇ ನೀರು ಹೊತ್ತು ತರುತ್ತಿದ್ದಾರೆ…!. ಈ ಎಲ್ಲಾ ಸಮಸ್ಯೆ ನಿವಾರಣೆಗೆ ನೂತನ ಕೊಳವೆ ಬಾವಿ ಕೂಡಾ ತೆಗೆಯಲಾಗಿದೆ. ಅದಾದ ಬಳಿಕ ಪಂಪ್‌, ಪೈಪ್‌ ಅಳವಡಿಕೆಗೆ ಕೂಡಾ ಅನುದಾನ ಇದ್ದರೂ ಟ್ಯಾಂಕ್‌ ಗೆ ಇನ್ನೂ ನೀರು ಹಾಯಿಸಲು ಸಾಧ್ಯವಾಗಲಿಲ್ಲ. ಈಚೆಗೆ ಮೆಟ್ಟಿನಡ್ಕದ ಇನ್ನೊಂದು ಪ್ರದೇಶದಲ್ಲಿ  ನೀರಿನ  ಸಮಸ್ಯೆ ಉಂಟಾದಾಗ ಗ್ರಾಪಂ ಸದಸ್ಯೆಯೊಬ್ಬರು ಸ್ವತ: ಹಾರೆ ಹಿಡಿದು ಕೆಲಸ ಮಾಡಿದ್ದರು. ಈಗ ಮೆಟ್ಟಿನಡ್ಕದ ಇನ್ನೊಂದು ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

 

Advertisement

 

Advertisement

 

 

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವೆದರ್‌ ಮಿರರ್‌ | 20.04.2024 | ರಾಜ್ಯದ ಹಲವೆಡೆ ಇಂದು ಮಳೆಯ ಮುನ್ಸೂಚನೆ
April 20, 2024
11:35 AM
by: ಸಾಯಿಶೇಖರ್ ಕರಿಕಳ
ಚಾಮರಾಜನಗರ-ಹಾವೇರಿಯಲ್ಲಿ ಗಾಳಿಗೆ ಅಪಾರ ಕೃಷಿ ಹಾನಿ |
April 19, 2024
11:14 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಉತ್ತಮ ಮಳೆ | ಗಾಳಿಗೆ ಉರುಳಿದ ಮರ | ಸುಳ್ಯ- ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಡಿತ |
April 19, 2024
11:07 PM
by: ದ ರೂರಲ್ ಮಿರರ್.ಕಾಂ
ಬೇಸಿಗೆ ಜರ್ನಿಯ ಚಿಲಿಪಿಲಿ ಗೂಡು | ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ |
April 19, 2024
4:02 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror