ಸುದ್ದಿಗಳು

ಭಾರತದ 143 ಜಲಾಶಯಗಳಲ್ಲಿ ಕಡಿಮೆ ನೀರು ಸಂಗ್ರಹ |ಈ ಬೇಸಿಗೆಯಲ್ಲಿ ನೀರಿನ ಕೊರತೆ ಸಾಧ್ಯತೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಈ ಬೇಸಿಗೆಯಲ್ಲಿ ದೇಶದಲ್ಲಿ ನೀರಿನ ಕೊರತೆ ಎದುರಾಗಬಹುದು. ಎಲ್ಲಾ ಪ್ರಮುಖ ಜಲಾಶಯಗಳಲ್ಲಿ ಈ ಹಿಂದಿನ ವರ್ಷ ಇದೇ ಸಮಯದಲ್ಲಿ ಇದ್ದಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ. ಜಲಾಶಯಗಳು ಕೈಗಾರಿಕಾ ಬಳಕೆದಾರರನ್ನು ಒಳಗೊಂಡಿರುವ ದೊಡ್ಡ ನದಿಗಳು ಮತ್ತು ನಗರ ನೀರಿನ ಪೂರೈಕೆಯ ನಡುವೆ ವಿಶೇಷ ಬಫರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ.

Advertisement

ಈ ವರ್ಷದಲ್ಲಿ ಎದುರಾಗುವ ಕೊರತೆಯ ಚಳಿಗಾಲದ ಮಳೆ ಮತ್ತು ಫೆಬ್ರುವರಿಯಲ್ಲಿ ದಾಖಲೆಯನ್ನು ಮುರಿಯುವ ತಾಪಮಾನವು ಈಗಾಗಲೇ ಮಣ್ಣಿನ ತೇವಾಂಶದ ನಷ್ಟಕ್ಕೆ ಕಾರಣವಾಗಿದೆ ಮತ್ತು ರೈತರ ಹೊರೆಯನ್ನು ಹೆಚ್ಚಿಸಿದೆ. ಇದು ಈಗ ನೇರವಾಗಿ ಕುಡಿಯುವ ನೀರಿನ ಅಗತ್ಯಕ್ಕೆ ತೊಂದರೆ ಉಂಟುಮಾಡುತ್ತಿದೆ.

ಕೇಂದ್ರ ಜಲ ಆಯೋಗದ ಅಂಕಿಅಂಶಗಳ ಪ್ರಕಾರ, ಸದ್ಯದ ನೀರಿನ ಮಟ್ಟವು 2022ರಲ್ಲಿನ ಇದೇ ಅವಧಿಯ ಶೇ 92ರಷ್ಟು ಆಗಿದೆ. ಕಳೆದ ವರ್ಷ 143 ಪ್ರಮುಖ ಜಲಾಶಯಗಳಲ್ಲಿ 94.027 ಬಿಲಿಯನ್ ಕ್ಯೂಬಿಕ್ ಮೀಟರ್ (BCM) ನೀರು ಇತ್ತು. ಆದರೆ, ಈ ವರ್ಷ ಮಾರ್ಚ್ 9ರ ಹೊತ್ತಿಗೆ 86.45 ಕ್ಯೂಬಿಕ್ ಮೀಟರ್ ಆಗಿದೆ.

ಉತ್ತರದ ವಲಯದಲ್ಲಿ ಹೊರತುಪಡಿಸಿ, ದೇಶದ ಜಲಾಶಯಗಳ ಉಳಿದ ನಾಲ್ಕು ಪ್ರದೇಶಗಳಲ್ಲಿ ಹಿಂದಿನ ವರ್ಷಕ್ಕಿಂತ ಕಡಿಮೆ ನೀರು ಇದೆ. ಪೂರ್ವ ವಲಯದಲ್ಲಿ, ಜಲಾಶಯಗಳಲ್ಲಿನ ನೀರು ಕಳೆದ 10 ವರ್ಷಗಳ ಸರಾಸರಿಗಿಂತ ಕಡಿಮೆ ಇದೆ.

ಈಮಧ್ಯೆ, ಮುಂಗಾರು ಮಳೆ ಕೊರತೆಯ ಬಗ್ಗೆ ತಜ್ಞರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಾನ್ಸೂನ್ ಸಮಯದಲ್ಲಿ ಕಡಿಮೆ ಮಳೆ ತರಬಹುದಾದ ಎಲ್-ನಿನೊ ಪರಿಸ್ಥಿತಿಗಳನ್ನು ಅಂತರರಾಷ್ಟ್ರೀಯ ಹವಾಮಾನ ಶಾಸ್ತ್ರಜ್ಞರು ಸೂಚಿಸಿದ್ದಾರೆ.

