#PMFBY | ಅಡಿಕೆ ಬೆಳೆಗೆ ಹವಾಮಾನ ಆಧಾರಿತ ಬೆಳೆ ವಿಮೆ | ಜು.31 ಪ್ರೀಮಿಯಂ ತುಂಬಲು ಕೊನೆಯ ದಿನ | ಈಗ FRUIT ID ಗೊಂದಲ…! | ವಿಮೆ ಪಾವತಿ ಕೊನೆಯ ದಿನ ಮುಂದೂಡಬಹುದೇ ?

July 27, 2023
8:29 PM
ಅಡಿಕೆ ಬೆಳೆಗಾರರಿಗೆ ಬೆಳೆ ವಿಮೆ ಪಾವತಿಗೆ ಪಹಣಿಯಲ್ಲಿ ಹೆಸರು ಇರುವ ಎಲ್ಲರ ಫಾಮರ್‌ ಐಡಿ ಕಡ್ಡಾಯವಾಗಿದೆ. ಆದರೆ ಕೆಲವು ಕೃಷಿಕರಿಗೆ ಈ ಐಡಿ ಇಲ್ಲದ ಕಾರಣದಿಂದ ಅನೇಕ ಕೃಷಿಕರಿಗೆ ಬೆಳೆ ವಿಮೆ ಕಟ್ಟಲು ಸಾಧ್ಯವಾಗುತ್ತಿಲ್ಲ. ವಿಮೆ ಕಂತು ಕಟ್ಟಲು ಜುಲೈ 31 ಕೊನೇ ದಿನವಾಗಿದೆ. ಹೀಗಾಗಿ ಈಗ ಗೊಂದಲ ಉಂಟಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ವಿವಿಧ ಕಾರಣಗಳಿಂದ ತಡವಾಗಿ ಹವಾಮಾನ ಆಧಾರಿತ ಬೆಳೆ ವಿಮೆಗೆ ಪ್ರೀಮಿಯಂ ಪಾವತಿಗೆ ನೋಟಿಫೀಕೇಶನ್‌ ಆಗಿತ್ತು. ಕೇವಲ ಒಂದು ವಾರದ ಅವಕಾಶ ಇದೆ. ಪ್ರೀಮಿಯಂ ಪಾವತಿಗೆ ಜು.31 ಕೊನೆಯ ದಿನವಾಗಿದೆ. ಈ ಬಾರಿ FID ( FRUIT ID) ಕಡ್ಡಾಯವಾಗಿದೆ. ಹಲವು ಕೃಷಿಕರಿಗೆ ಈ ಐಡಿ ಆಗದೇ ಇರುವುದು  ಈಗ ಸಮಸ್ಯೆಯಾಗಿದೆ.

Advertisement
Advertisement

ಈ ಬಾರಿ ಬೆಳೆ ವಿಮೆ ಪಾವತಿಗೆ FRUIT ID ಕಡ್ಡಾಯವಾಗಿದೆ.ಆದರೆ ಕೆಲವು ಕೃಷಿಕರಿಗೆ ಈ ಐಡಿ ಇಲ್ಲದ ಕಾರಣದಿಂದ ಅನೇಕ ಕೃಷಿಕರಿಗೆ ಬೆಳೆ ವಿಮೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಆದರೆ ವಿಮೆ ಕಂತು ಕಟ್ಟಲು ಜುಲೈ 31 ಕೊನೇ ದಿನವಾಗಿದೆ. ಹೀಗಾಗಿ ಈಗ ಗೊಂದಲ ಉಂಟಾಗಿದೆ.

ಈ ಬಾರಿ ಪಹಣಿಯಲ್ಲಿ  ಹೆಸರು ಇರುವ ಎಲ್ಲರದೂ ದಾಖಲೆ ಪತ್ರಗಳು ಬೇಕಿದೆ. ಅದರ ಜೊತೆಗೇ FRUIT ID ಕೂಡಾ ಕಡ್ಡಾಯವಾಗಿದೆ. ಗ್ರಾಮೀಣ ಭಾಗದಲ್ಲಿ, ಕೃಷಿಕರಲ್ಲಿ ಪಹಣಿಯಲ್ಲಿ ಹೆಸರು ಇರುವ ಎಲ್ಲರದೂ ಈ ಐಡಿ (ಫಾಮರ್‌ ಐಡಿ)ಯನ್ನು ಮಾಡಿಸಿರಲಿಲ್ಲ. ಈಗ ಬೆಳೆ ವಿಮೆಗಾಗಿ ಈ ಐಡಿ ರಚನೆಗೆ ಇಲಾಖೆಗೆ ಹೋದರೂ ತಕ್ಷಣವೇ ಈ ಐಡಿ ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ಜು.31 ರೊಳಗೆ ಕಷ್ಟವಿದೆ.

ಇದಕ್ಕಾಗಿ ಬೆಳೆವಿಮೆ ಪಾವತಿಯ ದಿನವನ್ನು ಮುಂದೂಡುವ ಅಗತ್ಯ ಇದೆ. ಅದರ ಜೊತೆಗೆ ಸರಳೀಕರಣದ ಜೊತೆಗೆ ಬೆಳೆವಿಮೆ ಪಾವತಿಗೆ ಅವಕಾಶ ನೀಡಬೇಕಾದ ಅಗತ್ಯ ಇದೆ.

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-06-2025 | ಜೂ.29 ರಿಂದ ಬೆಳೆಗಳಿಗೆ ಔಷಧಿ ಸಿಂಪಡಣೆಗೆ ಅವಕಾಶ ಸಿಗಬಹುದೇ..? | ಜೂನ್ ಕೊನೆಯಲ್ಲಿ ಮುಂಗಾರು ದುರ್ಬಲಗೊಳ್ಳಬಹುದಾ..?
June 23, 2025
1:26 PM
by: ಸಾಯಿಶೇಖರ್ ಕರಿಕಳ
ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ
June 23, 2025
1:18 PM
by: ದ ರೂರಲ್ ಮಿರರ್.ಕಾಂ
ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಆದ್ಯತೆ | ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮುನ್ನುಡಿ
June 23, 2025
12:03 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಳ
June 23, 2025
11:40 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group