ಅನೇಕ ಸಮಯಗಳಿಂದ ಕೃಷಿಗೆ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಕೃಷಿಕನಿಗೆ ಜಲ ದೇವತೆ ಒಲಿದಿದ್ದಾಳೆ. ಕೃಷಿಕನ ಸಮಸ್ಯೆ ನೀಗಿಸಿ ಸಮೃದ್ಧ ಜಲರಾಶಿಯನ್ನೇ ಒದಗಿಸಿದ ಅಪರೂಪದ ಘಟನೆ ಕಡಬ ತಾಲೂಕಿನ ಎಡಮಂಗಲ ಬಳಿಯ ಹೇಮಳದಲ್ಲಿ ನಡೆದಿದೆ. ಇದೀಗ ಎಲ್ಲೆಡೆಯೂ ಈ ಬಗ್ಗೆ ಅಚ್ಚರಿ ಹಾಗೂ ಸಂತಸದ ವಾತಾವರಣ ಕಂಡುಬಂದಿದೆ.
ಕಡಬ ತಾಲೂಕಿನ ಎಡಮಂಗಲ ಬಳಿಯ ಹೇಮಳದ ಅಂಜಿನಡ್ಕದ ಕೃಷಿಕ ಅಶೋಕ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ಕೊಳವೆಬಾವಿ ತೆಗೆಸಲಾಗಿತ್ತು. 264 ಅಡಿ ಕೊರೆದಾಗ ಯಥೇಚ್ಚ ನೀರು ಲಭ್ಯವಾಗಿದೆ. ಇದೀಗ ಕೊಳವೆಬಾವಿಯಿಂದ ನೀರು ಧಾರೆಯಾಗಿ ಬರುತ್ತಿದೆ. ಎಪ್ರಿಲ್ ವೇಳೆಗೆ ಹರಿದು ಬಂದ ನೀರಿಗೆ ಕೃಷಿಕ ಅಶೋಕ್ ಸಂತಸ ಪಟ್ಟರೆ ಕೃಷಿಕ ವಲಯವು ಅಶೋಕ್ ಅವರ ಸಂತಸದಲ್ಲಿ ಭಾಗಿಯಾಗಿದೆ. ಕೃಷಿಕನಿಗೆ ಲಭ್ಯವಾದ ನೀರಿನಿಂದ ಸಮೃದ್ಧ ಕೃಷಿಯಾಗಲಿ ಎಂದು ಹಾರೈಸಿದ್ದಾರೆ.
ಅಶೋಕ್ ಅವರ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಕೃಷಿಗೆ ನೀರಿನ ಸಮಸ್ಯೆ ಇತ್ತು. ಸುತ್ತಲೂ ಗುಡ್ಡ ಪ್ರದೇಶವಾಗಿದ್ದರೂ ನೀರಿಗೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಕೊಳವೆಬಾವಿ ತೆಗೆಸಿದ್ದರು.
ICAR 16 ಹೊಸ ಜಾನುವಾರು ಮತ್ತು ನಾಯಿ ತಳಿಗಳಿಗೆ ರಾಷ್ಟ್ರೀಯ ನೋಂದಣಿ ನೀಡಿದ್ದು,…
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…
ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…
ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…
ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…
ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…