ಜಲಾಶಯಗಳಲ್ಲಿ ನೀರು ಕಡಿಮೆಯಾಗಲು ಪ್ರಮುಖ ಕಾರಣವೆಂದರೆ, ಕಳೆದ ವರ್ಷದ ಕಳಪೆ ಮುಂಗಾರು. ಮುಂಗಾರು ಹೆಚ್ಚು ಅನಿಯಮಿತವಾಗಿದೆ ಮತ್ತು ಕೊರತೆಯಾಗಿದೆ, 2020 ಮತ್ತು 2021 ರಲ್ಲಿ ಮಾನ್ಸೂನ್ ಸಾಮಾನ್ಯವಾಗಿತ್ತು, ಇದು ಜಲಾಶಯಗಳಲ್ಲಿ ನೀರಿನ ಲಭ್ಯತೆಗೆ ಕಾರಣವಾಯಿತು. ನೀರಿನ ಸಮಸ್ಯೆ ಎದುರಿಸಲು ಸರ್ಕಾರ ಸಜ್ಜಾಗಬೇಕು ಎನ್ನುತ್ತಾರೆ ತಜ್ಞರು.

‘ಇತ್ತೀಚೆಗೆ ಗುಜರಾತ್ ಸರ್ಕಾರ ತನ್ನ ಬೇಸಿಗೆ ಬೆಳೆಗಳಿಗೆ ರೈತರಿಗೆ ನೀರು ನೀಡುವುದಾಗಿ ಹೇಳಿತ್ತು. ಆದಾಗ್ಯೂ, ನಿರೀಕ್ಷಿತ ಕಳಪೆ ಮಾನ್ಸೂನ್ ಅವಧಿಯನ್ನು ನಿಭಾಯಿಸಲು ಸರ್ದಾರ್ ಸರೋವರ್ ಅಣೆಕಟ್ಟಿನ ನೀರನ್ನು ಸಂರಕ್ಷಿಸಬೇಕಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರಾಷ್ಟ್ರೀಯ ಭದ್ರತೆ | ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ | ಹಲವು ವಿಷಯಗಳ ಕುರಿತು ಚರ್ಚೆ

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ಎಲ್ಲಾ…

6 hours ago

ರಾಜ್ಯದ 6 ಜಿಲ್ಲೆಗಳಲ್ಲಿ ಶೀಥಲೀಕರಣ ಘಟಕ ನಿರ್ಮಾಣ

ರಾಜ್ಯದ 6 ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ ಅನುಕೂಲವಾಗುವಂತೆ ಶೀಥಲೀಕರಣ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದು…

6 hours ago

ಕೇಂದ್ರದ ಬೆಂಬಲಕ್ಕಾಗಿ  ವಿಶೇಷ ಜಾಥಾ | ಪಕ್ಷಾತೀತವಾಗಿ  ಬೆಂಬಲ

ದೇಶದ  ಸೈನಿಕರಿಗೆ ಗೌರವ ಸಲ್ಲಿಸಿ  ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ  ನಾಳೆ…

6 hours ago

ಆಪರೇಷನ್ ಸಿಂದೂರ ಕಾರ್ಯಾಚರಣೆ | ಸರ್ವ ಪಕ್ಷಗಳ ಸಭೆಯಲ್ಲಿ ಬೆಂಬಲ |

ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಿನ್ನೆಯಷ್ಟೇ ನಡೆಸಿತು. ಇದಕ್ಕೆ…

6 hours ago

ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು

ಕೃಷಿಯಲ್ಲಿ ಯಾವುದೇ ಬಲವಾದ ಸಂಘಟನೆ ಇಲ್ಲ. ನಮ್ಮ ಧ್ವನಿ ಎತ್ತಲು ಯಾರೂ ಇಲ್ಲ.ಇಂತಹ…

19 hours ago

ಮೇ 13 ರಿಂದ 25 ರವರೆಗೆ ಈ ರಾಶಿಗಳಿಗೆ ಅದೃಷ್ಟ!, ಕೆಲವು ರಾಶಿಗಳಿಗೆ ಕಠಿಣ ಕಾಲ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದು ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

20 hours ago