ನೈರುತ್ಯ ಮುಂಗಾರು ಹಿಂದೆ ಸರಿಯುವಿಕೆ ಆರಂಭ

September 29, 2020
11:13 AM
ತಿಂಗಳುಗಳ ಪ್ರವಾಹ, ಭೂಕುಸಿತ, ಸಿಡಿಲು ಗುಡುಗು, ವ್ಯಾಪಕ ಹಾನಿಯ ಬಳಿಕ ಇದೀಗ ನೈರುತ್ಯ ಮುಂಗಾರು ಮಾರುತ ದೇಶದ ರಾಜಸ್ಥಾನ ಭಾಗದಿಂದ ನಿಧಾನವಾಗಿ,ನಿನ್ನೆ  ಹಿಂದೆ ಸರಿಯಲು ಆರಂಭಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.

Advertisement
Advertisement

ಮುಂದಿನ ವಾರದ ವೇಳೆಗೆ ದೇಶದ ಇನ್ನಷ್ಟು ಭಾಗದಿಂದ ಹಿಂದೆ ಸರಿಯುವ ಸಾಧ್ಯತೆ ಇದ್ದು, ಈ ಬಾರಿ ವಾಡಿಕೆಗಿಂತ 10 ರಿಂದ 15 ದಿನ ತಡವಾಗಿ ಮುಂಗಾರು ಮಾರುತ ಹಿಂದೆ ಸರಿಯುವಿಕೆ ಪ್ರಕ್ರಿಯೆ ಆರಂಭವಾಗಿದೆ. ಜೂನ್ 1 ರಂದು ಭಾರತಕ್ಕೆ ಕಾಲಿಟ್ಟ ನೈರುತ್ಯ ಮುಂಗಾರು ಜೂನ್ ತಿಂಗಳ ಅಂತ್ಯಕ್ಕೆ ಹೆಚ್ಚು ಕಡಿಮೆ ಪೂರ್ತಿ ದೇಶವನ್ನು ವ್ಯಾಪಿಸಿತ್ತು. IMD ಪ್ರಕಾರ ದೇಶದ ಅನೇಕ ಕಡೆ ಸರಾಸರಿಗಿಂತ ಅಧಿಕ ಮಳೆಯಾಗಿದೆ.

ಉದಾಹರಣೆಗೆ ದೇಶದ ಬಹುದೊಡ್ಡ ನಗರವಾದ ಮುಂಬೈನಲ್ಲಿ ಆಗಸ್ಟ್ ನಲ್ಲಿ 482, ಸೆಪ್ಟೆಂಬರ್ ತಿಂಗಳಲ್ಲಿ 301 ಮಿ.ಮೀ.ನಷ್ಟು ಮಳೆಯಾಗುವುದು ವಾಡಿಕೆ. ಆದರೆ ಈ ಬಾರಿ ಹಿಂದಿನೆಲ್ಲ ದಾಖಲೆಗಳನ್ನು ಅಳಿಸಿ,ಆಗಸ್ಟ್ ನಲ್ಲಿ 1199, ಸೆಪ್ಟೆಂಬರ್ ನಲ್ಲಿ ಈ ವರೆಗೆ 376 ಮಿ.ಮೀ.ನಷ್ಟು ಮಳೆ ದಾಖಲಾಗಿದ್ದು,ಅನೇಕ ಬಾರಿ ಪ್ರವಾಹದ ಪರಿಸ್ಥಿತಿ ಉಂಟಾಗಿತ್ತು.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 23-06-2025 | ಜೂ.29 ರಿಂದ ಬೆಳೆಗಳಿಗೆ ಔಷಧಿ ಸಿಂಪಡಣೆಗೆ ಅವಕಾಶ ಸಿಗಬಹುದೇ..? | ಜೂನ್ ಕೊನೆಯಲ್ಲಿ ಮುಂಗಾರು ದುರ್ಬಲಗೊಳ್ಳಬಹುದಾ..?
June 23, 2025
1:26 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 22.06.2025| ಜೂ.28 ರಿಂದ ಮಳೆ‌ ಕಡಿಮೆಯಾಗಲಿದೆಯಾ ?
June 22, 2025
1:26 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-06-2025 | ಹೇಗೆ ಸಾಗುತ್ತಿದೆ ಮಳೆಯ ದಾರಿ..? | ಜೂ.28 ರವರೆಗೆ ಮಳೆಯೋ..? ಬಿಸಿಲೋ..?
June 21, 2025
3:02 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 19-06-2025 | ಸಾಮಾನ್ಯ ಮಳೆ ಮುಂದುವರಿಯುವ ಸಾಧ್ಯತೆ
June 19, 2025
1:52 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group