15.10.21ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ದಕ್ಷಿಣ ಕನ್ನಡದ ಮಂಗಳೂರು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿಯ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ.
ಮೈಸೂರು (ಒಂದೆರಡು ಭಾಗಗಳಲ್ಲಿ), ಚಾಮರಾಜನಗರ (ಒಂದೆರಡು ಭಾಗಗಳಲ್ಲಿ), ರಾಮನಗರ, ಮಂಡ್ಯ, ಹಾಸನ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಪಾವಗಢ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲಿನ ವಾತಾವರಣದ ಮುನ್ಸೂಚನೆ ಇದೆ.
#WeatherUpdate pic.twitter.com/nx9ES8ms7g
— theruralmirror (@ruralmirror) October 14, 2021
ಮುಖ ತಿರುವಿದ ವಾಯುಭಾರ ಕುಸಿತ :
ವಾಯುಭಾರ ಕುಸಿತವು ಅರಬ್ಬಿ ಸಮುದ್ರದಲ್ಲಿ ದುರ್ಬಲವಾಗದ್ದರೂ ಕರಾವಳಿ ಕಡೆ ಇದ್ದಂತಹ ಮುಖವು ಉತ್ತರದ ಕಡೆಗೆ ತಿರುಗಿದ ಪರಿಣಾಮ ಗಾಳಿಯ ಒತ್ತಡವು ಭೂಮಿಯಿಂದ ಸಮುದ್ರದ ಕಡೆ ಬೀಸುತ್ತಿದೆ ಮತ್ತು ಮಳೆಯ ಪ್ರಮಾಣ ಕಡಿಮೆ ಆಗಿದೆ. ಇದು ಹಿಂಗಾರು ಚುರುಕುಗೊಳ್ಳಲು ಸಹಾಯವಾಗಬಹುದು.