#GulabCyclone | ಆಂಧ್ರ, ಒಡಿಶಾದಲ್ಲಿ ಅಪ್ಪಳಿಸುತ್ತಿದೆ “ಗುಲಾಬ್”‌ ಚಂಡಮಾರುತ | 16 ಸಾವಿರ ಮಂದಿಯ ಸ್ಥಳಾಂತರ |

September 26, 2021
9:36 PM

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಉಂಟಾದ “ಗುಲಾಬ್”‌ ಚಂಡಮಾರುತ ಇದೀಗ ಭೂಮಿಗೆ ಅಪ್ಪಳಿಸುತ್ತಿದೆ. ಆಂಧ್ರಪ್ರದೇಶ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕರಾವಳಿ ತೀರದಲ್ಲಿ ಭಾರೀ ಗಾಳಿ-ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಒಡಿಶಾದ ಗಂಜಮ್ ಜಿಲ್ಲೆಯಿಂದ 16,000 ಮಂದಿಯನ್ನು ಸ್ಥಳಾಂತರಿಸಲಾಗಿದೆ.

Advertisement
Advertisement
Advertisement
Advertisement

ಸದ್ಯ ಚಂಡಮಾರುತವು ಆಂಧ್ರಪ್ರದೇಶದ  ಶ್ರೀಲಕುಲಂ , ಕಳಿಂಗಪಟ್ಟಣದಲ್ಲಿ  ಭಾರೀ ಮಳೆಯಾಗಿದ್ದು, ಭಾರೀ ಗಾಳಿ ಬೀಸಿದೆ. ಇತ್ತೀಚೆಗಿನ ಅಂದಾಜು ಪ್ರಕಾರ ಚಂಡಮಾರುತವು ಕರಾವಳಿ ಪ್ರದೇಶಗಳನ್ನು ತಲುಪಿದೆ. ಹೀಗಾಗಿ ಆಂಧ್ರಪ್ರದೇಶದ ಉತ್ತರ ಕರಾವಳಿ ಮತ್ತು ಪಕ್ಕದ ದಕ್ಷಿಣ ಕರಾವಳಿಯ ಒಡಿಶಾದಲ್ಲಿ ಚಂಡಮಾರುತದ ವೇಗದ ಪ್ರಕ್ರಿಯೆ ಆರಂಭವಾಗಿದೆ. ಉತ್ತರ ಆಂಧ್ರಪ್ರದೇಶ-ದಕ್ಷಿಣ ಒಡಿಶಾ ಕರಾವಳಿಯ ಕಳಿಂಗಪಟ್ಟಣ ಮತ್ತು ಗೋಪಾಲಪುರ ನಡುವೆ ಮುಂದೆ ಹಾದುಹೋಗುವ ಸಾಧ್ಯತೆಯಿದೆ, ಕಳಿಂಗಪಟ್ಟಣದ ಉತ್ತರಕ್ಕೆ ಸುಮಾರು 25 ಕಿಮೀ ದೂರದಲ್ಲಿ ಚಂಡಮಾರುತವು 75-85 ಕಿಮೀ ವೇಗದಲ್ಲಿ ಮುಂದಿನ 3 ಗಂಟೆಗಳಲ್ಲಿ ಚಲಿಸಲಿದೆ.

Advertisement

ಪ್ರಸ್ತುತ ಒಡಿಶಾದಲ್ಲಿ ಒಟ್ಟು 13 ರಾಷ್ಟ್ರೀಯ ವಿಪತ್ತು ನಿಗ್ರಹ ದಳವನ್ನು (ಎನ್‌ಡಿಆರ್‌ಎಫ್‌) ಹಾಗೂ ಆಂಧ್ರಪ್ರದೇಶದಲ್ಲಿ ಒಟ್ಟು ಐದು ಎನ್‌ಡಿಆರ್‌ಎಫ್‌ ಪಡೆಯನ್ನು ನಿಯೋಜನೆ ಮಾಡಲಾಗಿದೆ,” ಎಂದು ಎನ್‌ಡಿಆರ್‌ಎಫ್‌ನ ಮಹಾನಿರ್ದೇಶಕರು ಸತ್ಯ ನಾರಾಯಣ್‌ ಪ್ರಧಾನ್‌ ತಿಳಿಸಿದ್ದಾರೆ. ಗುಲಾಬ್‌ ಚಂಡಮಾರುತಕ್ಕೆ ತುತ್ತಾಗುವ ಸಾಧ್ಯತೆ ಇರುವ ಪ್ರಮುಖ ಏಳು ಜಿಲ್ಲೆಗಳಲ್ಲಿ ಈ ಸ್ಥಳಾಂತರ ಪ್ರಕ್ರಿಯೆಯನ್ನು ಮಾಡಲಾಗಿದೆ.

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror