ಅನೇಕ ಸಮಯಗಳಿಂದ ಕೃಷಿಗೆ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಕೃಷಿಕನಿಗೆ ಜಲ ದೇವತೆ ಒಲಿದಿದ್ದಾಳೆ. ಕೃಷಿಕನ ಸಮಸ್ಯೆ ನೀಗಿಸಿ ಸಮೃದ್ಧ ಜಲರಾಶಿಯನ್ನೇ ಒದಗಿಸಿದ ಅಪರೂಪದ ಘಟನೆ ಕಡಬ ತಾಲೂಕಿನ ಎಡಮಂಗಲ ಬಳಿಯ ಹೇಮಳದಲ್ಲಿ ನಡೆದಿದೆ. ಇದೀಗ ಎಲ್ಲೆಡೆಯೂ ಈ ಬಗ್ಗೆ ಅಚ್ಚರಿ ಹಾಗೂ ಸಂತಸದ ವಾತಾವರಣ ಕಂಡುಬಂದಿದೆ.
ಕಡಬ ತಾಲೂಕಿನ ಎಡಮಂಗಲ ಬಳಿಯ ಹೇಮಳದ ಅಂಜಿನಡ್ಕದ ಕೃಷಿಕ ಅಶೋಕ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ಕೊಳವೆಬಾವಿ ತೆಗೆಸಲಾಗಿತ್ತು. 264 ಅಡಿ ಕೊರೆದಾಗ ಯಥೇಚ್ಚ ನೀರು ಲಭ್ಯವಾಗಿದೆ. ಇದೀಗ ಕೊಳವೆಬಾವಿಯಿಂದ ನೀರು ಧಾರೆಯಾಗಿ ಬರುತ್ತಿದೆ. ಎಪ್ರಿಲ್ ವೇಳೆಗೆ ಹರಿದು ಬಂದ ನೀರಿಗೆ ಕೃಷಿಕ ಅಶೋಕ್ ಸಂತಸ ಪಟ್ಟರೆ ಕೃಷಿಕ ವಲಯವು ಅಶೋಕ್ ಅವರ ಸಂತಸದಲ್ಲಿ ಭಾಗಿಯಾಗಿದೆ. ಕೃಷಿಕನಿಗೆ ಲಭ್ಯವಾದ ನೀರಿನಿಂದ ಸಮೃದ್ಧ ಕೃಷಿಯಾಗಲಿ ಎಂದು ಹಾರೈಸಿದ್ದಾರೆ.
ಅಶೋಕ್ ಅವರ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಕೃಷಿಗೆ ನೀರಿನ ಸಮಸ್ಯೆ ಇತ್ತು. ಸುತ್ತಲೂ ಗುಡ್ಡ ಪ್ರದೇಶವಾಗಿದ್ದರೂ ನೀರಿಗೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಕೊಳವೆಬಾವಿ ತೆಗೆಸಿದ್ದರು.
ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್ನಲ್ಲಿ…
ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…
ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…
ಇಂಪೀರಿಯಲ್ ಕಾಲೇಜ್ ಲಂಡನ್ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…
ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…